More

    ಮಧ್ಯರಾತ್ರಿ ದಿಢೀರ್​ ದಾಳಿ ಮಾಡಿದ ದುಷ್ಕರ್ಮಿಗಳಿಂದ ಗಂಡನ ಪ್ರಾಣ ಉಳಿಸಿದ ಪತ್ನಿಯ ಸಾಹಸವೇ ರೋಚಕ!

    ಹೈದರಾಬಾದ್​: ಹೆಂಡತಿಯಾದವಳು ತನ್ನ ಮಾಂಗಲ್ಯ ಭಾಗ್ಯ ಉಳಿಸಿಕೊಳ್ಳಲು ಯಾವುದೇ ಸಾಹಸಕ್ಕೂ ಮುಂದಾಗುತ್ತಾಳೆ ಎನ್ನುವುದಕ್ಕೆ ತೆಲಂಗಾಣದ ವಾರಂಗಲ್​ ನಗರದಲ್ಲಿ ನಡೆದಿರುವ ಈ ಒಂದು ಘಟನೆ ತಾಜಾ ಉದಾಹರಣೆಯಾಗಿದೆ. ಮಧ್ಯರಾತ್ರಿ ಗಂಡನನ್ನು ಕೊಲ್ಲಲು ಬಂದ ದುಷ್ಕರ್ಮಿಗಳ ವಿರುದ್ಧ ಉಪಾಯದಿಂದ ಹೋರಾಡಿ ತನ್ನ ಮಾಂಗಲ್ಯ ಭಾಗ್ಯವನ್ನು ಮಹಿಳೆ ಉಳಿಸಿಕೊಂಡಿದ್ದು, ಈ ಸುದ್ದಿ ಇದೀಗ ವಾರಂಗಲ್​ ನಗರದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

    ವೇಮುಲ ಭೊಪಾಲ್​ ಎಂಬಾತ ವಾರಂಗಲ್​ ಜಿಲ್ಲಾ ಲಾರಿ ಸಂಘದ ಅಧ್ಯಕ್ಷರಾಗಿದ್ದು, ಶಂಭುನಿಪೇಟೆಯಲ್ಲಿ ವಾಸವಿದ್ದಾರೆ. ಬುಧವಾರ ಮಧ್ಯರಾತ್ರಿ ಆಟೋದಲ್ಲಿ ಬಂದು ನಾಲ್ವರಲ್ಲಿ ಮೂವರು ಭೊಪಾಲ್​ ಮನೆಯ ಬಾಗಿಲನ್ನು ಮುರಿದು ಒಳಗೆ ನುಗ್ಗಿ ಏಕಾಏಕಿ ಕೊಲ್ಲಲು ಯತ್ನಿಸಿದ್ದಾರೆ.

    ಗಂಡ ಕೂಗಿಕೊಳ್ಳುವುದನ್ನು ಕೇಳಿ ಎಚ್ಚರಗೊಂಡ ಭೊಪಾಲ್​ ಪತ್ನಿ ಕಲ್ಯಾಣಿ, ದುಷ್ಕರ್ಮಿಗಳು ಹಲ್ಲೆ ಮಾಡುತ್ತಿರುವುದನ್ನು ನೋಡಿ ತಕ್ಷಣ ಅಡುಗೆ ಮನೆ ಹೋಗಿ ಮೆಣಸಿನ ಪುಡಿಯನ್ನು ತಂದು ದುಷ್ಕರ್ಮಿಗಳ ಕಣ್ಣಿಗೆ ಎರಚಿದ್ದಾಳೆ. ಬಳಿಕ ಜೋರಾಗಿ ಕೂಗಿಕೊಳ್ಳಲು ಆರಂಭಿಸಿದಾಗ ಹೆದರಿದ ದುಷ್ಕರ್ಮಿಗಳು ಅಲ್ಲಿಂದ ಪರಾರಿಯಾಗಿದ್ದಾರೆ. ಕಲ್ಯಾಣಿ ಕೂಗಿದನ್ನು ಕೇಳಿ ಎಚ್ಚರಗೊಂಡ ಭೊಪಾಲ್​ ಸಹೋದರ ಕ್ರಾಂತಿಕುಮಾರ್​ ತಕ್ಷಣ ಅಲ್ಲಿಗೆ ಹೋಗಿ ದುಷ್ಕರ್ಮಿಗಳಲ್ಲಿ ಒಬ್ಬನಾದ ರಂಜಿತ್​ ಎಂಬುವನನ್ನು ಹಿಡಿದುಕೊಂಡಿದ್ದಾರೆ.

    ಕ್ರಾಂತಿಕುಮಾರ್​ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಕೊಲೆ ಯತ್ನ ಪ್ರಕರಣವನ್ನು ದಾಖಲಿಸಿದ್ದು, ತನಿಖೆ ಆರಂಭಿಸಿರುವ ಪೊಲೀಸರು ಇನ್ನುಳಿದ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಜಮೀನು ವಿಚಾರವಾಗಿ ತಕರಾರು ಇದ್ದು ವಿರೋಧಿ ಬಣದವರು ಈ ದುಷ್ಕೃತ್ಯ ಮಾಡಿರಬಹುದು ಎಂದು ಭೊಪಾಲ್​ ಮತ್ತು ಕ್ರಾಂತಿಕುಮಾರ್​ ದೂರು ನೀಡಿದ್ದು, ಪ್ರಕರಣವನ್ನು ಪೊಲೀಸರು ಗಂಭೀರವಾಗಿ ತೆಗೆದುಕೊಂಡಿದ್ದಾರೆ. (ಏಜೆನ್ಸೀಸ್​)

    ಮತ್ತೆ ಒಂದಾಗ್ತಾರಾ ಮಾಜಿ ತಾರಾದಂಪತಿ? ಸಮಂತಾರ ಈ ನಡೆಯಿಂದ ಅಭಿಮಾನಿಗಳಲ್ಲಿ ಚಿಗುರಿದ ಆಸೆ!

    ಕರೊನಾ ಹಿನ್ನೆಲೆ ನಿರ್ಬಂಧಗಳ ಕುರಿತು ವೈಜ್ಞಾನಿಕ ನೆಲೆಯಲ್ಲಿ ತೀರ್ಮಾನ: ಸಿಎಂ ಬೊಮ್ಮಾಯಿ

    ವಿಆರ್​ಎಲ್​ ಹೆಸರಲ್ಲಿ ವಂಚನೆ: ನಕಲಿ ವೆಬ್​​ಸೈಟ್​ ಸೃಷ್ಟಿಸಿ ಗ್ರಾಹಕರಿಗೆ ಮೋಸ, ಎಫ್​ಐಆರ್​ ದಾಖಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts