More

    ಪೊಲೀಸ್ ಅಧಿಕಾರಿಗಳೇ, ರಾಜೀನಾಮೆ ಕೊಟ್ಟು ತರಕಾರಿ ಮಾರೋಕೆ ಹೋಗಿ! – ಬಿಜೆಪಿ ವಾಗ್ದಾಳಿ

    ಕೋಲ್ಕತ: ಆಡಳಿತಾರೂಢ ತೃಣಮೂಲ ಕಾಂಗ್ರೆಸ್​ನ ಭ್ರಷ್ಟತೆಯನ್ನು, ಭ್ರಷ್ಟ ನಾಯಕರನ್ನು ಎದುರಿಸೋ ತಾಕತ್ತಿಲ್ದೇ, ಅವರ ಕೈಗೊಂಬೆಗಳಂತೆ ಪೊಲೀಸರು ವರ್ತಿಸ್ತಿರೋ ಕಾರಣ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಶ್ಚಿಮ ಬಂಗಾಳದ ಬಿಜೆಪಿ ಮುಖ್ಯಸ್ಥ ದಿಲೀಪ್​ ಘೋಷ್ ಶನಿವಾರ ಪೊಲೀಸ್ ಇಲಾಖೆ ವಿರುದ್ಧ ತೀವ್ರ ವಾಗ್ದಾಳಿ ಆರಂಭಿಸಿದ್ದು, ವಿರೋಧ ಪಕ್ಷಗಳ ಬಗ್ಗೆ ಪಕ್ಷಪಾತ ನೀತಿ ಅನುಸರಿಸುತ್ತಿರುವ ಪೊಲೀಸ್ ಅಧಿಕಾರಿಗಳು ರಾಜೀನಾಮೆ ನೀಡಿ, ತರಕಾರಿ ಮಾರೋದಕ್ಕೆ ಹೋಗಿ ಎಂದು ವಾಕ್​ಪ್ರಹಾರ ನಡೆಸಿದರು.

    ದಕ್ಷ ಅಧಿಕಾರಿಗಳನ್ನು ಮೂಲೆಗುಂಪು ಮಾಡಲಾಗಿದೆ. ಭ್ರಷ್ಟ ಅಧಿಕಾರಿಗಳನ್ನು ಮುಂದಿಟ್ಟುಕೊಂಡು ಟಿಎಂಸಿ ಆಟ ಆಡ್ತಾ ಇದೆ. ಈ ಪೊಲೀಸರಿಗೆ ಬೆನ್ನಹುರಿಯೇ ಇಲ್ಲ. ಹೀಗಾಗಿ ಭ್ರಷ್ಟರ ವಿರುದ್ಧ ಸೆಟೆದು ನಿಲ್ಲೋದಕ್ಕೂ ಅವರಿಂದಾಗುತ್ತಿಲ್ಲ. ಇಂಥವರು ರಾಜೀನಾಮೆ ನೀಡಿ, ತರಕಾರಿ ಮಾರಾಟ ಮಾಡಿ ಪ್ರಾಮಾಣಿಕವಾಗಿ ಬದುಕುವುದು ಒಳಿತು ಎಂದು ಘೋಷ್​ ವಾಗ್ದಾಳಿ ನಡೆಸಿದರು.

    ಇದನ್ನೂ ಓದಿ: ಸಿರಗುಪ್ಪದಲ್ಲಿ ಗ್ರಾಮಸ್ಥರ ಪ್ರತಿಭಟನೆಗೆ ಮಣಿದು ಮದ್ಯದಂಗಡಿ ಮಚ್ಚಿಸಿದ ಅಬಕಾರಿ ಇಲಾಖೆ

    ಅವರು ನಾರ್ತ್​ 24 ಪರಗಣಾಸ್ಜಿಲ್ಲೆಯ ಬೆಲ್ಘರಿಯಾ ಪ್ರದೇಶದಲ್ಲಿ ಚಾ ಚಕ್ರ (ಚಾಯ್ ಪೇ ಚರ್ಚಾ) ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಆಡಳಿತ ಕೊನೆಯ ದಿನಗಳನ್ನು ಎಣಿಸುತ್ತಿದೆ ಎಂದು ಅವರು ಎಚ್ಚರಿಸಿದರು.

    ಇದನ್ನೂ ಓದಿ: ಶ್ರೀನಗರ ವಿಮಾನ ನಿಲ್ದಾಣದಲ್ಲಿ ಯೋಧ ಮತ್ತು ಇಬ್ಬರು ಬಾಲಕಿಯರು ಪೊಲೀಸ್ ವಶಕ್ಕೆ

    ಇದಕ್ಕೆ ಪ್ರತಿಯಾಗಿ ಟಿಎಂಸಿ ನಾಯಕರೂ ಪ್ರತಿ ವಾಗ್ದಾಳಿ ನಡೆಸಿದ್ದು, ಬಿಜೆಪಿ ಆಡಳಿತವಿರುವ ಉತ್ತರ ಪ್ರದೇಶದಲ್ಲಿ ಪೊಲೀಸರು ಲಂಗುಲಗಾಮಿಲ್ಲದೆ ಫೇಕ್​ ಎನ್​ಕೌಂಟರ್ ಮೂಲಕ ಭೀತಿ, ಆತಂಕವನ್ನು ಹುಟ್ಟುಹಾಕಿದ್ದಾರೆ. ಅದಕ್ಕಿಂತ ಪಶ್ಚಿಮ ಬಂಗಾಳ ಪೊಲೀಸರು ಎಷ್ಟೋ ವಾಸಿ. ಇಲ್ಲಿ ಪೊಲೀಸರು ಫೇಕ್ ಎನ್​ಕೌಂಟರ್ ಸ್ಕ್ವಾಡ್ ಆಗಿ ಬದಲಾಗಿಲ್ಲ. ಇನ್ನೂ ಮುಕ್ತ ಮತ್ತು ನ್ಯಾಯಸಮ್ಮತ ರೀತಿಯಲ್ಲೇ ಕೆಲಸ ಮಾಡುತ್ತಿದ್ದಾರೆ ಎಂದು ಸಮರ್ಥಿಸಿಕೊಂಡಿದ್ದಾರೆ. (ಏಜೆನ್ಸೀಸ್)

    ಕರೊನಾ ನಡುವೆಯೂ ದೇಶಾದ್ಯಂತ ಬಡವರಿಗಾಗಿ 18 ಲಕ್ಷ ಮನೆಗಳ ನಿರ್ಮಾಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts