ರಾಣೆಬೆನ್ನೂರ: ಗುತ್ತೂರು ಸ್ವೀಕರಣ ಕೇಂದ್ರದಲ್ಲಿ ತುರ್ತು ನಿರ್ವಹಣೆ ಕೆಲಸ ಇರುವುದರಿಂದ ಫೆ. 28ರಂದು ಮಧ್ಯಾಹ್ನ 12 ಗಂಟೆಯಿಂದ ಸಂಜೆ 6ರವರೆಗೆ 110 ಕೆವಿ ಹೊಸಹೊನ್ನತ್ತಿ ಸ್ಟೇಷನ್ನಿಂದ ಹೊರಡುವ 11 ಕೆವಿ ನೀರಾವರಿ ಪಂಪಸೆಟ್ ಮಾರ್ಗಗಳಿಗೆ ಮತ್ತು 33 ಕೆವಿ ಗುಡುಗೂರು-ಮೈದೂರು ಸ್ಟೇಷನ್ನಿಂದ ಹೊರಡುವ ಎಲ್ಲ ನೀರಾವರಿ ಪಂಪಸೆಟ್ ಮಾರ್ಗಗಳಿಗೆ ವಿದ್ಯುತ್ ಸರಬರಾಜು ಇರುವುದಿಲ್ಲ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.