ಕೊಪ್ಪಳ: ತಮ್ಮ ಸರಳ ವ್ಯಕ್ತಿತ್ವದಿಂದಲೇ ಅಭಿಮಾನಿಗಳ ಪಾಲಿನ ಆದರ್ಶ ವ್ಯಕ್ತಿಯಾಗಿರುವ ನಟ ಪುನೀತ್ ರಾಜ್ಕುಮಾರ್, ಸದಾ ವಿವಾದಗಳಿಂದ ದೂರು ಉಳಿಯುವಂತಹ ವ್ಯಕ್ತಿ. ಈ ಕಾರಣದಿಂದಲೇ ಪುನೀತ್ ನಟನೆಯಿಂದಾಚೆಗೆ ಎಲ್ಲರಿಗೂ ಇಷ್ಟವಾಗುತ್ತಾರೆ. ಇದೀಗ ಮತ್ತೊಮ್ಮೆ ತಮ್ಮ ಸರಳತೆಯನ್ನು ಪ್ರದರ್ಶಿಸಿರುವ ಪುನೀತ್, ಸಾಮಾನ್ಯರಂತೆ ಕುರಿಗಾಯಿಗಳ ಜತೆ ನೆಲದ ಮೇಲೆ ಕುಳಿತು ಊಟ ಮಾಡಿದ್ದಾರೆ.
ಡಾಕ್ಯುಮೆಂಟರಿ ಶೂಟಿಂಗ್ಗಾಗಿ ಕೊಪ್ಪಳದ ಅಂಜನಾದ್ರಿ ಪರ್ವತಕ್ಕೆ ಆಗಮಿಸಿದ ಪುನೀತ್, ಕರೊನಾ ಹಿನ್ನೆಲೆಯಲ್ಲಿ ಬೆಟ್ಟಕ್ಕೆ ಪ್ರವೇಶ ನಿಷೇಧಿಸಿರುವುದರಿಂದ ಗಂಗಾವತಿ ಸಮೀಪದ ಹಳ್ಳಿಗಳಲ್ಲಿ ಸುತ್ತಾಟ ನಡೆಸಿ ಹಲವು ಊರುಗಳಿಗೆ ಭೇಟಿ ನೀಡಿದರು.
ಈ ವೇಳೆ ನೆಚ್ಚಿನ ನಟನನ್ನು ನೋಡಿದ ಅನೇಕರು ಅವರ ಜೊತೆಯಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಂಡರು. ಸ್ಥಳೀಯ ಸಂಗೀತ ಕಲಾವಿದರೊಂದಿಗೆ ಸಂಗೀತ ಕಾರ್ಯಕ್ರಮದಲ್ಲಿ ಪುನೀತ್ ಭಾಗಿಯಾದರು. ಸಮೀಪದ ಪ್ರವಾಸಿ ತಾಣಗಳಿಗೂ ಪುನೀತ್ ಭೇಟಿ ನೀಡಿ ವೀಕ್ಷಣೆ ಮಾಡಿದರು.
ಪುನೀತ್ ಅವರು ಸಾಮಾನ್ಯರಂತೆ ನೆಲದ ಮೇಲೆ ಕುಳಿತು ಕುರಿಗಾಯಿಗಳು ನೀಡಿದ ಸಂಗಟಿ ಸವಿದು ಸಂಭ್ರಮಿಸಿದರು. ಇದಕ್ಕೆ ಸಂಬಂಧಪಟ್ಟ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಪುನೀತ್ ಸರಳತೆಗೆ ಎಲ್ಲರೂ ಫಿದಾ ಆಗಿದ್ದಾರೆ.
ಗಂಡ, ಮಕ್ಕಳ ಮುಂದೆಯೇ ಗರ್ಭಿಣಿ ಮಹಿಳಾ ಪೊಲೀಸ್ ಅಧಿಕಾರಿಯನ್ನು ಹತ್ಯೆ ಮಾಡಿದ ತಾಲಿಬಾನಿಗಳು
ಮೂರೂವರೆ ಲಕ್ಷ ಪಡಿತರ ಚೀಟಿ ಅನರ್ಹ; ಆಹಾರ ಇಲಾಖೆ ಸ್ಪಷ್ಟನೆ, ಆರ್ಥಿಕ ಸಬಲರು ಯೋಜನೆಯಿಂದ ಹೊರಕ್ಕೆ
ಕನ್ನಡ ಚಿತ್ರದಲ್ಲಿ ಹಿಂದಿಯ ಗೋವಿಂದ?; ಪ್ರಜ್ವಲ್ ಸಿನಿಮಾದಲ್ಲಿ ಅಭಿನಯ..