ವಾರಾಣಸಿ: ಟೇಕಾಫ್ ಆದ ಬೆನ್ನಲ್ಲೇ ಪಕ್ಷಿ ಡಿಕ್ಕಿಯಾದ ಪರಿಣಾಮ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿದ್ದ ಹೆಲಿಕಾಪ್ಟರ್ ಅನ್ನು ತುರ್ತು ಭೂಸ್ಪರ್ಶ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಿಎಂ ಯೋಗಿ ಆದಿತ್ಯನಾಥ್ ಅವರು ಎರಡು ದಿನಗಳ ವಾರಾಣಸಿ ಪ್ರವಾಸದಲ್ಲಿದ್ದರು. ಇಂದು ವಾರಾಣಸಿಯಿಂದ ಲಖನೌ ಮೂಲದ ಹೆಲಿಕಾಪ್ಟರ್ನಿಂದ ಲಖನೌ ಕಡೆಗೆ ಹೊರಟಾಗ ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ಪಕ್ಷಿಯೊಂದು ಡಿಕ್ಕಿ ಹೊಡೆಯಿತು. ಇದಾದ ಬಳಿಕ ಪೈಲಟ್ ತುರ್ತು ಭೂಸ್ಪರ್ಶಕೆ ಮನವಿ ಮಾಡಿ ವಾರಾಣಸಿಯಲ್ಲೇ ಲ್ಯಾಂಡಿಂಗ್ ಮಾಡಿದ್ದಾರೆ.
ತುರ್ತು ಭೂಸ್ಪರ್ಶದ ಬಳಿಕ ಸಿಎಂ ಯೋಗಿ ಆದಿತ್ಯನಾಥ್ ಅವರು ವಾರಾಣಸಿ ವಿಮಾನ ನಿಲ್ದಾಣದಿಂದ ಲಖನೌಗೆ ಹಾರಿದರು ಎಂದು ಜಿಲ್ಲಾಧಿಕಾರಿ ಕುಶಾಲ್ರಾಜ್ ಶರ್ಮಾ ಮಾಹಿತಿ ನೀಡಿದರು. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ. (ಏಜೆನ್ಸೀಸ್)
ಬ್ರಾಲೆಸ್ ಆಗಿ ಸಾರ್ವಜನಿಕ ಪ್ರದೇಶಕ್ಕೆ ಎಂಟ್ರಿ ಕೊಟ್ಟ ಪೂನಂ ಪಾಂಡೆ: ನೆಟ್ಟಿಗರಿಂದ ಹಿಗ್ಗಾಮುಗ್ಗಾ ತರಾಟೆ
ಪತಿಯ ಸರ್ಕಾರದ ಉಳಿವಿಗೆ ರಾಜಕೀಯ ಅಖಾಡಕ್ಕಿಳಿದ ಉದ್ಧವ್ ಠಾಕ್ರೆ ಪತ್ನಿ: ಈ ಪ್ಲಾನ್ ವರ್ಕೌಟ್ ಆಗುತ್ತಾ?
ಮೊದಲ ಬಾರಿಗೆ ಅಶ್ಲೀಲ ದೃಶ್ಯದಲ್ಲಿ ನಟನೆ: ನಟಿ ಇಶಾ ಬಗ್ಗೆ ಸ್ಫೋಟಕ ಹೇಳಿಕೆ ಕೊಟ್ಟ ಬಾಬಿ ಡಿಯೋಲ್