ಬೆಂಗಳೂರು: ವಾಹನನಗಳನ್ನು ದೂರದ ಊರಿಗೆ ಸಾಗಿಸುವುದಾಗಿ ಹೇಳಿ ವಿಆರ್ಎಲ್ ಕಂಪನಿ ಹೆಸರಿನಲ್ಲಿ ಕೊರಿಯರ್ ಪಡೆದು ವಂಚನೆ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ನಗರದ ಈಶಾನ್ಯ ವಿಭಾಗದ ಸಿ.ಇ.ಎನ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಬಂಧಿತರಲ್ಲಿ ಪುರನ್ ಸಿಂಗ್ ಚೌವ್ಹಾಣ್ (25), ನರೇಂದ್ರ (32) ಮತ್ತು ಧರ್ಮೇಂದರ್ (21) ರಾಜಸ್ಥಾನ ಮೂಲದವರು. ಉಳಿದ ಮತ್ತೊರ್ವ ಆರೋಪಿ ಧರ್ಮವೀರ್ (24) ಹರಿಯಾಣದವನು. ಇವರು ದೂರದ ಊರಿಗೆ ವಾಹನಗಳನ್ನು ಕೊರಿಯರ್ ಮಾಡುವುದಾಗಿ ಹೇಳಿ ಗೂಗಲ್ ವೆಬ್ಸೈಟ್ನಲ್ಲಿ ಜಾಹೀರಾತುಗಳನ್ನು ನೀಡಿ, ಹಣ ಪಡೆದು ವಂಚನೆ ಮಾಡುತ್ತಿದ್ದರು.
ವಿವರಣೆಗೆ ಬರುವುದಾರೆ, ಜೂನ್ 22ರಂದು ಸಿ.ಇ.ಎನ್ ಠಾಣೆಯಲ್ಲಿ ಒಂದು ದೂರು ದಾಖಲಾಗುತ್ತದೆ. ಅದರಲ್ಲಿ ದೂರುದಾರ, ರಾಯಲ್ ಎನ್ಫೀಲ್ಡ್ ಬೈಕ್ ಅನ್ನು ಬೆಂಗಳೂರಿನಿಂದ ಹುಬ್ಬಳ್ಳಿಗೆ ಸಾಗಿಸುವ ಸಲುವಾಗಿ ಗೂಗಲ್ನಲ್ಲಿ ಯಾವುದಾದರೂ ಮಾಹಿತಿ ಸಿಗಬಹುದು ಎಂದು ಹುಡುಕಾಡುತ್ತಾರೆ. ಈ ವೇಳೆ ಅವರ ಕಣ್ಣಿಗೆ ಒಂದು ಜಾಹೀರಾತು ಕಾಣಿಸುತ್ತದೆ. ಅದರಲ್ಲಿರುವ ಮೊಬೈಲ್ ನಂಬರ್ ಪಡೆದು ಕರೆ ಮಾಡುತ್ತಾರೆ. ಬೈಕ್ ಸಾಗಿಸಲು ಆರೋಪಿಗಳು 4000 ಸಾವಿರ ರೂಪಾಯಿ ಹಣ ಕೇಳುತ್ತಾರೆ. ಹಣವನ್ನು ನೀಡಿದ ಬಳಿಕ ಕೊರಿಯರ್ ಕಂಪನಿಯ ಸಿಬ್ಬಂದಿಯ ಸೋಗಿನಲ್ಲಿ ಬಂದ ಆರೋಪಿಗಳು ದೂರುದಾರನ ಮನೆಯಿಂದ ಬೈಕ್ ಪ್ಯಾಕ್ ಮಾಡಿ, ತೆಗೆದುಕೊಂಡು ಹೋಗುತ್ತಾರೆ.
ಆದರೆ, ಬೈಕ್ ಡೆಲಿವರಿ ಆಗಿದ್ದನ್ನು ನೋಡಿ ದೂರುದಾರ ಮತ್ತೆ ಅದೇ ಫೋನ್ ನಂಬರಿಗೆ ಕರೆ ಮಾಡುತ್ತಾರೆ. ಈ ವೇಳೆ ತಮ್ಮ ವರಸೆ ಬದಲಿಸಿದ ಆರೋಪಿಗಳು ಬೈಕ್ ಬೇಕೆಂದರೆ, ಹೆಚ್ಚಿನ ಹಣ ಕೊಡುವಂತೆ ಬೇಡಿಕೆ ಇಡುತ್ತಾರೆ. ಈ ವೇಳೆ ಮತ್ತೆ ಹಣ ಕೊಟ್ಟರೂ ಬೈಕ್ ಮಾತ್ರ ವಾಪಸ್ ಕೊಡುವುದಿಲ್ಲ. ಬದಲಾಗಿ ಪದೇಪದೆ ಹಣಕ್ಕಾಗಿ ಬೇಡಿಕೆ ಇಡುತ್ತಿರುತ್ತಾರೆ. ಇದಾದ ಬಳಿಕ ಪೊಲೀಸ್ ಠಾಣೆಗೆ ತೆರಳಿದ ಸಂತ್ರಸ್ತ ಆರೋಪಿಗಳ ವಿರುದ್ಧ ದೂರು ದಾಖಲಿಸುತ್ತಾರೆ. 20 ದಿನಗಳಾದರೂ ಇನ್ನು ಬೈಕ್ ಅನ್ನು ತಲುಪಿಸಿಲ್ಲ ಎಂದು ಪ್ರಕರಣ ದಾಖಲಿಸುತ್ತಾರೆ.
ಇದಾದ ಬಳಿಕ ತನಿಖೆಗೆ ಇಳಿಯುವ ಪೊಲೀಸರು ಎಲೆಕ್ಟ್ರಾನಿಕ್ ಸಿಟಿ ಬಳಿ ನಾಲ್ವರನ್ನು ಪತ್ತೆಮಾಡಿ ದಸ್ತಗಿರಿ ಮಾಡಿ ವಿಚಾರಣೆಗೆ ಒಳಪಡಿಸಿದಾಗ ತಪ್ಪೊಪ್ಪಿಕೊಳ್ಳುತ್ತಾರೆ. ಹೆಸರಾಂತ ಕೋರಿಯರ್ ಕಂಪನಿ ವಿಆರ್ಎಲ್ ಹೆಸರಿನಲ್ಲಿ ಗೂಗಲ್ನಲ್ಲಿ ಜಾಹೀರಾತು ನೀಡಿ, ಅದರಲ್ಲಿ ತಮ್ಮ ಮೊಬೈಲ್ ನಂಬರ್ ನಮೂದಿಸುತ್ತಿದ್ದರು. ಸಾರ್ವಜನಿಕರು ಕೋರಿಯರ್ ಕಳುಹಿಸಲು ಗೂಗಲ್ನಲ್ಲಿ ಸರ್ಚ್ ಮಾಡಿದಾಗ ಆರೋಪಿಗಳ ಮೊಬೈಲ್ ನಂಬರ್ಗಳನ್ನ ನೋಡಿ ಅವರನ್ನು ಸಂಪರ್ಕಿಸಿದಾಗ, ತಾವು ಡೆಲಿವರಿ ನೀಡುವುದಾಗಿ ನಂಬಿಸುತ್ತಿದ್ದರು. ಮನೆಗೆ ಬಂದು ವಾಹನಗಳನ್ನು ಪಡೆದು, ಕೇಳಿದಷ್ಟು ಹಣ ಕೊಡುವವರೆಗೂ ವಾಹನವನ್ನು ತಮ್ಮ ಬಳಿಯೇ ಇಟ್ಟುಕೊಳ್ಳುತ್ತಿದ್ದರು. ಬೇಕಾದಷ್ಟು ಹಣ ಬಂದಾಗ ವಾಹನವನ್ನು ನಿಜವಾದ ಕೋರಿಯರ್ ಕಂಪನಿ ಬಳಿ ಬಿಟ್ಟು ಬರುತ್ತಿದ್ದರು. ಆದರೆ, ವಾಹನ ಡೆಲಿವರಿ ಆದಾಗ ಮತ್ತೆ ಹಣ ನೀಡಿ ತಮ್ಮ ವಾಹನವನ್ನು ಪಡೆಯಬೇಕಾಗಿತ್ತು.
ಇದೀಗ ಮೋಸದ ಜಾಲವನ್ನು ಸಿ.ಇ.ಎನ್ ಠಾಣಾ ಪೊಲೀಸರು ಭೇದಿಸಿದ್ದು, ಆರೋಪಿಗಳನ್ನು ಬಂಧಿಸಿದ್ದಾರೆ. ಸಾರ್ವಜನಿಕರು ಗೂಗಲ್ನಲ್ಲಿ ಮಾಹಿತಿ ಪಡೆಯುವಾಗ ತುಂಬಾ ಎಚ್ಚರಿಕೆಯನ್ನು ವಹಿಸುವಂತೆ ಪೊಲೀಸರು ಸೂಚನೆ ನೀಡಿದ್ದಾರೆ. ತಪ್ಪು ಜಾಹೀರಾತುಗಳಿಂದ ಇಷ್ಟೆಲ್ಲ ಪಾಡು ಪಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ನೆಟ್ಫ್ಲಿಕ್ಸ್ಗೆ ಮತ್ತೊಮ್ಮೆ ಆಘಾತ: 2ನೇ ತ್ರೈಮಾಸಿಕದಲ್ಲಿ 9,70,000 ಸಬ್ಸ್ಕ್ರೈಬರ್ಸ್ ಕಳೆದುಕೊಂಡ ಕಂಪನಿ
ಪರೀಕ್ಷೆ ಬರೆಯಲು ಒಳಉಡುಪು ಬಿಚ್ಚಿಸಿದ ಪ್ರಕರಣ: ಇಡೀ ಘಟನೆಯನ್ನು ಮಾಧ್ಯಮ ಮುಂದೆ ಬಿಚ್ಚಿಟ್ಟ ವಿದ್ಯಾರ್ಥಿನಿ
ನಾಡಹಬ್ಬಕ್ಕೆ ಮರುಕಳಿಸಲಿದೆ ಗತವೈಭವ: ಮೈಸೂರು ದಸರಾ ಅದ್ದೂರಿ ಆಚರಣೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