More

    ಆರ್.ಧ್ರುವನಾರಾಯಣ್ ಪುಣ್ಯ ಸ್ಮರಣೆ 11ಕ್ಕೆ

    ಎಚ್.ಡಿ.ಕೋಟೆ: ಮಾಜಿ ಸಂಸದ ದಿ.ಆರ್.ಧ್ರುವನಾರಾಯಣ್ ಅವರ ಮೊದಲನೆಯ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮವನ್ನು ಮಾ.11 ರಂದು ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಆರ್.ಧ್ರುವನಾರಾಯಣ್ ಅಭಿಮಾನಿ ಬಳಗದ ತಾಲೂಕು ಅಧ್ಯಕ್ಷ ಎಚ್.ಸಿ.ನರಸಿಂಹಮೂರ್ತಿ ತಿಳಿಸಿದರು.

    ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ಆರ್.ಧ್ರುವನಾರಾಯಣ್ ಅಭಿಮಾನಿ ಬಳಗದ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಸಭೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

    ಧ್ರುವನಾರಾಯಣ್ ಅವರು ಚಾಮರಾಜನಗರ ಜಿಲ್ಲೆಯ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದ ಸಂದರ್ಭದಲ್ಲಿ ಮುಂದಿನ ಪೀಳಿಗೆಯ ಜನರು ನೆನಪಿಸಿಕೊಳ್ಳುವ ಕೆಲಸಗಳನ್ನು ಮಾಡಿದ್ದರು. ಜತೆಗೆ ಎಚ್.ಡಿ.ಕೋಟೆ ವಿಧಾನಸಭಾ ಕ್ಷೇತ್ರದಲ್ಲೂ ಸಾಕಷ್ಟು ಅಭಿವೃದ್ಧಿ ಕೆಲಸಗಳ ಮಾಡಿದ್ದಾರೆ ಎಂದರು.

    ಧ್ರುವನಾರಾಯಣ್ ಅವರು ಜನಸಾಮಾನ್ಯರೊಂದಿಗೆ ಸರಳತೆಯೊಂದಿಗೆ ಬೆರೆಯುತ್ತಿದ್ದರು. ಅವರಿಗೆ ಗೌರವ ಸಲ್ಲಿಸುವ ಕಾರ್ಯ ಮಾಡುವುದು ನಮ್ಮ ಕರ್ತವ್ಯವಾಗಿದೆ. ಶ್ರದ್ಧಾಂಜಲಿ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಬೇಕು ಎಂದು ಮನವಿ ಮಾಡಿದರು.

    ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಏಜಾಜ್ ಪಾಷ, ಮನುಗನಹಳ್ಳಿ ಮಾದಪ್ಪ, ಜಿ.ಪಂ.ಮಾಜಿ ಸದಸ್ಯ ಪಿ.ರವಿ, ಚಿಕ್ಕವೀರನಾಯಕ, ಸತೀಶ್‌ಗೌಡ, ನಾಗನಹಳ್ಳಿ ಪ್ರದೀಪ್, ರಾಜು ವಿಶ್ವಕರ್ಮ, ಆಸೀಫ್ ಇಕ್ಭಾಲ್, ಸೋಮೇಶ್ ಹಿರೇಹಳ್ಳಿ, ಸೌಮ್ಯಾ, ಮುಳ್ಳೂರು ಮಂಜು, ಶಿವರಾಜು ಕಂದೇಗಾಲ, ಹೈರಿಗೆ ಮಲ್ಲೇಶ್, ಗುರುಸ್ವಾಮಿ, ಶಂಕರ್ ವನಸಿರಿ, ಬಸವರಾಜು, ಬೆಟ್ಟಯ್ಯ, ಮುದ್ದಮಲ್ಲಯ್ಯ, ರವೀಂದ್ರ ಜಕ್ಕಹಳ್ಳಿ, ವನಸಿರಿ ಉಮೇಶ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts