More

    ಬೌದ್ಧಿಕ ಜ್ಞಾನ ತುಂಬುವ ಕೆಲಸ ಬಿಜೆಪಿಯಲ್ಲಿ ಮಾತ್ರ

    ಸಾಗರ: ಬಿಜೆಪಿಯ ಸಾಧಾರಣ ಕಾರ್ಯಕರ್ತರಿಂದ ಹಿಡಿದು ಪ್ರಧಾನಿಯವರೆಗೆ ಎಲ್ಲರೂ ಪ್ರಶಿಕ್ಷಣ ವರ್ಗದಲ್ಲಿ ಪಾಲ್ಗೊಳ್ಳುತ್ತಾರೆ ಎಂದು ಬಿಜೆಪಿ ವಿಭಾಗೀಯ ಪ್ರಭಾರಿ ಗಿರೀಶ್ ಪಟೇಲ್ ಹೇಳಿದರು.

    ನಗರದ ಮಾಧವ ಮಂಗಲ ಸಭಾಭವನದಲ್ಲಿ ಮಂಗಳವಾರ ಬಿಜೆಪಿ ನಗರ ಮಂಡಲದ ಎರಡು ದಿನಗಳ ಪ್ರಶಿಕ್ಷಣ ವರ್ಗ ಉದ್ಘಾಟಿಸಿ ಮಾತನಾಡಿ, ಇತರ ರಾಜಕೀಯ ಪಕ್ಷಗಳಿಗೆ ಹೋಲಿಸಿದರೆ ಬಿಜೆಪಿಯಲ್ಲಿ ಮಾತ್ರ ಪ್ರಶಿಕ್ಷಣ ವರ್ಗದ ಮೂಲಕ ಕಾರ್ಯಕರ್ತರು ಮತ್ತು ನಾಯಕರಿಗೆ ಬೌದ್ಧಿಕ ಜ್ಞಾನ ತುಂಬುವ ಕೆಲಸ ನಡೆಯುತ್ತಿದೆ ಎಂದು ತಿಳಿಸಿದರು.

    1957ರ ಆ.8ರಿಂದ 15ರವರೆಗೆ ಮೊದಲ ಬಾರಿಗೆ ಪ್ರಶಿಕ್ಷಣ ವರ್ಗ ಯೋಜನೆ ಜಾರಿಗೆ ಬಂತು. ಜನಸಂಘದ ನಂತರ ಸ್ಥಾಪನೆಯಾದ ಬಿಜೆಪಿಯಲ್ಲೂ ಪ್ರಶಿಕ್ಷಣ ವರ್ಗವನ್ನು ಮುಂದುವರಿಸಲಾಯಿತು. ಮತದಾರರನ್ನೂ ಪ್ರಶಿಕ್ಷಣ ವರ್ಗ ವ್ಯಾಪ್ತಿಯಲ್ಲಿ ತರಬೇಕೆನ್ನುವುದು ಉಪಾಧ್ಯಾಯರ ಕಲ್ಪನೆ ಆಗಿತ್ತು ಎಂದರು.

    ಬಿಜೆಪಿ ಅಧಿಕಾರಕ್ಕಾಗಿಯೇ ಇರುವ ಪಕ್ಷವಲ್ಲ. ಅಧಿಕಾರ ಬಿಜೆಪಿಗೆ ಒಂದು ಸಲಕರಣೆ ಮಾತ್ರ. ಕಟ್ಟಕಡೆಯ ವ್ಯಕ್ತಿಯೂ ಸಮಾಜದ ಮುಖ್ಯವಾಹಿನಿಗೆ ಬರಬೇಕೆನ್ನುವುದು ಪಕ್ಷದ ಉದ್ದೇಶ. ಪ್ರಶಿಕ್ಷಣ ವರ್ಗದಲ್ಲಿ ಪಾಲ್ಗೊಳ್ಳುವ ಮೂಲಕ ಮುಂದಿನ ದಿನಗಳಲ್ಲಿ ಎದುರಾಗುವ ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ಮನಸ್ಥಿತಿಯನ್ನು ಕಾರ್ಯಕರ್ತರು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

    ಬಿಜೆಪಿ ನಗರ ಘಟಕದ ಅಧ್ಯಕ್ಷ ಕೆ.ಆರ್.ಗಣೇಶ್ ಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ತಾಲೂಕು ಅಧ್ಯಕ್ಷ ಲೋಕನಾಥ್ ಬಿಳಿಸಿರಿ, ದೀಪಕ್ ಮರೂರು ಹಾಜರಿದ್ದರು. ಸಂತೋಷ್ ಆರ್. ಶೇಟ್ ಸ್ವಾಗತಿಸಿದರು. ಮಹೇಶ್ ವಂದಿಸಿದರು. ಸತೀಶ್ ಮೊಗವೀರ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts