ಹೈದರಾಬಾದ್: ಪೋಷಕ ಪಾತ್ರಗಳಿಂದ ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವ ನಟಿ ಪವಿತ್ರಾ ಲೋಕೇಶ್ ಅವರು ಇತ್ತೀಚೆಗೆ ನಟ ನರೇಶ್ ಜತೆಗಿನ ಸಂಬಂಧದ ವಿಚಾರದಲ್ಲಿ ಭಾರಿ ವಿವಾದವನ್ನು ಸೃಷ್ಟಿ ಮಾಡಿಕೊಂಡಿರುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಇದೀಗ ಇಬ್ಬರ ಸಂಬಂಧದ ಬಗ್ಗೆ ಹೊಸ ಸುದ್ದಿಯೊಂದು ಕೇಳಿಬಂದಿದೆ. ಟಾಲಿವುಡ್ನ ಸಿನಿ ಗಲ್ಲಿಯಲ್ಲಿ ಈ ಸುದ್ದಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.
ಯಾವುದು ಆ ಸುದ್ದಿ ಅಂದರೆ, ನರೇಶ್ ಮತ್ತು ಪವಿತ್ರಾ ಲೋಕೇಶ್ ನಡುವೆ ನಡೆದಿರುವ ಒಪ್ಪಂದದ ಬಗ್ಗೆ. ಹೌದು, ಇಬ್ಬರ ನಡುವೆ ಒಂದು ಒಪ್ಪಂದ ಆಗಿದೆಯಂತೆ. ಇಬ್ಬರು ಶೀಘ್ರದಲ್ಲೇ ಮದುವೆ ಆಗುತ್ತಾರೆ ಅನ್ನುವ ಸುದ್ದಿ ಹರಿದಾಡುತ್ತಿರುವ ನಡುವೆಯೇ ಅವರಿಬ್ಬರ ಸಂಬಂಧದ ಶಾಕಿಂಗ್ ರಹಸ್ಯವೊಂದು ಬಯಲಾಗಿದೆ.
ನರೇಶ್ ಮತ್ತು ಪವಿತ್ರಾ ಅವರು ಒಪ್ಪಂದದ ಅಡಿಯಲ್ಲಿ ಲಿವಿಂಗ್ ಟುಗೆದರ್ನಲ್ಲಿದ್ದಾರೆ ಎಂಬ ಸಂಗತಿ ಇದೀಗ ಬಯಲಾಗಿದೆ. ಮದುವೆ ಆಗುವ ಯಾವುದೇ ಯೋಚನೆ ಇಬ್ಬರ ನಡುವೆ ಇಲ್ಲವಂತೆ. ಡೇಟಿಂಗ್ ಮಾಡಿಕೊಂಡು ಲೈಫ್ ಎಂಜಾಯ್ ಮಾಡುವುದೇ ಇಬ್ಬರ ನಡುವಿನ ಒಪ್ಪಂದ ಎಂಬ ಮಾತು ಟಾಲಿವುಡ್ನಲ್ಲಿ ಜೋರಾಗಿ ಕೇಳಿಬರುತ್ತಿದೆ. ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಆದರೆ, ಬೆಂಕಿ ಇಲ್ಲದೇ ಹೊಗೆ ಆಡುವುದಿಲ್ಲ ಎಂಬ ಮಾತನ್ನೂ ಮರೆಯುವಂತಿಲ್ಲ.
ಒಪ್ಪಂದದ ಪ್ರಕಾರ, ನರೇಶ್ ಅವರು ಪವಿತ್ರಾ ಅವರಿಗೆ ತಿಂಗಳಿಗೆ 25 ಲಕ್ಷ ಕೊಡುತ್ತಾರಂತೆ. ಒಂದ ವೇಳೆ ಒಪ್ಪಂದದ ಅವಧಿಯಲ್ಲಿ ಬೇರೆ ಮಹಿಳೆಯ ಜೊತೆ ನರೇಶ್ ಅವರು ಸಂಬಂಧ ಇಟ್ಟುಕೊಂಡರೆ, ಪರಿಹಾರ ಮೊತ್ತವಾಗಿ 50 ಕೋಟಿ ರೂಪಾಯಿ ಕೊಡಬೇಕಂತೆ. ಇದಿಷ್ಟು ನರೇಶ್ ಮತ್ತು ಪವಿತ್ರಾ ಸಂಬಂಧದ ಕುರಿತು ಹರಿದಾಡುತ್ತಿರುವ ಸುದ್ದಿ, ಇದು ಎಷ್ಟು ನಿಜವೋ ಎಂಬುದನ್ನು ಅವರೇ ಸ್ಪಷ್ಟಪಡಿಸಬೇಕಿದೆ.
ಈಗಾಗಲೇ ನರೇಶ್ ಕುಟುಂಬದ ಜಗಳ ಬೀದಿಗೆ ಬಂದಿರುವುದು ಎಲ್ಲರಿಗೂ ತಿಳಿದಿದೆ. ಪವಿತ್ರಾ ಲೋಕೇಶ್ ಮತ್ತು ನಟ ನರೇಶ್ ನಡುವೆ ಅಕ್ರಮ ಸಂಬಂಧ ಇದೆ ಎಂದು ನರೇಶ್ ಅವರ ಮೂರನೇ ಪತ್ನಿ ರಮ್ಯಾ ಆರೋಪ ಮಾಡಿದ್ದಾರೆ. ನರೇಶ್ ತೆಲುಗು ಸೂಪರ್ ಸ್ಟಾರ್ ಕೃಷ್ಣ ಅವರ ಮಲ ಮಗ. ಕೃಷ್ಣ ಅವರು ಸೂಪರ್ ಸ್ಟಾರ್ ಮಹೇಶ್ ಬಾಬು ಅವರ ತಂದೆ. ನರೇಶ್ ಮತ್ತು ಪವಿತ್ರಾ ಇಬ್ಬರು ಮದುವೆ ಆಗುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದರ ನಡುವೆ ನನಗೆ ವಂಚಿಸಿದ್ದಾರೆ ಮತ್ತು ಸಾಕಷ್ಟು ಕಿರುಕುಳ ನೀಡಿದ್ದಾರೆಂದು ರಮ್ಯಾ, ನರೇಶ್ ವಿರುದ್ಧ ಆರೋಪ ಮಾಡಿದ್ದಾರೆ.
ಅದಕ್ಕೆ ಪುಷ್ಠಿ ನೀಡುವಂತೆ ಜುಲೈ 2ರಂದು ರಾತ್ರಿ ಮೈಸೂರಿನ ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ, ಹೋಟೆಲ್ ಒಂದರಲ್ಲಿ ಒಂದೇ ಕೋಣೆಯಲ್ಲಿ ನರೇಶ್ ಮತ್ತು ಪವಿತ್ರ ಲೋಕೇಶ್ ಉಳಿದುಕೊಂಡಿದ್ದರು. ಇಡೀ ರಾತ್ರಿ ಒಂದೇ ರೂಮಿನಲ್ಲಿ ಇದ್ದರು. ಈ ವಿಚಾರ ರಮ್ಯಾ ಅವರಿಗೆ ತಿಳಿದು ಹೋಟೆಲ್ಗೆ ಬಂದು ಜಗಳವಾಡಿದ್ದರು. ಇದು ಭಾರೀ ಸುದ್ದಿಯಾಗಿತ್ತು. ಇಬ್ಬರ ನಡುವಿನ ಸಂಬಂಧಕ್ಕೆ ಮೈಸೂರಿನ ಘಟನೆ ಸಾಕ್ಷಿಯಾಗಿತ್ತು. (ಏಜೆನ್ಸೀಸ್)
22 ವರ್ಷದ ಪ್ರೇಯಸಿಗೆ ಕಾರ್ ಗಿಫ್ಟ್ ಮಾಡಲು ಪತ್ನಿಯ ಚಿನ್ನಾಭರಣ ಕದ್ದ 44 ವರ್ಷದ ವ್ಯಕ್ತಿಗೆ ಕಾದಿತ್ತು ಶಾಕ್!
ಚಾಮರಾಜನಗರ ಉಪನ್ಯಾಸಕಿ ದುರಂತ ಅಂತ್ಯ: ಗೊಂದಲದ ಗೂಡಿಗೆ ಸಿಲುಕಿದ ಚಂದನಾ… ಡೆತ್ನೋಟಲ್ಲಿದೆ ಸಾವಿನ ಕಾರಣ
ಒಂದು ಮಗುವಿನ ತಂದೆಯೊಂದಿಗೆ ಸಂಬಂಧ! ವೈಯಕ್ತಿಕ ಜೀವನದ ಗುಟ್ಟು ಬಿಚ್ಚಿಟ್ಟ ಜಯಶ್ರೀ ಆರಾಧ್ಯ