More

    ಬೋಂಡಾ ತಿಂದು…ಮಹಿಳೆ ಮೇಲೆ ಬಿಸಿ ಎಣ್ಣೆ ಎರಚಿದ್ದವನಿಗೆ ತಕ್ಕ ಶಾಸ್ತಿ ಮಾಡಿದ ಪೊಲೀಸರು

    ಬೆಂಗಳೂರು: ಬಿಸಿಬಿಸಿ ಬೋಂಡಾ ತಿಂದು, ಸಿಗರೇಟು ಸೇದಿದ್ದಲ್ಲದೆ, ಹಣ ಕೇಳಿದ್ದಕ್ಕೆ ಅಂಗಡಿ ಮಾಲೀಕಳ ಮೇಲೆ ಬಿಸಿ ಎಣ್ಣೆ ಎರಚಿ ಓಡಿ ಹೋಗಿದ್ದವನಿಗೆ ಪೊಲೀಸರು ತಕ್ಕ ಶಾಸ್ತಿ ಮಾಡಿದ್ದಾರೆ.

    ಮೇಘಲಾ ಎಂಬುವರು ಸಂಪಿಗೆಹಳ್ಳಿಯಲ್ಲಿ ಚಿಕ್ಕ ಹೋಟೆಲ್​ ಇಟ್ಟುಕೊಂಡಿದ್ದರು. ರೌಡಿ ಹನೀಫ್​ ಬುಧವಾರ ಸಂಜೆ ತನ್ನ ಸಹಚರರ ಜತೆ ಅಲ್ಲಿಗೆ ಹೋಗಿ ಬೋಂಡಾ ತಿಂದಿದ್ದ. ನಂತರ ಸಿಗರೇಟ್​ ಪಡೆದಿದ್ದ. ಆದರೆ ಹಣ ಕೊಡದೆ ಹೋಗುತ್ತಿರುವವನನ್ನು ತಡೆದ ಮೇಘಲಾ, ಕಾಸು ಕೊಡು ಎಂದಿದ್ದರು. ಅಷ್ಟಕ್ಕೇ ಸಿಟ್ಟಾದ ಆತ ಬಾಂಡಲಿಯಲ್ಲಿದ್ದ ಬಿಸಿ ಎಣ್ಣೆ ಎರಚಿ ಓಡಿ ಹೋಗಿದ್ದ. ಇದನ್ನೂ ಓದಿ: ಬಂಧನ ಭೀತಿಯಲ್ಲಿ ತನಗೆ ಕರೊನಾ ಇದೆಯೆಂದು ಅನುಶ್ರೀ ಡ್ರಾಮ ಮಾಡ್ತಾರಂತೆ!

    ಸಂಪಿಗೆಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದರು. ಹನೀಫ್ ಶನಿವಾರ ಬೆಳಗ್ಗೆ ಬಾಗಲೂರಿನಲ್ಲಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಕಾರ್ಯಾಚರಣೆ ನಡೆಸಿ ಬಂಧಿಸಲು ಮುಂದಾದಾದ ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದ. ಕೂಡಲೇ ಕಾರ್ಯಪ್ರವೃತ್ತರಾದ ಅಧಿಕಾರಿ ಮಲ್ಲಿಕಾರ್ಜುನ ಸಿಬ್ಬಂದಿಯ ಆತ್ಮರಕ್ಷಣೆಗಾಗಿ ಆರೋಪಿಯ ಎಡಗಾಲಿಗೆ ಗುಂಡು‌ ಹಾರಿಸಿದ್ದಾರೆ.

    ಹನೀಫ್​​ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಪ್ರಾಣಾಪಯವಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

    ಬಿಸಿ ಬೋಂಡಾ ತಿಂದ…ಸಿಗರೇಟು ಸೇದಿದ..; ಅಂಗಡಿಯವಳು ಕಾಸು ಕೇಳಿದ್ದಕ್ಕೆ ವಿಕೃತಿ ಮೆರೆದ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts