ಬೆಂಗಳೂರು: ಪ್ರಜ್ವಲ್ ಅಭಿನಯದ ‘ಅಬ್ಬರ’ ಚಿತ್ರವು ಬಾಕ್ಸ್-ಆಫೀಸ್ನಲ್ಲಿ ಹೆಚ್ಚು ಅಬ್ಬರಿಸಲಿಲ್ಲ. ಅದರಿಂದ ಪ್ರಜ್ವಲ್ ಚಿತ್ರಜೀವನಕ್ಕೆ ಹೆಚ್ಚು ವ್ಯತ್ಯಾಸವಾಗುವುದಿಲ್ಲ. ಪ್ರಜ್ವಲ್ ಕೈಯಲ್ಲಿ ಹಲವು ಚಿತ್ರಗಳಿದ್ದು, ಈ ಪೈಕಿ ‘ಗಣ’ ಎಂಬ ಚಿತ್ರದ ಚಿತ್ರೀಕರಣ ಇತ್ತೀಚೆಗೆ ಸದ್ದಿಲ್ಲದೆ ಮುಗಿದಿದೆ.
ಇದನ್ನೂ ಓದಿ: ‘ಬ್ಯಾಡ್ ಮ್ಯಾನರ್ಸ್’ ಮುಕ್ತಾಯ; 2023ರ ಫೆಬ್ರವರಿಯಲ್ಲಿ ಬಿಡುಗಡೆ
ಚೆರಿ ಕ್ರಿಯೇಷನ್ಸ್ ಬ್ಯಾನರ್ನಲ್ಲಿ ಪಾರ್ಥು ನಿರ್ಮಿಸುತ್ತಿರುವ, ಹರಿಪ್ರಸಾದ್ ಜಕ್ಕ ನಿರ್ದೇಶಿಸುತ್ತಿರುವ ಈ ಚಿತ್ರವು ಈ ವರ್ಷದ ಆರಂಭದಲ್ಲೇ ಪ್ರಾರಂಭವಾಗಿತ್ತು. ಬೆಂಗಳೂರು ಹಾಗೂ ಮೈಸೂರಿನಲ್ಲಿ 80 ದಿನಗಳ ಚಿತ್ರೀಕರಣ ಮುಗಿಸಿ, ಚಿತ್ರಕ್ಕೆ ಈಗ ಕುಂಬಳಕಾಯಿ ಒಡೆಯಲಾಗಿದೆ.
ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ಹೊಸ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರಿಗೆ ನಾಯಕಿಯಾಗಿ ಯಶಾ ಶಿವಕುಮಾರ್ ನಟಿಸಿದ್ದಾರೆ. ಮಿಕ್ಕಂತೆ ವಿಶಾಲ್ ಹೆಗ್ಡೆ, ವೇದಿಕಾ ಕುಮಾರ್, ಶಿವರಾಜ್ ಕೆ.ಆರ್ ಪೇಟೆ, ಕೃಷಿ ತಾಪಂಡ, ಸಂಪತ್ ರಾಜ್, ರವಿ ಕಾಳೆ, ರಮೇಶ್ ಭಟ್, ಉಮೇಶ್, ‘ಸಿದ್ಲಿಂಗು’ ಶ್ರೀಧರ್, ಬಾಬು ಹಿರಣ್ಣಯ್ಯ ಮುಂತಾದವರು ನಟಿಸಿದ್ದಾರೆ.
ಇದನ್ನೂ ಓದಿ: ಈ ಚಿತ್ರದಲ್ಲಿರೋದು ಒಂದೇ ಪಾತ್ರ … ‘ರಾಘು’ ಚಿತ್ರದಲ್ಲಿ ವಿಜಯ್ ರಾಘವೇಂದ್ರ ಹೊಸ ಪ್ರಯೋಗ …
ಅನೂಪ್ ಸೀಳಿನ್ ಸಂಗೀತ ಮತ್ತು ಜೈ ಆನಂದ್ ಛಾಯಾಗ್ರಹಣ ಈ ಚಿತ್ರವು ಮುಂದಿನ ವರ್ಷ ಬಿಡುಗಡೆಯಾಗಲಿದೆ. ‘ಗಣ’ ಅಲ್ಲದೆ ‘ಮಾಫಿಯಾ’ ಮತ್ತು ‘ವೀರಂ’ ಚಿತ್ರಗಳಲ್ಲೂ ಪ್ರಜ್ವಲ್ ನಟಿಸಿದ್ದು, ಆ ಚಿತ್ರಗಳು ಸಹ ಮುಂದಿನ ವರ್ಷ ಬಿಡುಗಡಯಾಗಲಿವೆ.