ಬೆಂಗಳೂರು: ಬಿಗ್ಬಾಸ್ ಸೀಸನ್ 8ನೇ ಆವೃತ್ತಿಯು ಅಂತಿಮ ಹಂತಕ್ಕೆ ಬಂದಿದೆ. ಇನ್ನು ಕೆಲವೇ ದಿನಗಳಲ್ಲಿ ಶೋ ಮುಕ್ತಾಯಗೊಳ್ಳಲಿದೆ. ಈ ಬಾರಿ ಟ್ರೋಫಿಯನ್ನು ಯಾರು ಎತ್ತಿ ಹಿಡಿಯಲಿದ್ದಾರೆ ಎಂಬ ಕುತೂಹಲ ಗರಿಗೆದರಿದೆ.
ಎಂದಿನಂತೆಯೇ ಈ ವೀಕೆಂಡ್ ಕೂಡ ಸುದೀಪ್ ಅವರ ಮಾತುಕತೆ ಎಲ್ಲರಿಗೂ ಇಷ್ಟವಾಗಿದೆ. ಈ ವಾರವೂ ಸಹ ಚಕ್ರವರ್ತಿ ಚಂದ್ರಚೂಡ್ ಅವರು ಸಾಕಷ್ಟು ವಿವಾದಗಳನ್ನು ಮನೆಯಲ್ಲಿ ಸೃಷ್ಟಿ ಮಾಡಿದರು. ತಮ್ಮ ಎಲ್ಲೆಯನ್ನು ಮೀರಿ ಅತಿಯಾಗಿ ವರ್ತಿಸಿದರು. ಈ ವಾರವೂ ಸುದೀಪ್ ಅವರು ಚಂದ್ರಚೂಡ್ ಅವರಿಗೆ ಕ್ಲಾಸ್ ತೆಗೆದುಕೊಳ್ಳುತ್ತಾರೆಂದು ವೀಕ್ಷಕರು ಹಾಗೂ ನೆಟ್ಟಿಗರು ಅಂದಾಜಿಸಿದ್ದರು. ಆದರೆ, ಅವರ ಊಹೆ ತಪ್ಪಾಗಿದ್ದು, ಇದರಿಂದ ನಿರಾಸೆಗೊಂಡಿದ್ದಾರೆ.
ಕಳೆದ ವಾರ ಚಂದ್ರಚೂಡ್ ಅವರಿಗೆ ಸುದೀಪ್ ಸಿಕ್ಕಾಪಟ್ಟೆ ಕ್ಲಾಸ್ ತಗೆದುಕೊಳ್ಳುವ ಮೂಲಕ ವೀಕ್ಷಕರ ಮನಗೆದ್ದಿದ್ದರು. ಈ ವಾರವು ಕೂಡ ಚಂದ್ರಚೂಡ್ ವರ್ತನೆ ಎಲ್ಲೆ ಮೀರಿತ್ತು. ಅವರನ್ನು ಶೋನಿಂದ ಹೊರಗೆ ಹಾಕುವಂತೆ ವೀಕ್ಷಕರು ಕಲರ್ಸ್ ಕನ್ನಡವನ್ನು ಒತ್ತಾಯ ಸಹ ಮಾಡಿದ್ದರು. ಅಲ್ಲದೆ, ಈ ಬಾರಿ ಸುದೀಪ್, ಚಂದ್ರಚೂಡ್ ಅವರನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆಂದು ಎದುರು ನೋಡುತ್ತಿದ್ದರು. ಆದರೆ, ಸುದೀಪ್, ಚಂದ್ರಚೂಡ್ ಬಗ್ಗೆ ಅಷ್ಟಾಗಿ ಮಾತನಾಡಲಿಲ್ಲ. ಇದರಿಂದ ನೆಟ್ಟಿಗರು ಬೇಸರಗೊಂಡಿದ್ದಾರೆ. (ಏಜೆನ್ಸೀಸ್)
ವಿಶ್ವದ 6 ಪ್ರತಿಭಾವಂತ ಮಹಿಳೆಯರಲ್ಲಿ ನಿರ್ಭಯಾ ಪ್ರಕರಣದ ವಕೀಲೆಯು ಒಬ್ಬರು! ಹುಬ್ಬೇರಿಸುವ ಮುನ್ನ ಅಸಲಿ ವಿಚಾರ ಓದಿ