More

    ಗುಣಮಟ್ಟದ ಕಾಮಗಾರಿ ಕೈಗೊಳ್ಳಿ- ಶಾಸಕ ಮಹೇಶ ಕುಮಠಳ್ಳಿ

    ಕೊಕಟನೂರ: ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ಕೈಗೊಂಡು ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಶಾಸಕ ಹಾಗೂ ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಮಹೇಶ ಕುಮಠಳ್ಳಿ ಹೇಳಿದರು.

    ಅಥಣಿ ತಾಲೂಕಿನ ಕೋಹಳ್ಳಿ ಗ್ರಾಮದ ಅಂಬೇಡ್ಕರ್ ವೃತ್ತದಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ 4 ಕೋಟಿ ರೂ. ಅನುದಾನದಲ್ಲಿ ಮಂಗಳವಾರ ಕೋಹಳ್ಳಿಯಿಂದ ಐಗಳಿ ಮಾರ್ಗದ 1.2 ಕಿ.ಮೀ. ರಸ್ತೆ ಹಾಗೂ ತೆಲಸಂಗದಿಂದ ಹೊನವಾಡ ಕ್ರಾಸ್‌ವರೆಗೆ 4 ಕಿ.ಮೀ. ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ಚಿಕ್ಕೋಡಿ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಚಿದಾನಂದ ಸವದಿ ಮಾತನಾಡಿದರು. ಜಿಪಂ ಮಾಜಿ ಸದಸ್ಯ ಬಸವರಾಜ ಬುಟಾಳೆ, ನೂರಹ್ಮದ್ ಡೊಂಗರಗಾಂವ, ಜೆ.ಎ. ಹಿರೇಮಠ, ಜಿ.ಎಂ.ಗೂಳಪ್ಪಣ್ಣವರ, ಎ.ಜಿ. ಮುಲ್ಲಾ. ಐ.ಜಿ. ಬಿರಾದಾರ, ಸಂಗಯ್ಯ ಸದಾಶಿವ ಹರಪಾಳೆ, ಶ್ರೀಕಾಂತ ಆಲಗೂರ, ರಮೇಶ ಉಮರಾಣಿ ಇತರರು ಇದ್ದರು.

    ಕಕಮರಿಯಲ್ಲಿ ಕಾಮಗಾರಿಗೆ ಚಾಲನೆ: ಗ್ರಾಮದಲ್ಲಿ ಮಂಗಳವಾರ 8 ಲಕ್ಷ ರೂ. ವೆಚ್ಚದಲ್ಲಿ ಘನ ಮತ್ತು ದ್ರವ ತ್ಯಾಜ್ಯ ಘಟಕ ನಿರ್ಮಾಣ ಕಾಮಗಾರಿಗೆ ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಮಹೇಶ ಕುಮಠಳ್ಳಿ ಚಾಲನೆ ನೀಡಿದರು. ಚಿಕ್ಕೋಡಿ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಚಿದಾನಂದ ಸವದಿ, ಜಿಪಂ ಸದಸ್ಯ ಗುರಪ್ಪ ದಾಶ್ಯಾಳ, ಮಲ್ಲಿಕಾರ್ಜುನ ಕನಮಡಿ, ಪ್ರಕಾಶ ಮೋರೆ, ವೆಂಕನಗೌಡ ಪಾಟೀಲ, ಉಮೇಶ ತಂಗಡಿ, ಭೀಮಣ್ಣ ಬಿಳ್ಳೂರ, ಅಪ್ಪಾಸಾಬ ಬಾಳಿಕಾಯಿ, ಶಿವು ಜಗದೇವ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts