ಬೆಂಗಳೂರು: ‘ಪ್ರತಿ ಅಂಧಕಾರಕ್ಕೂ ಒಂದು ಸೂರ್ಯೋದಯ ಇರುತ್ತೆ..’ ಎಂದ ರವಿ ಇಂದು ಮೂಡಲೇ ಇಲ್ಲ. ನೊಂದವರಲ್ಲಿ ಒಂದು ಹುರುಪು ಮೂಡಿಸಿ ಸ್ಫೂರ್ತಿ ನೀಡಲೆಂದೇ ರವಿ ಬೆಳಗೆರೆ ಅವರು ತಮ್ಮ ಆಡಿಯೋ ಸಿಡಿಯಲ್ಲಿ ಹೇಳಿದ್ದ ಪ್ರೇರಣೆಯ ಮಾತು ಇಂದು ವೈರಲ್ ಆಗುತ್ತಿದೆ. ಇನ್ನೊಬ್ಬರ ಸಾವನ್ನು ಹೇಗೆ ಸ್ವೀಕರಿಸಬೇಕು ಎಂದು ರವಿ ಬೆಳಗೆರೆ ಹೇಳಿದ್ದ ಮಾತುಗಳನ್ನೇ ಇಂದು ಈ ವಿಡಿಯೋ ರೂಪದಲ್ಲಿ ಹಂಚಿಕೊಂಡು ಅವರ ಅಭಿಮಾನಿಗಳು ತಮ್ಮ ನೆಚ್ಚಿನ ಲೇಖಕನ ಸಾವಿನ ನೋವನ್ನು ವ್ಯಕ್ತಪಡಿಸುತ್ತಿದ್ದಾರೆ.
https://www.facebook.com/VVani4U/videos/390223235460448