ಕಲಬುರಗಿ: ನಗರ ಮತ್ತು ಜಿಲ್ಲೆಯ ಎಲ್ಲಡೆ ಶುಕ್ರವಾರ ನಸುಕಿನ ಜಾವದಿಂದ ಗುಡುಗು ಮಿಂಚು ಸಹಿತ ಮಳೆಯಾಗುತ್ತಿದೆ. ಶನಿವಾರ ಸಂಜೆಯಿಂದಲೇ ಮೋಡಕವಿದ ವಾತಾವರಣ ನಿರ್ಮಾಣವಾಗಿ ಕೆಲವಡೆ ಮಳೆಯಾಗಲು ಶುರುವಾಯಿತು.
ಈ ಮಧ್ಯ ಅಫಜಲಪುರ ತಾಲೂಕಿನ ಭೋಸಗಾ (ಬಿ) ಗ್ರಾಮದಲ್ಲಿ ಗುರುವಾರ ರಾತ್ರಿ ಸಿಡಲು ಬಡಿದು ಬೋಗಪ್ಪ ಮಾಂಗ್ (೫೮) ಎಂಬ ರೈತ ಮೃತಪಟ್ಟಿದ್ದಾರೆ.
ವಾಯ್ಹುಭಾರ ಕುಸಿತದಿಂದಾಗಿ ನಾಡಿನ ಹಲವು ಕಡೆಗಳಲ್ಲಿ ಎರಡು ದಿನ ಮಳೆಯಾಗಲಿದೆ ಎಂದು ಹವಾಮಾನ ತಜ್ಞರು ಮುನ್ಸೂಚನೆ ನೀಡಿದದರು.