More

    ಬೆಳಗಾವಿಯಲ್ಲಿ ಮತ್ತೆ ಕಿಡಿಗೇಡಿಗಳ ಅಟ್ಟಹಾಸ: ಮುಸುಕುಧಾರಿಯಿಂದ ಕಾರಿನ ಮೇಲೆ ಕಲ್ಲು ತೂರಾಟ

    ಬೆಳಗಾವಿ: ಕಾರಿನ ಮೇಲೆ ಕಲ್ಲು ತೂರಾಟ ನಡೆಸುವ ಮೂಲಕ ಕುಂದಾ ನಗರಿ ಬೆಳಗಾವಿಯಲ್ಲಿ ಕಿಡಿಗೇಡಿಗಳು ಮತ್ತೆ ಅಟ್ಟಹಾಸ ಮರೆದಿದ್ದಾರೆ. ತಡರಾತ್ರಿ ಶಿವಾಜಿ ನಗರದ ಶಿವಾಜಿ ಗಾರ್ಡನ್ ಬಳಿ ಘಟನೆ ನಡೆದಿದೆ.

    ನಿನ್ನೆ ರಾತ್ರಿ 4:30ರ ಸುಮಾರಿಗೆ ಓರ್ವ ಮುಸುಕುಧಾರಿಯಿಂದ ಮನೆ ಮುಂದೆ ನಿಲ್ಲಿಸಿದ ಕಾರಿನ ನಾಲ್ಕು ‌ಗ್ಲಾಸ್ ಅನ್ನು ಒಡೆದು ಪರಾರಿಯಾಗಿದ್ದಾನೆ. ಬೆಳಗಾವಿಯ ಗಣಿ ಮಾಲೀಕರು ಮತ್ತು ಮಿನರಲ್ ಟ್ರೇಡ್ಸ ಅಸೊಸಿಯೇಷನ್ ಚೇರ್ಮನ್ ನಿತಿನ್ ಮಹಾಡಗೂತ್ ಎಂಬುವರಿಗೆ ಸೇರಿದ ಕಾರಿಗೆ ಕಿಡಿಗೇಡಿ ಕಲ್ಲು ಎಸೆದಿದ್ದಾನೆ.

    ಮುಸಕುಧಾರಿ ವ್ಯಕ್ತಿ ಕಾರಿನ ಹಿಂಬದಿಯ ಗ್ಲಾಸಿಗೆ ಕಲ್ಲು ತೂರಿದ ವಿಡಿಯೋ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಘಟನೆ ಸಂಬಂಧ ಕಾರು ಮಾಲೀಕನ‌ ಪತ್ನಿ ನಿಧಿ ನಿತಿನ್ ಮಹಾಡಗೂತ್ ಎಂಬುವವರಿಂದ ಕಡೆಬಜಾರ್ ಸಹಾಪೂರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

    ಆರ್‌ಸಿಬಿ ಮಾಜಿ ನಾಯಕ ವಿರಾಟ್ ಕೊಹ್ಲಿಗೆ ಬೆಂಗಳೂರಿನಲ್ಲಿ 100ನೇ ಟೆಸ್ಟ್ ಆಡುವ ಅವಕಾಶ!

    ಮುಂಬೈ ವಿಮಾನ ನಿಲ್ದಾಣದಲ್ಲಿ ನಡೆಯುತ್ತಿರುವ ಕೋವಿಡ್​ ಪರೀಕ್ಷೆ ಒಂದು ಹಗರಣ: ಪ್ರಯಾಣಿಕನ ಆರೋಪ

    ಸಚಿವರಿಂದಲೇ ಪಕ್ಷದ್ರೋಹ!: ಮೇಲ್ಮನೆ ಸೋಲಿಗೆ ಪಕ್ಷದ ನಾಯಕರೇ ಕಾರಣ, ವರಿಷ್ಠರಿಗೆ ತಲುಪಿದ ವರದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts