More

    ನೂರಕ್ಕೂ ಹೆಚ್ಚು ದರೋಡೆ ಮಾಡಿದ್ದವ ಕ್ಯಾನ್ಸರ್​ಗೆ ಬಲಿ…

    ಬೆಂಗಳೂರು: ನೂರಕ್ಕೂ ಹೆಚ್ಚು ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕುಖ್ಯಾತ ದರೋಡೆಕೋರ ಕ್ಯಾನ್ಸರ್​ ರೋಗಕ್ಕೀಡಾಗಿ ಮೃತಪಟ್ಟಿದ್ದಾನೆ. ಮೃತಪಟ್ಟ ದರೋಡೆಕೋರನ ಹೆಸರು ಮುರುಗನ್​.

    ಒಂಟಿ ಮನೆಗಳು, ಚಿನ್ನದಂಗಡಿಗಳನ್ನು ದರೋಡೆ ಮಾಡುತ್ತಿದ್ದ ಮುರುಗನ್ ನೂರಕ್ಕೂ ಹೆಚ್ಚು ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಹಲವೆಡೆ ದರೋಡೆ ನಡೆಸಿದ್ದ ಆರೋಪಿ, ಕಳೆದ ವರ್ಷ ಬೆಂಗಳೂರಿನಲ್ಲಿ ಶರಣಾಗತನಾಗಿದ್ದ.

    ನೂರಕ್ಕೂ ಹೆಚ್ಚು ದರೋಡೆ ಮಾಡಿದ್ದವ ಕ್ಯಾನ್ಸರ್​ಗೆ ಬಲಿ...

    ಶರಣಾಗಿದ್ದ ದರೋಡೆಕೋರ ಮುರುಗನ್​ನಿಂದ ಪೊಲೀಸರು ಅಂದು 10 ಕೆ.ಜಿ. ಚಿನ್ನ ವಶಪಡಿಸಿಕೊಂಡಿದ್ದರು. ಪ್ರಕರಣ ದಾಖಲಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದ ಮುರುಗನ್​ಗೆ ಬಂದಿದ್ದ ಕ್ಯಾನ್ಸರ್ ಉಲ್ಬಣಿಸಿದ್ದರಿಂದ ಆತನನ್ನು ಜಯನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

    ೨೦೧೯ರಲ್ಲಿ ತಿರುಚನಾಪಲ್ಲಿಯ ಲಲಿತ್ ಜ್ಯುವೆಲ್ಲರ್ಸ್ ರಾಬರಿ ಕೇಸ್​ನ ಕಿಂಗ್​​ಪಿನ್ ಆಗಿದ್ದ ಈತ, ಅಂದು ಸುಮಾರು ೧೨ ಕೋಟಿ ರೂ. ಮೌಲ್ಯದ ಚಿನ್ನ-ವಜ್ರ-ಪ್ಲಾಟಿನಂ ದರೋಡೆ ಮಾಡಿದ್ದ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts