ಹೊಸಪೇಟೆ: ತಾಲೂಕಿನ ಕಮಲಾಪುರ ಸಮೀಪದ ಕನ್ನಡ ವಿಶ್ವವಿದ್ಯಾಲಯದ ಅಭಿವೃದ್ಧಿ ಅಧ್ಯಯನ ವಿಭಾಗದ ಸಂಶೋಧನಾರ್ಥಿ ಪೂಜಾರಿ ಯಲ್ಲೇಶ ಮಂಡಿಸಿದ ಮಹಾಪ್ರಬಂಧಕ್ಕೆ ಕನ್ನಡ ವಿವಿ ಪಿಎಚ್ಡಿ ಪದವಿ ಪ್ರಕಟಿಸಿದೆ.
ಅಭಿವೃದ್ಧಿ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ.ಎ. ಶ್ರೀಧರ ಮಾರ್ಗದರ್ಶನದಲ್ಲಿ `ಮೀಸಲು ಪ್ರಾತಿನಿಧ್ಯ ಮತ್ತು ಅಭಿವೃದ್ಧಿ (ಪರಿಶಿಷ್ಟ ಪಂಗಡದವರ ರಾಜಕೀಯ ಮೀಸಲು ಕ್ಷೇತ್ರಗಳನ್ನು ಅನುಲಕ್ಷಿಸಿ) ಎಂಬ ವಿಷಯದ ಕುರಿತು ಮಹಾ ಪ್ರಬಂಧ ಮಂಡಿಸಿದ್ದಾರೆ.