ಮುಂಬೈ: ಚರಿಷ್ಮಾ ಸುಂದರಿ ಹಾಗೂ ನ್ಯಾಷನಲ್ ಕ್ರಷ್ ಎಂದೇ ಖ್ಯಾತಿಯಾಗಿರುವ ನಟಿ ರಶ್ಮಿಕಾ ಮಂದಣ್ಣ ತಾವು ಅಭಿನಯಿಸಿದ ಮೊದಲ “ಕಿರಿಕ್ ಪಾರ್ಟಿ” ಚಿತ್ರದಲ್ಲೇ ಅದ್ಭುತ ಯಶಸ್ಸು ಪಡೆದರು. ಇದಾದ ಬೆನ್ನಲ್ಲೇ ಚಿತ್ರದ ನಾಯಕ ರಕ್ಷಿತ್ ಶೆಟ್ಟಿ ಜತೆ ನಿಶ್ಚತಾರ್ಥ ಮಾಡಿಕೊಂಡಿದ್ದರು. ಇನ್ನೇನು ಇಬ್ಬರ ಮದುವೆ ಆಗೇಬಿಡ್ತು ಅನ್ನುವಷ್ಟರಲ್ಲಿ ಕಾರಣಾಂತರಗಳಿಂದ ಇಬ್ಬರ ನಡುವಿನ ಸಂಬಂಧ ಮುರಿದು ಬಿತ್ತು.
ಇದಾದ ಬಳಿಕ ರಶ್ಮಿಕಾ ಸಿನಿಮಾ ಕೆರಿಯರ್ನಲ್ಲಿ ತುಂಬಾ ಬಿಜಿಯಾದರು ಒಂದರ ಹಿಂದೆ ಒಂದರಂತೆ ಯಶಸ್ಸಿ ಚಿತ್ರಗಳನ್ನು ನೀಡಿದರು. ತಮ್ಮ ಅಭಿನಯದ ಮೂಲಕವೇ ಪರಭಾಷಿಕರನ್ನು ಸೆಳೆದು, ಟಾಲಿವುಡ್, ಕಾಲಿವುಡ್ ಮತ್ತು ಬಾಲಿವುಡ್ನಲ್ಲೂ ಮಿಂಚು ಹರಿಸುತ್ತಿದ್ದಾರೆ. ಇದರ ನಡುವೆ ಟಾಲಿವುಡ್ ನಟ ವಿಜಯ ದೇವರಕೊಂಡ ಜತೆ ರಶ್ಮಿಕಾ ಡೇಟಿಂಗ್ ನಡೆಸುತ್ತಿರುವ ಸುದ್ದಿ ಆಗಾಗ ಕೇಳಿಬರುತ್ತಲೇ ಇರುತ್ತದೆ. ಇಬ್ಬರ ನಡುವೆ ಪ್ರೀತಿ ಇದೆ ಎಂದು ಹೇಳಲಾಗುತ್ತಿದೆ. ಆದರೆ, ಅದು ಪ್ರೀತಿಯಲ್ಲಿ ನಮ್ಮಿಬ್ಬರ ನಡುವೆ ಉತ್ತಮ ಸ್ನೇಹ ಮಾತ್ರ ಇದೆ ಎಂದು ರಶ್ಮಿಕಾ ಹೇಳಿದ್ದಾರೆ. ಆದರೂ ಇಬ್ಬರ ನಡುವೆ ಏನೋ ನಡೆಯುತ್ತಿದೆ ಎಂದು ಸಿನಿ ಗಲ್ಲಿಯಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ. ಆದರೂ ಅದಕ್ಕೆ ಕಿವಿಗೊಡದೇ ಸಿನಿಮಾದಲ್ಲಿ ರಶ್ಮಿಕಾ ಬಿಜಿಯಾಗಿದ್ದಾರೆ.
ಇತ್ತೀಚೆಗೆ ಇಂಡಿಯಾ ಟುಡೆ ನಡೆಸಿದ ಸಂದರ್ಶನದಲ್ಲಿ ರಶ್ಮಿಕಾ ತಮ್ಮ ಮದುವೆ ಬಗ್ಗೆ ಮನ ಬಿಚ್ಚಿ ಮಾತನಾಡಿದ್ದಾರೆ. ಮದುವೆ ಯಾವಾಗ ಎಂದು ಪ್ರಶ್ನೆ ಮಾಡಿದಾಗ ಮದುವೆ ಆಗಲು ನಾನಿನ್ನೂ ಚಿಕ್ಕವಳು ಎಂದಿದ್ದಾರೆ. ಮದುವೆ ಬಗ್ಗೆ ಏನು ಯೋಚಿಸಬೇಕೆಂದು ನನಗೆ ತಿಳಿದಿಲ್ಲ, ಏಕೆಂದರೆ ನಾನಿನ್ನೂ ಚಿಕ್ಕವಳಾಗಿದ್ದೇನೆ. ನಾನು ಅದರ ಬಗ್ಗೆ ಯೋಚಿಸಿಯು ಇಲ್ಲ ಎಂದಿದ್ದಾರೆ.
