More

    ಅನಾರೋಗ್ಯದಿಂದ ತಂದೆ ಸತ್ತ ಬಳಿಕ ಮಗಳ ಕೈಗೆ ಬಂತು ಅಪ್ಪನ ಮೊಬೈಲ್: ಮುಂದಾಗಿದ್ದು ದುರಂತ!

    ತಿರುವನಂತಪುರಂ: ಮೊಬೈಲ್​ ಬಳಸುವುದನ್ನು ತಾಯಿ ನಿಷೇಧಿಸಿದಕ್ಕೆ ಮನನೊಂದ 14 ವರ್ಷದ ಬಾಲಕಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೇರಳದಲ್ಲಿ ನಡೆದಿದೆ.

    ಪಿ. ದೇವಿಕಾ (14) ಮೃತ ದುರ್ದೈವಿ. ಕರಮನ ನೆಡುಂಕಡುವಿನ ಪುಥೇನ್ವೀಡು ಮೂಲದ ದಿವಂಗತ ಪ್ರವೀಣ್​ ಮತ್ತು ಗೋಪಿಕಾ ದಂಪತಿಯ ಪುತ್ರಿ. ಯಾರೂ ಇಲ್ಲದ ವೇಳೆ ಮನೆಯಲ್ಲೇ ನೇಣಿಗೆ ಶರಣಾಗಿದ್ದಾಳೆ. ಈ ಘಟನೆ ಶನಿವಾರ ಸಂಜೆ ನಡೆದಿದೆ.

    ಒಂದು ವರ್ಷದ ಹಿಂದಷ್ಟೇ ದೇವಿಕಾ, ಅನಾರೋಗ್ಯ ಪೀಡಿತ ತಂದೆಯನ್ನು ಕಳೆದುಕೊಂಡಿದ್ದಳು. ಇದಾದ ಬಳಿಕ ತಂದೆಯ ಮೊಬೈಲ್​ ಫೋನ್​ ಅನ್ನು ಹೆಚ್ಚು ಬಳಸುತ್ತಿದ್ದಳು. ದೇವಿಕಾ ತಾಯಿ ಗೋಪಿಕಾ ಖಾಸಗಿ ಈವೆಂಟ್​ ಮ್ಯಾನೇಜ್​ಮೆಂಟ್​ ಕಂಪನಿಯ ಉದ್ಯೋಗಿಯಾಗಿದ್ದರು. ತಂದೆಯಿಲ್ಲದ ಮಗಳು ಎಂದು ತುಂಬಾ ಪ್ರೀತಿಯಿಂದ ಸಾಕುತ್ತಿದ್ದರು. ಆದರೆ, ದೇವಿಕಾ ಮೊಬೈಲ್​ಗೆ ತುಂಬಾ ದಾಸಳಾಗಿದ್ದಳು. ಮೂರು ಹೊತ್ತು ಮೊಬೈಲ್​ ಹಿಡಿದುಕೊಂಡೇ ಇರುತ್ತಿದ್ದಳು.

    ಮಗಳ ನಡವಳಿಕೆಯನ್ನು ಗಮನಿಸಿದ ಗೋಪಿಕಾ, ಆಕೆಗೆ ಚೆನ್ನಾಗಿ ಬೈದು ಮೊಬೈಲ್​ ಅನ್ನು ಅದೇ ದಿನ ಕಿತ್ತುಕೊಂಡಿದ್ದರು. ಮಧ್ಯಾಹ್ನ ಮೊಬೈಲ್​ ಕಿತ್ತುಕೊಂಡ ತಾಯಿ ಇನ್ನೆಂದು ನಿನಗೆ ಮೊಬೈಲ್​ ಕೊಡುವುದಿಲ್ಲ, ಹೋಗಿ ಓದಿಕೋ ಎಂದು ಗದರಿಸಿದ್ದರು. ಇದಾದ ಬಳಿಕ ದೇವಿಕಾ ಪಕ್ಕದಲ್ಲಿದ್ದ ಇದ್ದ ತನ್ನ ಸ್ನೇಹಿತೆಯ ಮನೆಗೆ ತೆರಳು ದುಃಖ ತೋಡಿಕೊಂಡಿದ್ದಳು. ಆದರೆ, ಆಕೆ ಇಂಥ ದುಡುಕಿನ ನಿರ್ಧಾರ ತೆಗೆದುಕೊಳ್ಳುತ್ತಾಳೆ ಎಂದು ಯಾರೂ ಊಹೆ ಮಾಡಿರಲಿಲ್ಲ.

    ಶನಿವಾರ ರಾತ್ರಿ 7.30ರ ಸುಮಾರಿಗೆ ಮನೆಯ ತನ್ನ ಕೋಣೆಯಲ್ಲಿ ದೇವಿಕಾ ಶವವಾಗಿ ಪತ್ತೆಯಾಗಿದ್ದಾಳೆ. ತಕ್ಷಣ ಆಕೆಯನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಇದಾದ ಬಳಿಕ ಮೆಡಿಕಲ್​ ಕಾಲೇಜು ಆಸ್ಪತ್ರೆಗೆ ಸ್ಥಳಾಂತರ ಮಾಡಲಾಯಿತು. ಆದರೆ, ಆಕೆ ಅಷ್ಟರಲ್ಲಾಗಲೇ ಮೃತಪಟ್ಟಿದ್ದಳು. ದೇವಿಕಾ ಓದುವುದರಲ್ಲೂ ಮುಂಚೂಣಿಯಲ್ಲಿದ್ದಳು. ಹಾಸ್ಟೆಲ್​ನಲ್ಲಿ ಉಳಿದು ಓದುತ್ತಿದ್ದಳು. ಇದೀಗ ಸಣ್ಣ ಮಾತಿಗೆ ಸಾವಿನ ಹಾದಿ ಹಿಡಿದಿದ್ದು, ಮನೆಯಲ್ಲಿ ಶೋಕ ಸಾಗರ ಆವರಿಸಿದೆ.

    ದೇವಿಕಾಳನ್ನು ಕಳೆದುಕೊಂಡ ತಾಯಿ ಗೋಪಿಕಾಗೆ ಇನ್ನೊಬ್ಬಳು ಮಗಳು ವೈಗಾ ಆಸರೆಯಾಗಿದ್ದಾಳೆ. (ಏಜೆನ್ಸೀಸ್​)

    KGF-2 ಗೆಲುವಿನಿಂದ ಒತ್ತಡಕ್ಕೆ ಸಿಲುಕಿತಾ ಪುಷ್ಪ ಚಿತ್ರತಂಡ​? ಅಮೆರಿಕ ಬಿಟ್ಟು ಬಾರದ ಸುಕುಮಾರ್​, ಶೂಟಿಂಗ್​ ಕತೆ ಏನು?

    ನಿಮಗೆ ಸಲ್ಮಾನ್​ ಖಾನ್​ ಗೊತ್ತಾ? ಕಾಗಿಸೋ ರಬಾಡ ಕೊಟ್ಟ ಉತ್ತರ ಕೇಳಿ ದಂಗಾದ ಆ್ಯಂಕರ್​!

    ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿನಿ ನೋಡ ನೋಡುತ್ತಿದ್ದಂತೆ ತಾಯಿ ಕಣ್ಣೆದುರೇ ಪ್ರಿಯಕರನೊಂದಿಗೆ ಪರಾರಿ​! ಕೊಳ್ಳೇಗಾಲದಲ್ಲಿ ಘಟನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts