More

    ಕೊಡವ ಸಂಸ್ಕೃತಿಯನ್ನು ಉಳಿಸಿಬೆಳೆಸಿ

    ಮಡಿಕೇರಿ: ಕೊಡವ ಆಚಾರ, ವಿಚಾರ, ಸಂಸ್ಕೃತಿಯನ್ನು ಜನಾಂಗದ ಮಕ್ಕಳು ಮುಂದಿನ ದಿನಗಳಲ್ಲಿ ಮುಂದುವರೆಸಿಕೊಂಡು ಹೋಗುವಂತಾಗಬೇಕು ಎಂದು ಪದ್ಮಶ್ರೀ ಪುರಸ್ಕೃತೆ ಐಮುಡಿಯಂಡ ರಾಣಿ ಮಾಚಯ್ಯ ಹೇಳಿದರು.


    ನಗರದ ಕೊಡವ ಸಮಾಜದಲ್ಲಿ ಶನಿವಾರ ಆಯೋಜಸಿದ್ದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕೊಡವ ಕೇರಿಯ ೧೬ನೇ ವರ್ಷದ ಮಹಾಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.


    ಕೊಡವ ಜನಾಂಗದ ಆಚಾರ-ವಿಚಾರಕ್ಕೆ ತನ್ನದೇ ಆದ ವೈಶಿಷ್ಟ್ಯ ಹೊಂದಿದೆ. ಅದನ್ನು ಇಂದಿನ ಯುವ ಪೀಳಿಗೆ ಉಳಿಸಿಕೊಳ್ಳುವುದರ ಜತೆಗೆ ಬೆಳೆಸಬೇಕು. ಜನಾಂಗದ ಮಕ್ಕಳು ಮುಂದಿನ ದಿನಗಳಲ್ಲಿ ಕಲೆ, ಆಚಾರ, ವಿಚಾರ, ಸಂಪ್ರದಾಯವನ್ನು ಮುಂದುವರೆಸಿಕೊಂಡು ಹೋಗಬೇಕು ಎಂದು ಕಿವಿಮಾತು ಹೇಳಿದರು.


    ಕೇರಿಯ ಅಧ್ಯಕ್ಷ ಬೋಡಂಡ ಮುತ್ತಪ್ಪರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಳೆದ ಸಾಲಿನ ವಾರ್ಷಿಕ ವರದಿಯನ್ನು ಕೇರಿಯ ಕಾರ್ಯದರ್ಶಿ ಚೋಳಪಂಡ ವಿಜಯ್ ವಾಚಿಸಿದರು. ನಂತರ, ಪದ್ಮಶ್ರೀ ಪುರಸ್ಕೃತೆ ಐಮುಡಿಯಂಡ ರಾಣಿ ಮಾಚಯ್ಯ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.


    ಸಭೆಯ ನಂತರ ಮಹಿಳೆಯರು, ಪುರುಷರು ಹಾಗೂ ಮಕ್ಕಳಿಗೆ ಕ್ರೀಡಾಕೂಟ ನಡೆಯಿತು. ಇದೇ ಸಂದರ್ಭ ಎಸ್‌ಎಸ್‌ಎಲ್‌ಸಿ(ಐಸಿಎಸ್‌ಇ)ಯಲ್ಲಿ ಶೇ.೯೭.೪ ಅಂಕ ಪಡೆದ ಒಡಿಯಂಡ ನಿಹಾರಿಕ ಕಾರ್ಯಪ್ಪ, ಮೆರೈನ್ ಇಂಜಿನಿಯರಿಂಗ್‌ನಲ್ಲಿ ಚಿನ್ನದ ಪದಕ ಪಡೆದ ಬೋಡಂಡ ಮಾನ್ಸಿ ಮುತ್ತಪ್ಪ ಹಾಗೂ ಅಗ್ರಿ ಕಲ್ಚರ್ ಅಂಡ್ ಬಿಎಸ್‌ಸಿ ಇನ್ ಫುಡ್ ಸೈನ್ಸ್‌ನಲ್ಲಿ ಚಿನ್ನದ ಪದಕ ಪಡೆದ ಬಲ್ಯಾಟಂಡ ಸುಹಾನ್ ಭೀಮಯ್ಯ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.


    ನೂತನ ಆಡಳಿತ ಮಂಡಳಿ ರಚನೆ: ಎಫ್‌ಎಂಸಿ ಕೊಡವ ಕೇರಿಯ ಮುಂದಿನ ೩ ವರ್ಷಕ್ಕೆ ನೂತನ ಆಡಳಿತ ಮಂಡಳಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಚೋಳಪಂಡ ವಿಜಯ್, ಉಪಾಧ್ಯಕ್ಷರಾಗಿ ಪೂಳಂಡ ಮಧು ಬೋಪಣ್ಣ, ಗೌರವ ಕಾರ್ಯದರ್ಶಿಯಾಗಿ ಮಂದನೆರವಂಡ ಸಂಜು ಅಚ್ಚಯ್ಯ ಆಯ್ಕೆಯಾದರು.


    ಆಡಳಿತ ಮಂಡಳಿ ಸದಸ್ಯರಾಗಿ ಕೊಚ್ಚೇರ ಕವನ್, ಚಾಮೆರ ಚೀಯಣ್ಣ, ಪುದಿಯತಂಡ ಅಪ್ಪಯ್ಯ, ಬೊಳ್ಳಜಿರ ಯಮುನಾ ಅಯ್ಯಪ್ಪ, ಚೊಟ್ಟಂಡ ದಿವ್ಯ ಪ್ರದೀಪ್, ಮತ್ರಂಡ ಅಕ್ಷಿತಾರವರು ನೇಮಕಗೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts