ಹುಬ್ಬಳ್ಳಿ :ಕ್ಯಾಸಲ್ರಾಕ್ ಮತ್ತು ಕರಂಜೊಲ್ ನಿಲ್ದಾಣಗಳ ಮಧ್ಯೆ ಭೂಕುಸಿತದಿಂದಾಗಿ ಈ ಮಾರ್ಗದ ವಿವಿಧ ರೈಲುಗಳ ಸಂಚಾರವನ್ನು ತಾತ್ಕಾಲಿಕವಾಗಿ ರದ್ದು ಹಾಗೂ ತಾತ್ಕಾಲಿಕ ರದ್ದುಗೊಳಿಸಲಾಗಿದೆ.
ಜು. 30ರಂದು ಯಶವಂತಪುರ – ವಾಸ್ಕೊ ಡೈಲಿ ಎಕ್ಸ್ಪ್ರೆಸ್ ಹಾಗೂ ವಾಸ್ಕೊ- ಯಶವಂತಪುರ ಡೈಲಿ ಎಕ್ಸ್ಪ್ರೆಸ್ ರೈಲುಗಳ ಸಂಚಾರ ರದ್ದುಗೊಳಿಸಲಾಗಿದೆ.
ಭಾಗಶಃ ರದ್ದು : ಜು. 28ರಂದು ಹಜರತ್ ನಿಜಾಮುದ್ದಿನ್ – ವಾಸ್ಕೊ ಡೈಲಿ ಸೂಪರ್ ಫಾಸ್ಟ್ ಎಕ್ಸ್ಪ್ರೆಸ್ ರೈಲು ಬೆಳಗಾವಿವರೆಗೆ ಮಾತ್ರ ಸಂಚರಿಸಲಿದೆ. ಜು. 30ರಂದು ವಾಸ್ಕೊ – ಹಜರತ್ ನಿಜಾಮುದ್ದಿನ್ ಎಕ್ಸ್ಪ್ರೆಸ್ ರೈಲು ಬೆಳಗಾವಿಯಿಂದ ಸಂಚಾರ ಪ್ರಾರಂಭಿಸಲಿದೆ.