ಚಾಮರಾಜನಗರ: ಇಂದು ಬೆಳಗ್ಗೆಯಿಂದ ಬಂಡೀಪುರ ಚಮ್ಮನಹಳ್ಳ ಬಳಿ ಸಾಕ್ಷ್ಯಚಿತ್ರದ ಶೂಟಿಂಗ್ನಲ್ಲಿ ತೊಡಗಿದ್ದ ಸೂಪರ್ಸ್ಟಾರ್ ರಜನೀಕಾಂತ್ ಅವರು ಮೈಸೂರಿಗೆ ತೆರಳಿ ಅಲ್ಲಿಂದ ಚೆನ್ನೈಗೆ ವಾಪಸಾಗಿದ್ದಾರೆ ಎನ್ನಲಾಗಿದೆ.
ಖ್ಯಾತ ವನ್ಯಜೀವಿ ಸಾಹಸಿ ನಿರ್ದೇಶಕ ಬೇರ್ ಗ್ರಿಲ್ಸ್ ನಿರ್ದೇಶನ ಮಾಡುತ್ತಿರುವ ಮ್ಯಾನ್ ವರ್ಸಸ್ ವೈಲ್ಡ್ ಸಾಕ್ಷ್ಯ ಚಿತ್ರದಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ಮತ್ತು ರಜನೀಕಾಂತ್ ಅವರು ಅಭಿನಯಿಸುತ್ತಿದ್ದಾರೆ. ಅದರ ಚಿತ್ರೀಕರಣ ಇಂದು ಬೆಳಗ್ಗೆಯಿಂದಲೂ ಚಮ್ಮನಹಳ್ಳ ಬಳಿ ನಡೆಯುತ್ತಿತ್ತು.
ರಜನೀಕಾಂತ್ ಅವರು ಮೈಸೂರಿಗೆ ಹೊರಡುವುದಕ್ಕೂ ಮೊದಲು ಬಂಡೀಪುರ ಅರಣ್ಯ ಸಿಬ್ಬಂದಿ ಅವರೊಂದಿಗೆ ಫೋಟೋ ತೆಗೆಸಿಕೊಂಡಿದ್ದಾರೆ.