More

    ಇತ್ತೀಚೆಗಷ್ಟೇ ಡಬಲ್​ ಮರ್ಡರ್​ ಮಾಡಿದ್ದ ಆರೋಪಿ ಮೇಲೆ ಪೊಲೀಸ್​ ಅಧಿಕಾರಿಯಿಂದ ಫೈರಿಂಗ್​; ಹಂತಕ ಆಸ್ಪತ್ರೆಗೆ ದಾಖಲು

    ಬೆಂಗಳೂರು: ಎರಡು ಕೊಲೆ ಮಾಡಿದ್ದ ಆರೋಪಿ ಮೇಲೆ ಪೊಲೀಸರು ಫೈರಿಂಗ್​ ಮಾಡಿದ ಘಟನೆ ನಗರದ ಕೆ.ಎಸ್​. ಲೇಔಟ್​​ನ ದೇವರಕೆರೆ ಬಳಿ ನಡೆದಿದೆ.

    ಸಂಜಯ್​ ಅಲಿಯಾಸ್​ ಚಿಕ್ಕಪ್ಪಿ ಕಾಲಿಗೆ ಗುಂಡು ಹೊಡೆದ ಪೊಲೀಸರು ನಂತರ ಆತನನ್ನು ಬಂಧಿಸಿ, ಆಸ್ಪತ್ರೆಗೆ ದಾಖಲಿಸಿದ್ದಾರೆ.
    ಕೆಲವೇ ದಿನಗಳ ಹಿಂದಷ್ಟೇ ಸುಬ್ರಹ್ಮಣ್ಯಪುರ ಠಾಣಾ ವ್ಯಾಪ್ತಿಯಲ್ಲಿ ಸಂಜಯ್​ ಡಬಲ್​ ಮರ್ಡರ್​ ಮಾಡಿದ್ದ. ನಿನ್ನೆ ರಾತ್ರಿ ಆತನನ್ನು ಬಂಧಿಸಲು ಪೊಲೀಸರು ತೆರಳಿದ್ದರು. ಆಗ ಸುಬ್ರಹ್ಮಣ್ಯಪುರ ಠಾಣೆ ಸಬ್​ ಇನ್ಸ್​ಪೆಕ್ಟರ್​ ಮಧು ಅವರ ಮೇಲೆ ಸಂಜಯ್​ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಲು ಮುಂದಾಗಿದ್ದಾನೆ.

    ಇದೇ ವೇಳೆ ಕೋಣನಕುಂಟೆ ಇನ್ಸ್​ಪೆಕ್ಟರ್​ ಧರ್ಮೇಂದ್ರ ಆರೋಪಿಯ ಮೇಲೆ ಫೈರಿಂಗ್​ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts