ಹಿಮಯತ್ನಗರ: ಬೀದಿ ನಾಯಿಗಳ ಬೊಗಳುವ ಶಬ್ದದಿಂದ ಮೂವರ ಪ್ರಾಣ ಉಳಿದಿರುವ ಘಟನೆ ಹೈದರಾಬಾದ್ನ ನಾರಾಯಾಣಗುಡ ಏರಿಯಾದಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ.
ಗೊಲ್ಕಂಡ ಸಂತರಾಮ್ ಓರ್ವ ಉದ್ಯಮಿ. ಪತ್ನಿ ಶೋಭಾ, ಮೂವರು ಮಕ್ಕಳು, ಸೊಸೆಯಂದಿರುವ, ಮೊಮ್ಮಕ್ಕಳು ಮತ್ತು ಮರಿಮೊಮ್ಮಕ್ಕಳ ಜತೆ ಆವಂತಿನಗರ ಪಾರ್ಕ್ ಎದುರು ಡುಪ್ಲೆಕ್ಸ್ ಮನೆಯಲ್ಲಿ ವಾಸವಿದ್ದಾರೆ. ಸಂತರಾಮ್ ಮಕ್ಕಳು ಸಹ ವ್ಯಾಪಾರಿಗಳು.
ಒಟ್ಟು 15 ಮಂದಿ ಇರುವ ಕುಟುಂಬಕ್ಕಾಗಿ G + 2 ಮನೆಯನ್ನು ನಿರ್ಮಾಣ ಮಾಡಲಾಗಿದೆ. ಲಾಕ್ಡೌನ್ ಹಿನ್ನೆಲೆಯಲ್ಲಿ ಸಂತರಾಮ್ ಅವರ ಕಿರಿಯ ಮಗ ಶ್ರೀನಾಥ್, ಪತ್ನಿ ದಿವ್ಯಾ ಮತ್ತು ಅವರ ಮಕ್ಕಳು ಮಾನ್ವಿ ಮತ್ತು ಮಹಾದೇವ್ ವಿಕಾರ್ಬಾದ್ನಲ್ಲಿರುವ ಫಾರ್ಮ್ ಹೌಸ್ನಲ್ಲಿ ಉಳಿದುಕೊಂಡಿದ್ದಾರೆ.
ಇದನ್ನೂ ಓದಿರಿ: ಭಾರತದಲ್ಲಿದೆ ಹೆಸರೇ ಇಲ್ಲದ ರೈಲು ನಿಲ್ದಾಣ: ಇದರ ಹಿಂದಿನ ಕರಾಳ ಕತೆ ಕೇಳಿದ್ರೆ ಬೆರಗಾಗ್ತೀರಾ!
ಸಂತರಾಮ್ ಅವರ ಮಗ ಗೌರಿನಾಥ್ ತನ್ನ ಪತ್ನಿ ಮೀನಾ ಮತ್ತು ಇಬ್ಬರು ಮಕ್ಕಳಾದ ಲೋಕೇಶ್ (11) ಮತ್ತು ವಿಘ್ನೇಶ್ (8) ಜತೆ ಮನೆಯ ಎರಡನೇ ಮಹಡಿಯಲ್ಲಿ ವಾಸವಿದ್ದರೆ, ಇನ್ನೊಬ್ಬ ಮಗ ಬದ್ರಿನಾಥ್ ಮೊದಲನೇ ಮಹಡಿಯಲ್ಲಿ ನೆಲೆಸಿದ್ದಾರೆ. ಹೀಗಿರುವಾಗ ಸೋಮವಾರ ಮನೆಯಲ್ಲಿ ಇದ್ದಕ್ಕಿದ್ದಂತೆ ಹೊಗೆ ಕಾಣಿಸಿಕೊಂಡಿದೆ.
ಇದಾದ ಕೆಲವೇ ಕ್ಷಣಗಳಲ್ಲಿ ಹೊಗೆ ಇಡೀ ಮನೆಯನ್ನು ಆವರಿಸಿ ಬೆಂಕಿ ಹೊತ್ತಿಕೊಂಡಿದೆ. ಇದಾದ ತಕ್ಷಣ ಬದ್ರಿನಾಥ್ ಬಾತ್ರೂಮ್ಗೆ ಓಡಿ ಹೋಗಿ ಬಾಗಿಲು ಹಾಕಿಕೊಂಡಿದ್ದಾರೆ. ಎರಡನೇ ಮಹಡಿಯಲ್ಲಿದ್ದ ಗೋಪಿನಾಥ್ ಕುಟುಂಬ ಸಹ ಹೀಗೆ ಮಾಡಿದೆ.
ಜೀವ ಉಳಿಸಿದ ನಾಯಿ ಬೊಗಳುವ ಶಬ್ದ
ಮನೆಯ ಮುಂದೆ ಬೀದಿ ನಾಯಿಗಳು ನಿಂತು ಬೊಗಳುವುದನ್ನು ನೋಡಿದ ಸ್ಥಳೀಯ ಹೊಗೆ ಆವರಿಸಿದ್ದನ್ನು ನೋಡಿ ತಕ್ಷಣ ಪೊಲೀಸ್ ಮತ್ತು ಅಗ್ನಿಶಾಮಕ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿಗಳು ಬದ್ರಿನಾಥ್ ಅವರನ್ನು ಮೊದಲನೇ ಮಹಡಿಯ ಕಿಟಕಿ ಮುಖಾಂತರ ಹೊರಕ್ಕೆ ಕರೆತಂದರು.
ಇದನ್ನೂ ಓದಿರಿ: ತಿರುಪತಿಯ ಭಿಕ್ಷುಕನ ಮನೆಯಲ್ಲಿ ಕಂತೆ ಕಂತೆ ಹಣ: ಒಟ್ಟು ಮೊತ್ತ ಕೇಳಿ ದಂಗಾದ ಅಧಿಕಾರಿಗಳು!
ಬೆಂಕಿಯನ್ನು ಆರಿಸಿ ಎರಡನೇ ಮಹಡಿಗೆ ಹೋದಾಗ ಬಾತ್ರೂಮ್ನಿಂದ ಬಂದ ಶಬ್ದ ಕೇಳಿ ಒಳಗಡೆ ಇದ್ದ ಗೋಪಿನಾತ್ ಪತ್ನಿ ಮೀನಾ ಮತ್ತು ಇಬ್ಬರು ಮಕ್ಕಳನ್ನು ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಇದೇ ವೇಳೆ ಹೊರಗಡೆ ಇದ್ದ ಗೋಪಿನಾಥ್ ಅವರನ್ನೂ ರಕ್ಷಣೆ ಮಾಡಿ ಎಲ್ಲರನ್ನೂ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ದುರಾದೃಷ್ಟವಶಾತ್ ಗೋಪಿನಾತ್ ಅಷ್ಟರಲ್ಲಾಗಲೇ ಮೃತಪಟ್ಟಿರುವುದಾಗಿ ವೈದ್ಯರ ಘೋಷಿಸಿದರು.
ಸದ್ಯ ಗೌರಿನಾಥ್ ಪತ್ನಿ ಮತ್ತು ಮಕ್ಕಳು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಗೌರಿನಾಥ್ ಮೃತದೇಹವನ್ನು ಒಸ್ಮಾನಿಯಾ ಶವಗಾರಕ್ಕೆ ಸ್ಥಳಾಂತರಿಸಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ. ಮನೆಯಲ್ಲಿದ್ದ ಎಸಿಯಲ್ಲಿ ಶಾರ್ಟ್ ಸೆರ್ಕ್ಯೂಟ್ ಆಗಿ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಹೇಳಲಾಗಿದೆ. (ಏಜೆನ್ಸೀಸ್)
ಆರ್ಸಿಬಿ, ವಿರಾಟ್ ಕೊಹ್ಲಿ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ಚಸ್ಮಾ ಸುಂದರಿ ರಶ್ಮಿಕಾ ಮಂದಣ್ಣ!
ಕರೊನಾ ಸೋಂಕು ತಗುಲಿದ ಒಂದೇ ಗಂಟೆಯಲ್ಲಿ ಯುವ ವೈದ್ಯ ಸಾವು: ಒಂದೇ ದಿನ 50 ಡಾಕ್ಟರ್ಸ್ ಡೆತ್
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ, ಹೃದ್ರೋಗ ತಜ್ಞ ಡಾ. ಕೆ.ಕೆ. ಅಗರ್ವಾಲ್ ಕೋವಿಡ್ಗೆ ಬಲಿ