More

    ರಾಚಯ್ಯ ನಗರ ಎಸ್​ಟಿಎಸ್ ತಂಡಕ್ಕೆ ಪ್ರಶಸ್ತಿ

    ನರಗುಂದ: ನೂರಾನಿ ಲಗಾನ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ತಾಲೂಕು ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ನರಗುಂದ ತಾಲೂಕು ಪ್ರೀಮಿಯರ್ ಲೀಗ್ (ಎನ್​ಟಿಪಿಎಲ್) ಕ್ರಿಕೆಟ್ ಟೂರ್ನಾಮೆಂಟ್​ನಲ್ಲಿ ರಾಚಯ್ಯ ನಗರ ಬಡಾವಣೆಯ ಎಸ್​ಟಿಎಸ್ ತಂಡ ಪ್ರಥಮ ಸ್ಥಾನ ಪಡೆದು 50,001 ರೂಪಾಯಿ ನಗದು ಹಾಗೂ ಟ್ರೋಫಿ ತನ್ನದಾಗಿಸಿಕೊಂಡಿದೆ.

    ದ್ವಿತೀಯ ಸ್ಥಾನ ಪಡೆದ ಹಾಲಭಾವಿಕೆರಿ ಬಡಾವಣೆಯ ವಿಜಯ ಸಿಸಿ ತಂಡಕ್ಕೆ 25,001 ರೂಪಾಯಿ ನಗದು ಹಾಗೂ ಕಪ್, ತೃತೀಯ ಸ್ಥಾನ ಪಡೆದ ಲೋಧಿಗಲ್ಲಿ ಬಡಾವಣೆಯ ನೂರಾನಿ ಸಿಸಿ ತಂಡಕ್ಕೆ 10,001 ರೂಪಾಯಿ ನಗದು ಹಾಗೂ ಟ್ರೋಫಿ, ಚತುರ್ಥ ಸ್ಥಾನ ಪಡೆದ ನೀರಾವರಿ ಕಾಲನಿಯ ಆಜಾದ್ ಹಿಂದ್ ಸಿಸಿ ತಂಡಕ್ಕೆ 5,001 ರೂಪಾಯಿ ನಗದು ಹಾಗೂ ಟ್ರೋಫಿ ನೀಡಲಾಯಿತು.

    ವಿಜೇತ ತಂಡಗಳಿಗೆ ಬಹುಮಾನ ವಿತರಿಸಿ ಮಾತನಾಡಿದ ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಡಾ. ಸಂಗಮೇಶ ಕೊಳ್ಳಿಯವರ, ಕ್ರೀಡೆಗಳಿಂದ ಮನುಷ್ಯ ದೈಹಿಕ ಮತ್ತು ಮಾನಸಿಕವಾಗಿ ಸದೃಢನಾಗುತ್ತಾನೆ. ದೇಶದ ಯಾವುದೇ ಕ್ರೀಡೆಗಳಿರಲಿ ಕ್ರೀಡಾ ಮನೋಭಾವದಿಂದ ಪಾಲ್ಗೊಳ್ಳಬೇಕು. ಸೋಲು-ಗೆಲುವು ಮುಖ್ಯವಲ್ಲ. ಕ್ರೀಡೆಯಲ್ಲಿ ಸೋಲು, ಗೆಲುವನ್ನು ಸಮ ಮನಸ್ಥಿತಿಯಲ್ಲಿ ತೆಗೆದುಕೊಳ್ಳಬೇಕು ಎಂದು ಹೇಳಿದರು.

    ಶಂಕರ ಪಲ್ಟನಕರ, ನಂದು ಪಾಟೀಲ, ಸುನೀಲ ಮೇಟಿ, ಎಎಸ್​ಐ ವಿ.ಜಿ. ಪವಾರ, ದ್ಯಾಮಣ್ಣ ಸವದತ್ತಿ, ಎಫ್.ವೈ. ದೊಡಮನಿ, ಶಿವಾನಂದ ಬನಹಟ್ಟಿ, ಕಣಕೀಕೊಪ್ಪ ಗ್ರಾಪಂ ಉಪಾಧ್ಯಕ್ಷ ವಿನಯಕುಮಾರ ಪಾಟೀಲ, ಪುಂಡಲೀಕಪ್ಪ ಹುಲಜೋಗಿ, ಬಸವರಾಜ ಪವಾರ, ಮಲ್ಲಪ್ಪ ಅಬ್ಬಿಗೇರಿ, ಬಸವರಾಜ ಪಾಟೀಲ, ಸಂತೋಷ ಪಾಟೀಲ, ಬಾಬುಗೌಡ ಪಾಟೀಲ, ಮಂಜು ಮಾಲಗತ್ತಿ, ಹನುಮಂತಗೌಡ ಭರಮಗೌಡ್ರ, ನಾಗರಾಜ ಹಡಪದ, ಪ್ರಸಾದ ಮುತ್ತಿನ, ಬಾಬುಸಾಬ್ ಅತ್ತಾರ, ಮೋಹನ ಲಮಾಣಿ, ಮಂಜು ಮಾದರ, ಶರಣಪ್ಪ ಹೂಗಾರ, ಮಂಜುನಾಥ ಕುರಿಯವರ ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts