More

    25 ಲಕ್ಷ ರೂಪಾಯಿದ್ದೇ ಗುಸುಗುಸು… ನರೇಶ್​-ಪವಿತ್ರಾ ಬಗ್ಗೆ ಟಾಲಿವುಟ್​ನಲ್ಲಿ ಹರಿದಾಡ್ತಿದೆ‌ ಸೆನ್ಸೇಷನಲ್‌ ನ್ಯೂಸ್

    ಹೈದರಾಬಾದ್​: ಪೋಷಕ ಪಾತ್ರಗಳಿಂದ ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವ ನಟಿ ಪವಿತ್ರಾ ಲೋಕೇಶ್ ಅವರು ಇತ್ತೀಚೆಗೆ ನಟ ನರೇಶ್​ ಜತೆಗಿನ ಸಂಬಂಧದ ವಿಚಾರದಲ್ಲಿ ಭಾರಿ ವಿವಾದವನ್ನು ಸೃಷ್ಟಿ ಮಾಡಿಕೊಂಡಿರುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಇದೀಗ ಇಬ್ಬರ ಸಂಬಂಧದ ಬಗ್ಗೆ ಹೊಸ ಸುದ್ದಿಯೊಂದು ಕೇಳಿಬಂದಿದೆ. ಟಾಲಿವುಡ್​ನ ಸಿನಿ ಗಲ್ಲಿಯಲ್ಲಿ ಈ ಸುದ್ದಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

    ಯಾವುದು ಆ ಸುದ್ದಿ ಅಂದರೆ, ನರೇಶ್​ ಮತ್ತು ಪವಿತ್ರಾ ಲೋಕೇಶ್​ ನಡುವೆ ನಡೆದಿರುವ ಒಪ್ಪಂದದ ಬಗ್ಗೆ. ಹೌದು, ಇಬ್ಬರ ನಡುವೆ ಒಂದು ಒಪ್ಪಂದ ಆಗಿದೆಯಂತೆ. ಇಬ್ಬರು ಶೀಘ್ರದಲ್ಲೇ ಮದುವೆ ಆಗುತ್ತಾರೆ ಅನ್ನುವ ಸುದ್ದಿ ಹರಿದಾಡುತ್ತಿರುವ ನಡುವೆಯೇ ಅವರಿಬ್ಬರ ಸಂಬಂಧದ ಶಾಕಿಂಗ್​ ರಹಸ್ಯವೊಂದು ಬಯಲಾಗಿದೆ.

    ನರೇಶ್​ ಮತ್ತು ಪವಿತ್ರಾ ಅವರು ಒಪ್ಪಂದದ ಅಡಿಯಲ್ಲಿ ಲಿವಿಂಗ್​ ಟುಗೆದರ್​ನಲ್ಲಿದ್ದಾರೆ ಎಂಬ ಸಂಗತಿ ಇದೀಗ ಬಯಲಾಗಿದೆ. ಮದುವೆ ಆಗುವ ಯಾವುದೇ ಯೋಚನೆ ಇಬ್ಬರ ನಡುವೆ ಇಲ್ಲವಂತೆ. ಡೇಟಿಂಗ್​ ಮಾಡಿಕೊಂಡು ಲೈಫ್​ ಎಂಜಾಯ್​ ಮಾಡುವುದೇ ಇಬ್ಬರ ನಡುವಿನ ಒಪ್ಪಂದ ಎಂಬ ಮಾತು ಟಾಲಿವುಡ್​ನಲ್ಲಿ ಜೋರಾಗಿ ಕೇಳಿಬರುತ್ತಿದೆ. ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಆದರೆ, ಬೆಂಕಿ ಇಲ್ಲದೇ ಹೊಗೆ ಆಡುವುದಿಲ್ಲ ಎಂಬ ಮಾತನ್ನೂ ಮರೆಯುವಂತಿಲ್ಲ.

    ಒಪ್ಪಂದದ ಪ್ರಕಾರ, ನರೇಶ್​ ಅವರು ಪವಿತ್ರಾ ಅವರಿಗೆ ತಿಂಗಳಿಗೆ 25 ಲಕ್ಷ ಕೊಡುತ್ತಾರಂತೆ. ಒಂದ ವೇಳೆ ಒಪ್ಪಂದದ ಅವಧಿಯಲ್ಲಿ ಬೇರೆ ಮಹಿಳೆಯ ಜೊತೆ ನರೇಶ್​ ಅವರು ಸಂಬಂಧ ಇಟ್ಟುಕೊಂಡರೆ, ಪರಿಹಾರ ಮೊತ್ತವಾಗಿ 50 ಕೋಟಿ ರೂಪಾಯಿ ಕೊಡಬೇಕಂತೆ. ಇದಿಷ್ಟು ನರೇಶ್​ ಮತ್ತು ಪವಿತ್ರಾ ಸಂಬಂಧದ ಕುರಿತು ಹರಿದಾಡುತ್ತಿರುವ ಸುದ್ದಿ, ಇದು ಎಷ್ಟು ನಿಜವೋ ಎಂಬುದನ್ನು ಅವರೇ ಸ್ಪಷ್ಟಪಡಿಸಬೇಕಿದೆ.

