More

    ಚಿತ್ರರಂಗಕ್ಕೆ ಮತ್ತೊಂದು ಶಾಕ್​: ಹೊಸ ಸಿನಿಮಾ ಸಿದ್ಧತೆ ನಡುವೆಯೇ ಕರೊನಾಗೆ ಬಲಿಯಾದ ಯುವ ನಿರ್ದೇಶಕ

    ಹೈದರಾಬಾದ್​: ಮಹಾಮಾರಿ ಕರೊನಾ ವೈರಸ್​ನಿಂದ ಪ್ರತಿಭಾವಂತರನ್ನೇ ಕಳೆದುಕೊಳ್ಳುವ ಮೂಲಕ ಚಿತ್ರರಂಗ ಬಡವಾಗುತ್ತಿದೆ. ಪ್ರತಿದಿನ ಒಂದಲ್ಲ ಒಂದು ಸಾವು ಚಿತ್ರರಂಗದಲ್ಲಿ ಸಂಭವಿಸುತ್ತಿದ್ದು, ಭಾರತೀಯ ಚಿತ್ರರಂಗಕ್ಕೆ ಶಾಕ್​ ಮೇಲೆ ಶಾಕ್​ ಎದುರಾಗುತ್ತಿದೆ.

    ಮತ್ತೊಬ್ಬ ಯುವ ನಿರ್ದೇಶಕ ಕೋವಿಡ್​​ಗೆ ಬಲಿಯಾಗಿದ್ದಾರೆ. ಟಾಲಿವುಡ್​ ನಿರ್ದೇಶಕ ಕುಮಾರ್​ ವಟ್ಟಿ (39) ಶುಕ್ರವಾರ ಸಂಜೆ ಕೊನೆಯುಸಿರೆಳೆದಿದ್ದಾರೆ. “ಮಾ ಅಬ್ಬಾಯಿ” ಚಿತ್ರದ ಮೂಲಕ ನಿರ್ದೇಶಕರಾಗಿ ಸಿನಿರಂಗಕ್ಕೆ ಕುಮಾರ್​ ಎಂಟ್ರಿ ನೀಡಿದ್ದರು.

    ಕುಮಾರ್​ ಆರಂಭದಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ನಾಯಕ ಶ್ರೀ ವಿಷ್ಣು ಪರಿಚಯವಾದ ಬಳಿಕ ಅವರೊಂದಿಗೆ ಸೇರಿ ಮೊದಲ ಚಿತ್ರವನ್ನು ನಿರ್ದೇಶಿಸಿದರು. ಸುಮಾರು 35 ಚಿತ್ರಗಳಲ್ಲಿ ಕುಮಾರ್​ ಕೆಲಸ ಮಾಡಿದ್ದರು. ದುಃಖಕರ ಸಂಗತಿಯೆಂದರೆ, ಮತ್ತೊಂದು ಬಿಗ್​ಬಜೆಟ್​ ಚಿತ್ರದ ತಯಾರಿಯಲ್ಲಿದ್ದಾಗಲೇ ಕುಮಾರ್​ ಕರೊನಾದಿಂದ ಕೊನೆಯುಸಿರೆಳೆದಿದ್ದಾರೆ.

    ಅಂದಹಾಗೆ ಕುಮಾರ್​ ಮೂಲತಃ ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ನರ್ಸನ್ನಪೇಟೆಯವರು. ಮದುವೆ ಸಹ ಆಗಿದ್ದರು. ಅನೇಕ ವರ್ಷಗಳ ಹಿಂದೆಯೇ ಸಿನಿರಂಗಕ್ಕೆ ಕಾಲಿಟ್ಟಿದ್ದರು. ಉನ್ನತ ಸ್ಥಾನಕ್ಕೇರುವ ಕನಸು ಕಂಡಿದ್ದರು. ಆದರೆ, ಕಳೆದ ಕೆಲವು ದಿನಗಳಿಂದ ಕರೊನಾದಿಂದ ಬಳಲುತ್ತಿದ್ದರು. ಆರೋಗ್ಯ ಪರಿಸ್ಥಿತಿ ತೀವ್ರ ಹದಗೆಟ್ಟಿದ್ದರಿಂದ ಪ್ಲಾಸ್ಮಾ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ. ಕುಮಾರ್​ ಸಾವಿಗೆ ಇಡೀ ಚಿತ್ರರಂಗ ಕಂಬನಿ ಮಿಡಿದಿದೆ. (ಏಜೆನ್ಸೀಸ್​)

    ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಕರೊನಾ ಆಘಾತ; ‘ನೆಮ್ಮದಿಯಾಗಿ ನಿದ್ರಿಸಿ’ ಎಂದವರು ಚಿರನಿದ್ರೆಗೆ…

    ತಮಿಳು ಸಿನಿಮಾ ನಿರ್ದೇಶಕ ಕೆ.ವಿ. ಆನಂದ್ ನಿಧನ

    ಭಾರತದಿಂದ ಆಸ್ಟ್ರೇಲಿಯಾಕ್ಕೆ ಬಂದರೆ ಐದು ವರ್ಷ ಜೈಲು ಶಿಕ್ಷೆ! ಟಫ್​ ರೂಲ್ಸ್​ ಜಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts