ನವದೆಹಲಿ: ಮಹಾಮಾರಿ ಕರೊನಾ ವೈರಸ್ ವಿರುದ್ಧ ತಮ್ಮ ಪ್ರಾಣ ಪಣಕ್ಕಿಟ್ಟು ಹೋರಾಟ ನಡೆಸಿ ಲಕ್ಷಾಂತರ ಜನರ ಜೀವ ಉಳಿಸುವ ವೈದ್ಯರೇ ಕರೊನಾ ಮೃತ್ಯುಕೂಪಕ್ಕೆ ಹೆಚ್ಚು ಬಲಿಯಾಗುತ್ತಿದ್ದಾರೆ. ಕೇವಲ ಒಂದೇ ದಿನದಲ್ಲಿ ದೇಶಾದ್ಯಂತ 50 ವೈದ್ಯರು ಸಾವಿಗೀಡಾಗಿರುವುದಾಗಿ ಮೆಡಿಕಲ್ ಬೋರ್ಡ್ ತಿಳಿಸಿದೆ.
ಕೋವಿಡ್ ರೋಗಿಗಳ ಪ್ರಾಣ ಉಳಿಸುವ ವಿಶೇಷ ವೈದ್ಯರಾಗಿ ದೆಹಲಿಯ ಗುರು ತೇಜ್ ಬಹದ್ದೂರ್ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದ 26 ವರ್ಷದ ಅನಾಸ್ ಮಜಾಹಿದ್ ಅವರು ಕರೊನಾ ಪಾಸಿಟಿವ್ ಆದ ಒಂದೇ ಗಂಟೆಯಲ್ಲಿ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಈ ವರ್ಷ ಕರೊನಾ ಎರಡನೇ ಅಲೆಗೆ ಮೃತಪಟ್ಟ 244 ವೈದ್ಯರಲ್ಲಿ ಅನಾಸ್ ಅತಿ ಕಿರಿಯ ವೈದ್ಯರಾಗಿದ್ದಾರೆ.
ಕಳೆದ ವರ್ಷ ಮೊದಲನೇ ಅಲೆಯ ಸಂದರ್ಭದಲ್ಲಿ 736 ವೈದ್ಯರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದರು. ಒಟ್ಟಾರೆ ಸುಮಾರು 1000 ವೈದ್ಯರನ್ನು ಕರೊನಾದಿಂದಾಗಿ ಕಳೆದುಕೊಂಡು ವೈದ್ಯ ಲೋಕ ಬಡವಾಗಿದೆ. ಅನಾಸ್ ಅವರು ಅಪ್ಪ-ಅಮ್ಮ ಮತ್ತು ನಾಲ್ವರು ಸಹೋದರರನ್ನು ಬಿಟ್ಟು ಅಗಲಿದ್ದಾರೆ.
ಇದನ್ನೂ ಓದಿರಿ: ರಾಜ್ಯಕ್ಕೆ ಲಸಿಕೆ ಗುಡ್ನ್ಯೂಸ್: ಧಾರವಾಡ, ಮಾಲೂರಲ್ಲಿ ಉತ್ಪಾದನೆ; ನೀಗಲಿದೆ ವ್ಯಾಕ್ಸಿನ್ ಕೊರತೆ
ಮುಜಹಿದ್ ಅವರು ಗಂಟಲು ಕೆರೆತದಂತಹ ಸಣ್ಣ ಲಕ್ಷಣಗಳನ್ನು ಹೊಂದಿದ್ದರು. ಆ್ಯಂಟಿಜೆನ್ ಟೆಸ್ಟ್ನಲ್ಲಿ ಕರೊನಾ ಪಾಸಿಟಿವ್ ಆಗಿತ್ತು. ಇದಾದ ಒಂದೇ ಗಂಟೆಯಲ್ಲಿ ದಿಢೀರ್ ರೋಗ ಲಕ್ಷಣ ಬೆಳವಣಿಗೆಯಲ್ಲಿ ತಲೆಯೊಳಗೆ ರಕ್ತಸ್ರಾವದಿಂದ ಕುಸಿದುಬಿದ್ದು ಮುಜಾಹಿದ್ ಮೃತಪಟ್ಟಿದ್ದಾರೆ. ಅವರು ಕರೊನಾ ಲಸಿಕೆಯನ್ನು ಪಡೆದುಕೊಂಡಿರಲಿಲ್ಲ.
ನಿಜಕ್ಕೂ ಇದು ಅಘಾತಕಾರಿಯಾಗಿದ್ದು, ಮುಜಾಹಿದ್ಗೆ ಯಾವುದೇ ಕಾಯಿಲೆ ಇರಲಿಲ್ಲ ಎಂದು ಪಾಲಕರು ತಿಳಿಸಿದ್ದಾರೆ. ಇದು ಹೇಗೆ ಸಂಭವಿಸಿತು ಎಂದು ಈ ಕ್ಷಣಕ್ಕೂ ನಮ್ಮಿಂದ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಡಾ. ಆಮೀರ್ ಸೊಹೈಲ್ ಹೇಳಿದ್ದಾರೆ.
ನಾನು ಸೇರಿದಂತೆ ನನ್ನ ಅನೇಕ ಸಹೋದ್ಯೋಗಿಗಳು ಇನ್ನೂ ಕರೊನಾ ಲಸಿಕೆ ತೆಗೆದುಕೊಂಡಿಲ್ಲ. ಕರ್ತವ್ಯದಲ್ಲಿ ನಿರತರಾಗಿದ್ದರಿಂದ ತೆಗೆದುಕೊಳ್ಳಲು ಸಮಯವಾಗಲಿಲ್ಲ. ಅಲ್ಲದೆ, ಲಸಿಕೆ ಪಡೆದುಕೊಳ್ಳುವಂತೆ ನಮ್ಮ ಹಿರಿಯ ಅಧಿಕಾರಿಗಳು ನಮಗೆ ಮಾಹಿತಿಯನ್ನು ನೀಡಿಲ್ಲ. ಮುಂದೆ ಕರೊನಾ ಲಸಿಕೆ ಪಡೆಯಲು ಯೋಜಿಸಿದ್ದೇವೆ ಎಂದು ಸೊಹೈಲ್ ತಿಳಿಸಿದರು.
ಸೊಹೈಲ್ಗೂ ಸಹ ಕಳೆದ ತಿಂಗಳು ಕರೊನಾ ಸೋಂಕು ತಗುಲಿತ್ತು. ಸಣ್ಣ ಪ್ರಮಾಣ ಲಕ್ಷಣಗಳಿತ್ತು. ಇದೀಗ ಆರೋಗ್ಯವಾಗಿದ್ದಾರೆ. ಆದರೆ, ಮುಜಾಹಿದ್ ಚೆನ್ನಾಗಿದ್ದರು. ಇದ್ದಕ್ಕಿದ್ದಂತೆ ಅವರು ಮೃತಪಟ್ಟಿರುವುದು ನಮಗೆಲ್ಲ ಆಘಾತಕಾರಿಯಾಗಿದೆ ಎಂದು ಸೋಹೈಲ್ ತಿಳಿಸಿದ್ದಾರೆ.
ಇನ್ನು ವೈದ್ಯಕೀಯ ಸಂಘದ ಪ್ರಕಾರ 244 ವೈದ್ಯರು ಈ ವರ್ಷ ಕರೊನಾದಿಂದ ಪ್ರಾಣ ಬಿಟ್ಟಿದ್ದಾರೆ. ನಿನ್ನೆ ಒಂದೇ ದಿನ 50 ವೈದ್ಯರು ಕೊನೆಯುಸಿರೆಳೆದಿದ್ದಾರೆ. 244ರಲ್ಲಿ ಬಿಹಾರದಿಂದ 69, ಉತ್ತರ ಪ್ರದೇಶ (34) ಮತ್ತು ದೆಹಲಿಯಿಂದ 27 ವೈದ್ಯರ ಸಾವಿನ ಪ್ರಕರಣಗಳು ವರದಿಯಾಗಿವೆ. ಈವರೆಗೂ ಕೇವಲ ಶೇ. 3 ರಷ್ಟು ವೈದ್ಯರು ಮಾತ್ರ ಕರೊನಾ ಲಸಿಕೆ ಪಡೆದುಕೊಂಡಿದ್ದಾರೆ. ಹೀಗಾಗಿ ಇದೀಗ ಲಸಿಕೆ ಪಡೆಯುವುದರ ಮೇಲೆ ಹೆಚ್ಚಿನ ಗಮನ ಹರಿಸಲಾಗಿದೆ. (ಏಜೆನ್ಸೀಸ್)
ಭಾರತದಲ್ಲಿದೆ ಹೆಸರೇ ಇಲ್ಲದ ರೈಲು ನಿಲ್ದಾಣ: ಇದರ ಹಿಂದಿನ ಕರಾಳ ಕತೆ ಕೇಳಿದ್ರೆ ಬೆರಗಾಗ್ತೀರಾ!
ತಿರುಪತಿಯ ಭಿಕ್ಷುಕನ ಮನೆಯಲ್ಲಿ ಕಂತೆ ಕಂತೆ ಹಣ: ಒಟ್ಟು ಮೊತ್ತ ಕೇಳಿ ದಂಗಾದ ಅಧಿಕಾರಿಗಳು!