ಕೆ.ಎಂ.ದೊಡ್ಡಿ: ಕೆರೆಯಲ್ಲಿ ಮೀನು ಹಿಡಿಯಲು ಹಾಕಿದ್ದ ಬಲೆಯಲ್ಲಿ ಹೆಬ್ಬಾವು ಸಿಲುಕಿ ಹಾಕಿಕೊಂಡಿದ್ದ ಹಿನ್ನೆಲೆಯಲ್ಲಿ ಮದ್ದೂರಿನ ಉರಗ ಸಂರಕ್ಷಕ ಮಾ.ನ. ಪ್ರಸನ್ನಕುಮಾರ್ ಹಾವನ್ನು ರಕ್ಷಿಸಿ ಮುತ್ತತ್ತಿ ಅರಣ್ಯಕ್ಕೆ ಬಿಟ್ಟರು.
ಮೀನುಗಾರರು ಮೀನು ಹಿಡಿಯಲು ಕೆರೆಯಲ್ಲಿ ಬಲೆ ಹಾಕಿದ್ದಾಗ, ಹೆಬ್ಬಾವು ಅಚಾನಕವಾಗಿ ಬಲಗೆ ಸಿಲುಕಿಕೊಂಡಿತ್ತು. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆಯ ಸಿಬ್ಬಂದಿ ಮಾ.ನ.ಪ್ರಸನ್ನ ಅವರನ್ನು ಕರೆಯಿಸಿ ಕೆರೆಯಿಂದ ಹಾವನ್ನು ಹೊರ ತೆಗೆಸಿದರು.