ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಚಿವ ಸಂಪುಟಕ್ಕೆ ಯಾರೆಲ್ಲ ಸೇರಿದ್ದಾರೆ ಎಂಬುದು ಈಗಾಲೇ ತಿಳಿದಿದೆ. ಆಗಸ್ಟ್ 4ರಂದು ಸಚಿವ ಸಂಪುಟ ರಚನೆಯಾಗಿದ್ದು, ಹಳಬರ ಹಾಗೂ ಹೊಸಬರ ಮಿಶ್ರಣದೊಂದಿಗೆ 29 ಸಚಿವರು ಸಂಪುಟ ಸೇರಿದ್ದಾರೆ. ಆದರೆ, ಸಂಪುಟ ರಚನೆಯಾಗಿ ಮೂರು ದಿನಗಳು ಕಳೆದರೂ ಖಾತೆ ಹಂಚಿಕೆಯಾಗಿರಲಿಲ್ಲ. ಕೊನೆಗೂ ಖಾತೆ ಹಂಚಿಕೆಗೆ ಬಿಜೆಪಿ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದ್ದು, ಅಧಿಕೃತ ಪಟ್ಟಿ ಶನಿವಾರ (ಆಗಸ್ಟ್ 7) ಬೆಳಗ್ಗೆ ಹೊರಬಿದ್ದಿದೆ.
ನೂತನ ಸಚಿವರಿಗೆ ಹಂಚಿಕೆಯಾದ ಖಾತೆಗಳ ವಿವರ ಈ ಕೆಳಕಂಡಂತಿದೆ….
- ಸಿಎಂ ಬವರಾಜ ಬೊಮ್ಮಾಯಿ– ಹಣಕಾಸು, ಗುಪ್ತಚರ, ಬೆಂಗಳೂರು ಅಭಿವೃದ್ಧಿ, ಡಿಪಿಎಆರ್ ಸೇರಿದಂತೆ ಇತರ ಹಂಚದ ಖಾತೆಗಳು
- ಆರ್. ಅಶೋಕ್– ಕಂದಾಯ ಖಾತೆ (ಮುಜರಾಯಿ ಹೊರತುಪಡಿಸಿ)
- ಮಧುಸ್ವಾಮಿ– ಕಾನೂನು ಹಾಗೂ ಸಂಸದೀಯ ವ್ಯವಹಾರ/ ಸಣ್ಣ ನೀರಾವರಿ ಖಾತೆ
- ಮುರುಗೇಶ್ ನಿರಾಣಿ– ಕೈಗಾರಿಕೆ ಖಾತೆ
- ಅಶ್ವಥ್ ನಾರಾಯಣ– ಉನ್ನತ ಶಿಕ್ಷಣ ಮತ್ತು ಐಟಿ-ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ, ಕೌಶಲ್ಯ ಅಭಿವೃದ್ಧಿ
- ಡಾ.ಕೆ. ಸುಧಕಾರ್– ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವೈದ್ಯಕೀಯ ವಿಜ್ಞಾನ
- ಎಸ್.ಟಿ. ಸೋಮಶೇಖರ್– ಸಹಕಾರ
- ಬೈರತಿ ಬಸವರಾಜ್– ನಗರಾಭಿವೃದ್ಧಿ
- ಸುನಿಲ್ ಕುಮಾರ್– ಇಂಧನ ಮತ್ತು ಕನ್ನಡ ಹಾಗೂ ಸಂಸ್ಕೃತಿ ಖಾತೆ
- ನಾಗೇಶ್- ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ
- ಕೆ.ಎಸ್.ಈಶ್ವರಪ್ಪ– ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್
- ಗೋಪಾಲಯ್ಯ- ಅಬಕಾರಿ ಖಾತೆ
- ಸಿ.ಸಿ. ಪಾಟೀಲ್– ಲೋಕೋಪಯೋಗಿ ಇಲಾಖೆ
- ಶಶಿಕಲಾ ಜೊಲ್ಲೆ- ಮುಜರಾಯಿ, ಹಜ್ ಮತ್ತು ವಕ್ಫ್
- ಶ್ರೀರಾಮುಲು– ಸಾರಿಗೆ ಮತ್ತು ಪರಿಶಿಷ್ಟ ಪಂಗಡ ಕಲ್ಯಾಣ
- ಗೋವಿಂದ ಕಾರಜೋಳ– ಜಲಸಂಪನ್ಮೂಲ ಖಾತೆ
- ವಿ. ಸೋಮಣ್ಣ– ವಸತಿ
- ಬಿ.ಸಿ. ಪಾಟೀಲ್– ಕೃಷಿ
- ಎಂಟಿಬಿ ನಾಗರಾಜ್- ಪುರಸಭೆಯ ಆಡಳಿತ, ಸಣ್ಣ ಕೈಗಾರಿಕೆಗಳು, ಸಾರ್ವಜನಿಕ ವಲಯದ ಉದ್ಯಮಗಳು
- ಕೋಟಾ ಶ್ರೀನಿವಾಸ ಪೂಜಾರಿ- ಸಮಾಜಕಲ್ಯಾಣ/ ಹಿಂದುಳಿದ ವರ್ಗಗಳ ಕಲ್ಯಾಣ
- ಮುನಿರತ್ನ- ತೋಟಗಾರಿಕೆ, ಯೋಜನೆ ಮತ್ತು ಸಾಂಖ್ಯಿಕ ಖಾತೆ
- ಕೆ.ಸಿ.ನಾರಾಯಣ– ರೇಷ್ಮೆ, ಕ್ರೀಡೆ, ಯುವಜನ ಸಬಲೀಕರಣ
- ಶಿವರಾಂ ಹೆಬ್ಬಾರ್- ಕಾರ್ಮಿಕ
- ಉಮೇಶ್ ಕತ್ತಿ– ಅರಣ್ಯ, ಆಹಾರ ಮತ್ತು ನಾಗರಿಕ ಪೂರೈಕೆ ಹಾಗೂ ಗ್ರಾಹಕ ವ್ಯವಹಾರಗಳ ಖಾತೆ
- ಪ್ರಭುಚೌಹಾಣ್ ಔರಾದ್– ಪಶು ಸಂಗೋಪನೆ
- ಹಾಲಪ್ಪ ಆಚಾರ್- ಗಣಿ ಮತ್ತು ಭೂವಿಜ್ಞಾನ, ಮಹಿಳಾ ಮತ್ತು ಮಕ್ಕಳ ಕಲ್ಯಾಣ
- ಶಂಕರ್ ಪಾಟೀಲ್ ಮುನೇನಕೊಪ್ಪ– ಕೈಮಗ್ಗ ಮತ್ತು ಜವಳಿ, ಸಕ್ಕರೆ
- ಎಸ್. ಅಂಗಾರ- ಮೀನುಗಾರಿಕೆ, ಬಂದರು ಮತ್ತು ಒಳನಾಡು ಸಾರಿಗೆ
- ಅರಗ ಜ್ಞಾನೇಂದ್ರ- ಗೃಹ ಸಚಿವ
- ಆನಂದ್ ಸಿಂಗ್- ಪರಿಸರ ಹಾಗೂ ಪ್ರವಾಸೋದ್ಯಮ