    ಈಗಾಗಲೇ ನರೇಶ್​ ಕುಟುಂಬದ ಜಗಳ ಬೀದಿಗೆ ಬಂದಿರುವುದು ಎಲ್ಲರಿಗೂ ತಿಳಿದಿದೆ. ಪವಿತ್ರಾ ಲೋಕೇಶ್​ ಮತ್ತು ನಟ ನರೇಶ್​ ನಡುವೆ ಅಕ್ರಮ ಸಂಬಂಧ ಇದೆ ಎಂದು ನರೇಶ್​ ಅವರ ಮೂರನೇ ಪತ್ನಿ ರಮ್ಯಾ ಆರೋಪ ಮಾಡಿದ್ದಾರೆ. ನರೇಶ್​ ತೆಲುಗು ಸೂಪರ್​ ಸ್ಟಾರ್​ ಕೃಷ್ಣ ಅವರ ಮಲ ಮಗ. ಕೃಷ್ಣ ಅವರು ಸೂಪರ್​ ಸ್ಟಾರ್​ ಮಹೇಶ್​ ಬಾಬು ಅವರ ತಂದೆ. ನರೇಶ್​ ಮತ್ತು ಪವಿತ್ರಾ ಇಬ್ಬರು ಮದುವೆ ಆಗುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದರ ನಡುವೆ ನನಗೆ ವಂಚಿಸಿದ್ದಾರೆ ಮತ್ತು ಸಾಕಷ್ಟು ಕಿರುಕುಳ ನೀಡಿದ್ದಾರೆಂದು ರಮ್ಯಾ, ನರೇಶ್​ ವಿರುದ್ಧ ಆರೋಪ ಮಾಡಿದ್ದಾರೆ.

    ಅದಕ್ಕೆ ಪುಷ್ಠಿ ನೀಡುವಂತೆ ಜುಲೈ 2ರಂದು ರಾತ್ರಿ ಮೈಸೂರಿನ ವಿವಿ ಪುರಂ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿ, ಹೋಟೆಲ್​ ಒಂದರಲ್ಲಿ ಒಂದೇ ಕೋಣೆಯಲ್ಲಿ ನರೇಶ್​ ಮತ್ತು ಪವಿತ್ರ ಲೋಕೇಶ್​ ಉಳಿದುಕೊಂಡಿದ್ದರು. ಇಡೀ ರಾತ್ರಿ ಒಂದೇ ರೂಮಿನಲ್ಲಿ ಇದ್ದರು. ಈ ವಿಚಾರ ರಮ್ಯಾ ಅವರಿಗೆ ತಿಳಿದು ಹೋಟೆಲ್​ಗೆ ಬಂದು ಜಗಳವಾಡಿದ್ದರು. ಇದು ಭಾರೀ ಸುದ್ದಿಯಾಗಿತ್ತು. ಇಬ್ಬರ ನಡುವಿನ ಸಂಬಂಧಕ್ಕೆ ಮೈಸೂರಿನ ಘಟನೆ ಸಾಕ್ಷಿಯಾಗಿತ್ತು. (ಏಜೆನ್ಸೀಸ್​)

    22 ವರ್ಷದ ಪ್ರೇಯಸಿಗೆ ಕಾರ್​ ಗಿಫ್ಟ್​ ಮಾಡಲು ಪತ್ನಿಯ ಚಿನ್ನಾಭರಣ ಕದ್ದ 44 ವರ್ಷದ ವ್ಯಕ್ತಿಗೆ ಕಾದಿತ್ತು ಶಾಕ್​!

    ಚಾಮರಾಜನಗರ ಉಪನ್ಯಾಸಕಿ ದುರಂತ ಅಂತ್ಯ: ಗೊಂದಲದ ಗೂಡಿಗೆ ಸಿಲುಕಿದ ಚಂದನಾ… ಡೆತ್​ನೋಟಲ್ಲಿದೆ ಸಾವಿನ ಕಾರಣ

    ಒಂದು ಮಗುವಿನ ತಂದೆಯೊಂದಿಗೆ ಸಂಬಂಧ! ವೈಯಕ್ತಿಕ ಜೀವನದ ಗುಟ್ಟು ಬಿಚ್ಚಿಟ್ಟ ಜಯಶ್ರೀ ಆರಾಧ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts