More

    ಹೊಂಬಾಳೆ ಬ್ಯಾನರ್​ನಲ್ಲಿ ಪುನೀತ್​ ನಾಲ್ಕನೇ ಸಿನಿಮಾ!

    ಬೆಂಗಳೂರು: ‘ಯುವರತ್ನ’ ನಂತರ ಹೊಂಬಾಳೆ ಫಿಲಂಸ್​ ನಿರ್ಮಾಣದ ಹಾಗೂ ಸಂತೋಷ್​ ಆನಂದರಾಂ ನಿರ್ಮಾಣದ ಇನ್ನೊಂದು ಚಿತ್ರದಲ್ಲಿ ನಟಿಸುವುದಾಗಿ ಪುನೀತ್​ ಹೇಳಿಕೊಂಡಿದ್ದರು. ‘ಯುವರತ್ನ’ ಬಿಡುಗಡೆಯಾದ ನಂತರ ಈ ಕುರಿತಾಗಿ ಅಧಿಕೃತ ಘೋಷಣೆ ಹೊರಬೀಳಲಿದೆ ಎಂದು ಹೇಳಿಕೊಂಡಿದ್ದರು.

    ಇದನ್ನೂ ಓದಿ: ಲವ್ ಮಾಕ್ಟೈಲ್ ಜೋಡಿಗೆ ಕರೊನಾ ಪಾಸಿಟಿವ್

    ಅದರಂತೆ, ಹೊಂಬಾಳೆ ಫಿಲಂಸ್​ ಬ್ಯಾನರ್​ ನಿರ್ಮಿಸುತ್ತಿರುವ ಹೊಸ ಚಿತ್ರದಲ್ಲಿ ನಟಿಸುವುದಕ್ಕೆ ಪುನೀತ್​ ಒಪ್ಪಿಕೊಂಡಿದ್ದಾರೆ. ಇದು ಈ ಸಂಸ್ಥೆಗಾಗಿ ಪುನೀತ್​ ಅಭಿನಯಿಸುತ್ತಿರುವ ನಾಲ್ಕನೇ ಚಿತ್ರವಾಗಿದೆ. ಇದಕ್ಕೂ ಮುನ್ನ, ಹೊಂಬಾಳೆ ಪ್ರೊಡಕ್ಷನ್ಸ್​ನ ವಿಜಯ್​ಕುಮಾರ್​ ಕಿರಗಂದೂರು ನಿರ್ಮಿಸಿರುವ ‘ನಿನ್ನಿಂದಲೇ’, ‘ರಾಜ್​ಕುಮಾರ’ ಮತ್ತು ‘ಯುವರತ್ನ’ ಚಿತ್ರಗಳಲ್ಲಿ ಪುನೀತ್​ ನಟಿಸಿದ್ದರು.

    ಇದೀಗ ಹೊಂಬಾಳೆ ನಿರ್ಮಾಣದ ನಾಲ್ಕನೆಯ ಚಿತ್ರದಲ್ಲಿ ಪುನೀತ್​ ನಟಿಸುತ್ತಿರುವ ವಿಷಯ ಯುಗಾದಿ ಹಬ್ಬದ ದಿನ ಬಹಿರಂಗವಾಗಿದ್ದು, ಈ ಚಿತ್ರವನ್ನು ‘ಲೂಸಿಯಾ’ ಖ್ಯಾತಿಯ ಪವನ್​ ಕುಮಾರ್​ ನಿರ್ದೇಶನ ಮಾಡುತ್ತಿದ್ದಾರೆ. ಪವನ್​ ಹೇಳಿದ ಕಥೆಯೊಂದು ಪುನೀತ್​ ಹಾಗೂ ವಿಜಯ್​ಕುಮಾರ್ ಇಬ್ಬರಿಗೂ ಇಷ್ಟವಾಗಿದ್ದು, ಆ ಕಥೆಯನ್ನಿಟ್ಟುಕೊಂಡೇ ಚಿತ್ರ ಮಾಡುವುದಕ್ಕೆ ಇಬ್ಬರೂ ಮುಂದಾಗಿದ್ದಾರೆ.

    ಇದನ್ನೂ ಓದಿ: ಯುಗಾದಿ ಹೊಸ ವರ್ಷದಂದು ಸಾಮಾಜಿಕ ಜಾಲತಾಣ ಲೋಕಕ್ಕೆ ಅದ್ಧೂರಿ ಎಂಟ್ರಿ ಕೊಟ್ಟ ಕ್ರೇಜಿಸ್ಟಾರ್!

    ಸದ್ಯಕ್ಕೆ ಚಿತ್ರದ ಪ್ರೀ-ಪ್ರೊಡಕ್ಷನ್​ ಕೆಲಸಗಳು ನಡೆಯುತ್ತಿದ್ದು, ಜುಲೈನಲ್ಲಿ ಚಿತ್ರ ಪ್ರಾರಂಭವಾಗುವ ನಿರೀಕ್ಷೆ ಇದೆ. ಅಷ್ಟರಲ್ಲಿ ಪುನೀತ್​, ‘ಜೇಮ್ಸ್​’ ಚಿತ್ರದ ಕೆಲಸಗಳನ್ನು ಮುಗಿಸಿ, ಈ ಚಿತ್ರತಂಡವನ್ನು ಸೇರ್ಪಡೆಗೊಳ್ಳಲಿದ್ದಾರೆ.

    ಸಾರಿಗೆ ನೌಕರರಿಂದ ನಟ ಯಶ್‌ಗೆ ಬಂತಂತೆ ಈ ಪತ್ರ: ನಿಜನಾ? ಸುಳ್ಳಾ…? ನೂರೆಂಟು ಪ್ರಶ್ನೆ…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts