ಅಮ್ರಾಬಾದ್: ಪ್ರೇಮಿಗಳಿಬ್ಬರು ತೆಲಂಗಾಣದ ನಾಗರ್ಕರ್ನೂಲ್ ಜಿಲ್ಲೆಯ ಮದ್ದಿಮಡುಗು ನಲ್ಲಮಲ ಅರಣ್ಯ ಪ್ರದೇಶದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಘಟನೆ ಬಗ್ಗೆ ಪದರಾ ಎಸ್ಐ ಸುರೇಶ್ ಕುಮಾರ್ ವಿವರಣೆ ನೀಡಿದ್ದಾರೆ. ರಂಗಾರೆಡ್ಡಿ ಜಿಲ್ಲೆಯ ತಲಕೊಂಡಪಲ್ಲಿ ಮಂಡಲದ ಗಟ್ಟು ಇಪ್ಪಲಪಲ್ಲಿ ಗ್ರಾಮದ ಶ್ರೀನಿವಾಸನ್ (28) ಅದೇ ಗ್ರಾಮದ ಸಮಂತಾ (27) ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಇಬ್ಬರ ಜಾತಿ ಬೇರೆ ಬೇರೆಯಾಗಿದ್ದರಿಂದ ಹಿರಿಯರ ಒಪ್ಪಿಗೆ ಇರಲಿಲ್ಲ. ಇದರ ನಡುವೆ ಸಮಂತಾಳನ್ನು 8 ವರ್ಷದ ಹಿಂದೆಯೇ ಸಿಕಂದರಾಬಾದ್ ಮೂಲದ ಸತೀಶ್ ಜತೆಗೆ ಮದುವೆ ಮಾಡಲಾಗಿದೆ. ಇಬ್ಬರ ದಾಂಪತ್ಯ ಜೀವನಕ್ಕೆ ಸಾಕ್ಷಿಯಾಗಿ ಇಬ್ಬರು ಮಕ್ಕಳು ಸಹ ಇದ್ದಾರೆ.
ಹೀಗಿರುವಾಗ ಕೆಲವು ದಿನಗಳ ಹಿಂದೆ ತವರಿಗೆ ಬಂದ ಸಮಂತಾ ಜೂನ್ 24ರಂದು ನಾಲ್ಕು ವರ್ಷದ ಮಗನನ್ನು ಕರೆದುಕೊಂಡು ಪ್ರಿಯಕರ ಶ್ರೀನಿವಾಸನ್ ಜತೆ ಪರಾರಿಯಾಗಿದ್ದಾಳೆ. ಇದರ ಬೆನ್ನಲ್ಲೇ ಆಕೆಯ ಗಂಡನ ಮನೆಯವರು ಹೈದರಾಬಾದ್ನ ಜವಹಾರ್ ನಗರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣವನ್ನು ದಾಖಲಿಸಿದ್ದಾರೆ.
ದೂರಿನ ಬೆನ್ನಲ್ಲೇ ಶ್ರೀನಿವಾಸನ್ ಮತ್ತು ಸಮಂತಾ ಶನಿವಾರ ಅವರವರ ಕುಟುಂಬದ ಸದಸ್ಯರು ಮತ್ತು ಸ್ನೇಹಿತರಿಗೆ ಕರೆ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದಾರೆ. ತಕ್ಷಣ ಎಚ್ಚೆತ್ತ ಪಾಲಕರು ಇಬ್ಬರ ಬಗ್ಗೆ ದೂರು ನೀಡಿದ್ದಾರೆ. ಬಳಿಕ ಪೊಲೀಸರ ಸಹಾಯದಿಂದ ಹುಡುಕಾಡಲು ಆರಂಭಿಸಿದ್ದಾರೆ.
ಫೋನ್ನಲ್ಲಿ ಪ್ರೇಮಿಗಳು ಹೇಳಿದ ಸ್ಥಳಕ್ಕೆ ಭೇಟಿ ನೀಡಿದಾಗ ಅರಣ್ಯದಿಂದ ಮಗುವ ಅಳುವ ಶಬ್ದವನ್ನು ಕೇಳಿ ಅಲ್ಲಿಗೆ ಹೋಗಿದ್ದಾರೆ. ಆದರೆ, ಅಷ್ಟರಲ್ಲಾಗಲೇ ಇಬ್ಬರು ಕೀಟನಾಶಕ ಸೇವಿಸಿ ಸಾವಿಗೀಡಾಗಿದ್ದರು. ಇಬ್ಬರ ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಿದ್ದಾರೆ. (ಏಜೆನ್ಸೀಸ್)
ಒಂದು ವೃಕ್ಷವನ್ನು ಬೆಳೆಸುವುದು ಹತ್ತು ಸುಪುತ್ರರನ್ನು ಪಡೆಯುವುದಕ್ಕೆ ಸಮಾನ
ಒಟ್ಟಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಪ್ರೇಮಿಗಳ ನಿರ್ಧಾರ! ಆದ್ರೆ ಆಗಿದ್ದೇ ಬೇರೆ, ಪ್ರೀತಿ ಕೊಂದ ಮಾಯಾಂಗನೆ
ಲೋನ್ ಬೇಕಾದ್ರೆ ಲೈಂಗಿಕ ಸುಖ ನೀಡ್ಬೇಕಂತೆ! ಬ್ಯಾಂಕ್ ಮ್ಯಾನೇಜರ್ ಕಳ್ಳಾಟ ಸಿಸಿಟಿವಿಯಲ್ಲಿ ಬಯಲು