More

    ತಾಪಂ ಎದುರು ತಮಟೆ ಬಾರಿಸಿ ಪ್ರತಿಭಟನೆ

    ಶಿಗ್ಗಾಂವಿ: ಕಾಯಂ ಪಿಡಿಒ ನೇಮಕ ಮಾಡುವಂತೆ ಆಗ್ರಹಿಸಿ ತಾಲೂಕಿನ ಹಿರೇಮಲ್ಲೂರ ಗ್ರಾಪಂ ಸದಸ್ಯರು ಪಟ್ಟಣದ ತಾಲೂಕು ಪಂಚಾಯಿತಿ ಎದುರು ಬುಧವಾರ ತಮಟೆ ಬಾರಿಸಿ ಪ್ರತಿಭಟನೆ ನಡೆಸಿದರು.

    ಹಿರೇಮಲ್ಲೂರ ಗ್ರಾಮ ಪಂಚಾಯಿತಿಗೆ ಹುಲಗೂರ ಗ್ರಾಪಂ ಪಿಡಿಒ ಬಸಪ್ಪ ಸಂಶಿ ಅವರನ್ನು ಪ್ರಭಾರಿಯಾಗಿ ನೇಮಕ ಮಾಡಲಾಗಿದೆ. ಆದರೆ, ಅವರು 15-20 ದಿನಗಳಿಗೊಮ್ಮೆ ಹಿರೇಮಲ್ಲೂರ ಪಂಚಾಯಿತಿಗೆ ಭೇಟಿ ನೀಡುತ್ತಾರೆ. ಇದರಿಂದ ಗಂಜಿಗಟ್ಟಿ, ಚಿಕ್ಕಮಲ್ಲೂರ, ಹಿರೇಮಲ್ಲೂರ ಗ್ರಾಮಗಳ ಅಭಿವೃದ್ಧಿ ಕುಂಠಿತಗೊಂಡಿದೆ. ಆದ್ದರಿಂದ ಗ್ರಾಮ ಪಂಚಾಯಿತಿಗೆ ಕಾಯಂ ಪಿಡಿಒ ನೇಮಕ ಮಾಡಬೇಕು. ಇಲ್ಲವೇ ಸದ್ಯ ನಮ್ಮ ಪಂಚಾಯಿತಿಯಲ್ಲಿ ಗ್ರೇಡ್ 2 ಕಾರ್ಯದರ್ಶಿಯಾಗಿರುವ ಪರಶುರಾಮ ಅಂಬಿಗೇರ ಅವರಿಗೆ ಪಿಡಿಒ ಚಾರ್ಜ್ ಕೊಡಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.

    ತಾಪಂ ಇಒ ಪ್ರಶಾಂತ ತುರಕಾಣಿ ಪ್ರತಿಭಟನಾಕಾರರೊಂದಿಗೆ ರ್ಚಚಿಸಿ, ಈಗಾಗಲೇ ಸಿಇಒ ಅವರಿಗೆ ತಮ್ಮ ಬೇಡಿಕೆ ಕುರಿತು ಪ್ರಸ್ತಾವನೆ ಸಲ್ಲಿಸಲಾಗಿದೆ. ಅಲ್ಲಿಂದ ಆದೇಶ ಬಂದ ತಕ್ಷಣ ಕಾಯಂ ಪಿಡಿಒ ನೇಮಕ ಇಲ್ಲವೇ ಗ್ರೇಡ್-2 ಕಾರ್ಯದರ್ಶಿಗೆ ಅಧಿಕಾರ ಕೊಟ್ಟು ಸಮಸ್ಯೆಗಳಿಗೆ ಸ್ಪಂದಿಸಲಾಗುವುದು ಎಂದು ಭರವಸೆ ನೀಡಿದರು. ನಂತರ ಗ್ರಾಪಂ ಸದಸ್ಯರು ಪ್ರತಿಭಟನೆ ಹಿಂಪಡೆದರು.

    ಗ್ರಾಪಂ ಅಧ್ಯಕ್ಷೆ ಜಯಮ್ಮ ಸಾವಕ್ಕನವರ, ಸದಸ್ಯರಾದ ಕವಿತಾ ಹುತ್ತನಗೌಡ್ರ, ಚ.ಸಿ. ಚನ್ನಪ್ಪನವರ, ಬಿ.ಎಲ್. ದಾಸರ, ರಾಮನಗೌಡ ಕರಿಗೌಡ್ರ, ಮೌಲಾಸಾಬ್ ಕಳಸ, ಮೊಬಿನಾ ಗೊಂದಿ, ಆರ್.ಎಸ್. ವಾಲ್ಮೀಕಿ, ಕಮಲವ್ವ ಮಾರಂಬೀಡ, ಯಲ್ಲಪ್ಪ ಮ್ಯಾಗೇರಿ, ಮೈಲಾರೆಪ್ಪ ಮ್ಯಾಗೇರಿ, ಸುರೇಶ ಹರಿಜನ ಮತ್ತಿತರರು ಪ್ರತಿಭಟನೆಯಲ್ಲಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts