ಬೆಂಗಳೂರು: ‘ಯುವರತ್ನ’ ನಂತರ ಹೊಂಬಾಳೆ ಫಿಲಂಸ್ ನಿರ್ಮಾಣದ ಹಾಗೂ ಸಂತೋಷ್ ಆನಂದರಾಂ ನಿರ್ಮಾಣದ ಇನ್ನೊಂದು ಚಿತ್ರದಲ್ಲಿ ನಟಿಸುವುದಾಗಿ ಪುನೀತ್ ಹೇಳಿಕೊಂಡಿದ್ದರು. ‘ಯುವರತ್ನ’ ಬಿಡುಗಡೆಯಾದ ನಂತರ ಈ ಕುರಿತಾಗಿ ಅಧಿಕೃತ ಘೋಷಣೆ ಹೊರಬೀಳಲಿದೆ ಎಂದು ಹೇಳಿಕೊಂಡಿದ್ದರು.
ಇದನ್ನೂ ಓದಿ: ಲವ್ ಮಾಕ್ಟೈಲ್ ಜೋಡಿಗೆ ಕರೊನಾ ಪಾಸಿಟಿವ್
ಅದರಂತೆ, ಹೊಂಬಾಳೆ ಫಿಲಂಸ್ ಬ್ಯಾನರ್ ನಿರ್ಮಿಸುತ್ತಿರುವ ಹೊಸ ಚಿತ್ರದಲ್ಲಿ ನಟಿಸುವುದಕ್ಕೆ ಪುನೀತ್ ಒಪ್ಪಿಕೊಂಡಿದ್ದಾರೆ. ಇದು ಈ ಸಂಸ್ಥೆಗಾಗಿ ಪುನೀತ್ ಅಭಿನಯಿಸುತ್ತಿರುವ ನಾಲ್ಕನೇ ಚಿತ್ರವಾಗಿದೆ. ಇದಕ್ಕೂ ಮುನ್ನ, ಹೊಂಬಾಳೆ ಪ್ರೊಡಕ್ಷನ್ಸ್ನ ವಿಜಯ್ಕುಮಾರ್ ಕಿರಗಂದೂರು ನಿರ್ಮಿಸಿರುವ ‘ನಿನ್ನಿಂದಲೇ’, ‘ರಾಜ್ಕುಮಾರ’ ಮತ್ತು ‘ಯುವರತ್ನ’ ಚಿತ್ರಗಳಲ್ಲಿ ಪುನೀತ್ ನಟಿಸಿದ್ದರು.
ಇದೀಗ ಹೊಂಬಾಳೆ ನಿರ್ಮಾಣದ ನಾಲ್ಕನೆಯ ಚಿತ್ರದಲ್ಲಿ ಪುನೀತ್ ನಟಿಸುತ್ತಿರುವ ವಿಷಯ ಯುಗಾದಿ ಹಬ್ಬದ ದಿನ ಬಹಿರಂಗವಾಗಿದ್ದು, ಈ ಚಿತ್ರವನ್ನು ‘ಲೂಸಿಯಾ’ ಖ್ಯಾತಿಯ ಪವನ್ ಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ. ಪವನ್ ಹೇಳಿದ ಕಥೆಯೊಂದು ಪುನೀತ್ ಹಾಗೂ ವಿಜಯ್ಕುಮಾರ್ ಇಬ್ಬರಿಗೂ ಇಷ್ಟವಾಗಿದ್ದು, ಆ ಕಥೆಯನ್ನಿಟ್ಟುಕೊಂಡೇ ಚಿತ್ರ ಮಾಡುವುದಕ್ಕೆ ಇಬ್ಬರೂ ಮುಂದಾಗಿದ್ದಾರೆ.
ಇದನ್ನೂ ಓದಿ: ಯುಗಾದಿ ಹೊಸ ವರ್ಷದಂದು ಸಾಮಾಜಿಕ ಜಾಲತಾಣ ಲೋಕಕ್ಕೆ ಅದ್ಧೂರಿ ಎಂಟ್ರಿ ಕೊಟ್ಟ ಕ್ರೇಜಿಸ್ಟಾರ್!
ಸದ್ಯಕ್ಕೆ ಚಿತ್ರದ ಪ್ರೀ-ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು, ಜುಲೈನಲ್ಲಿ ಚಿತ್ರ ಪ್ರಾರಂಭವಾಗುವ ನಿರೀಕ್ಷೆ ಇದೆ. ಅಷ್ಟರಲ್ಲಿ ಪುನೀತ್, ‘ಜೇಮ್ಸ್’ ಚಿತ್ರದ ಕೆಲಸಗಳನ್ನು ಮುಗಿಸಿ, ಈ ಚಿತ್ರತಂಡವನ್ನು ಸೇರ್ಪಡೆಗೊಳ್ಳಲಿದ್ದಾರೆ.
ಸಾರಿಗೆ ನೌಕರರಿಂದ ನಟ ಯಶ್ಗೆ ಬಂತಂತೆ ಈ ಪತ್ರ: ನಿಜನಾ? ಸುಳ್ಳಾ…? ನೂರೆಂಟು ಪ್ರಶ್ನೆ…!