ಇದೇ ಸಂದರ್ಭದಲ್ಲಿ ಪ್ರೀತಿಯ ಬಗ್ಗೆ ಮಾತನಾಡಿದ ರಶ್ಮಿಕಾ, ಒಬ್ಬರಿಗೊಬ್ಬರು ಗೌರವ ಕೊಡುವಾಗ, ಸಮಯವನ್ನು ನೀಡಿದಾಗ ಮತ್ತು ನೀವು ಸುರಕ್ಷಿತ ಭಾವನೆ ಬಂದಾಗ ಅದು ನನಗೆ ಪ್ರೀತಿ ಅನಿಸುತ್ತದೆ. ಪ್ರೀತಿಯನ್ನು ವಿವರಿಸುವುದು ಕಷ್ಟ. ಏಕೆಂದರೆ ಎಲ್ಲವೂ ಭಾವನೆಗಳ ಮೇಲೆ ನಿಂತಿದೆ. ಪ್ರೀತಿ ಎಂಬುದು ಒಂದೇ ಮಾರ್ಗವಲ್ಲ, ಅದು ಎರಡು ಮಾರ್ಗಗಳಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು ತಿಳಿಸಿದರು.
ಅಂದಹಾಗೆ ರಶ್ಮಿಕಾ, ಸಹನಟ ವಿಜಯ್ ದೇವರಕೊಂಡ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ. ಅದಕ್ಕೆ ಪುಷ್ಟಿ ನೀಡುವಂತೆ ಇಬ್ಬರೂ ಆಗಾಗ ಡಿನ್ನರ್ ಡೇಟಿಂಗ್ ಮಾಡಿ ಕ್ಯಾಮೆರಾ ಕಣ್ಣಿಗೂ ಸಿಕ್ಕಿಬಿದ್ದಿದ್ದಾರೆ.
ಸಿನಿಮಾ ವಿಚಾರಕ್ಕೆ ಬಂದರೆ, ಪುಷ್ಪ ಚಿತ್ರದ ಯಶಸ್ಸಿನ ಅಲೆಯಲ್ಲಿರುವ ರಶ್ಮಿಕಾ, ಸದ್ಯ ರಷ್ಯಾದಲ್ಲಿ ವಿಹಾರ ಮಾಡುತ್ತಿದ್ದು, ಅವರ ಪ್ರವಾಸದ ಫೋಟೋಗಳು ಮತ್ತು ವೀಡಿಯೊಗಳನ್ನು ಹಂಚಿಕೊಳ್ಳುತ್ತಿದ್ದಾರೆ. ರಶ್ಮಿಕಾ ತಮ್ಮ ಮೊದಲ ದಿನದ ಫೋಟೋವನ್ನು ಹಂಚಿಕೊಂಡಿದ್ದು, ರಷ್ಯಾದಲ್ಲಿ ನನ್ನ ದಿನ 1 ಕ್ಕೆ ಸಿದ್ಧವಾಗಿದೆ ಎಂದು ಬರೆದಿದ್ದಾರೆ. ಇನ್ನು ಮಿಷನ್ ಮಜ್ನು ಚಿತ್ರದ ಮೂಲಕ ಬಾಲಿವುಡ್ನಲ್ಲಿ ಅದೃಷ್ಟ ಪರೀಕ್ಷೆಗೆ ರಶ್ಮಿಕಾ ಇಳಿದಿದ್ದಾರೆ. (ಏಜೆನ್ಸೀಸ್)
ಅಪಾರ್ಟ್ಮೆಂಟ್ಗೆ ವಿದ್ಯುತ್ ಕಡಿತಗೊಳಿಸದಿರಲು ಲಂಚ: 5 ಲಕ್ಷ ಸ್ವೀಕರಿಸುವಾಗ ಎಸಿಬಿ ಬಲೆಗೆ ಬೆಸ್ಕಾಂ ಎಇಇ
ಹೆರಿಗೆ ಮಾಡಿಸಲಿಕ್ಕೂ ಲಂಚ ಕೇಳಿದ ವೈದ್ಯ; ದಾಳಿ ವೇಳೆ ಮನೆಯಲ್ಲಿತ್ತು ಕೋಟಿಗೂ ಅಧಿಕ ಹಣ!