ನವದೆಹಲಿ: ದೇಶದಲ್ಲಿ ಕರೊನಾ ಬಿಕ್ಕಟ್ಟನ್ನು ಪ್ರಧಾನಿ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ಸೂಕ್ತವಾಗಿ ನಿರ್ವಹಣೆ ಮಾಡುತ್ತಿಲ್ಲ ಎಂದು ರಾಹುಲ್ ಗಾಂಧಿ ಸೇರಿ ಕಾಂಗ್ರೆಸ್ನ ಹಲವು ನಾಯಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಲಾಕ್ಡೌನ್ನಿಂದ ಕರೊನಾ ನಿಯಂತ್ರಣ ಸಾಧ್ಯವಿಲ್ಲ. ಟೆಸ್ಟಿಂಗ್ ಪ್ರಮಾಣ ಅಧಿಕ ಆಗಬೇಕು. ಕ್ಷಿಪ್ರ ತಪಾಸಣೆ ನಡೆಸಬೇಕು ಎಂದು ಈ ಹಿಂದೆ ರಾಹುಲ್ ಗಾಂಧಿ ಆನ್ಲೈನ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು. ಟ್ವೀಟ್ಗಳ ಮೂಲಕವೂ ಮೋದಿಯವರಿಗೆ ಕೆಲವು ಸಲಹೆ ನೀಡಿದ್ದರು.
ಇಂದು ಮತ್ತೆ ಟ್ವೀಟ್ ಮಾಡಿ ಕರೊನಾ ತಪಾಸಣೆಯ ವೇಗ ಹೆಚ್ಚಬೇಕು ಎಂದು ಹೇಳಿದ್ದಾರೆ. ಕರೊನಾ ನಿಯಂತ್ರಣಕ್ಕೆ ಸಾಮೂಹಿಕ ಯಾದ್ರಿಚ್ಛಿಕ ತಪಾಸಣೆ ನಡೆಯಬೇಕು ಎಂದು ತಜ್ಞರೇ ಒಪ್ಪಿಕೊಂಡಿದ್ದಾರೆ. ಭಾರತದಲ್ಲಿ ಸದ್ಯ ಒಂದು ದಿನಕ್ಕೆ 40,000 ಕರೊನಾ ತಪಾಸಣೆ ಆಗುತ್ತಿದೆ. ದಿನವೊಂದಕ್ಕೆ 1 ಲಕ್ಷ ಮಂದಿಗೆ ಕರೊನಾ ತಪಾಸಣೆ ಮಾಡುವಂತಾಗಲು ಕೆಲವು ಅಡಚಣೆಗಳು ಉಂಟಾಗಿವೆ. ಟೆಸ್ಟಿಂಗ್ ಕಿಟ್ಗಳು ಸಂಗ್ರಹ ಇದ್ದರೂ ಕೂಡ ಅದು ಆಗುತ್ತಿಲ್ಲ. ಹಾಗಾಗಿ ಪ್ರಧಾನಿ ನರೇಂದ್ರ ಮೋದಿಯವರು ಮೊದಲು ತಪಾಸಣಾ ಪ್ರಕ್ರಿಯೆಗೆ ಉಂಟಾಗಿರುವ ಅಡ್ಡಿಯನ್ನು ಸರಿಪಡಿಸಬೇಕು ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ರಾಹುಲ್ ಗಾಂಧಿಯಷ್ಟೇ ಅಲ್ಲದೆ ಕಾಂಗ್ರೆಸ್ನ ಮನಮೋಹನ್ಸಿಂಗ್, ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ಮತ್ತಿತರ ನಾಯಕರೂ ಸಹ ಪ್ರಧಾನಿ ಮೋದಿಯವರ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಈಗ ತೆಗೆದುಕೊಳ್ಳುತ್ತಿರುವ ಕ್ರಮ ತೃಪ್ತಿದಾಯಕವಾಗಿಲ್ಲ ಎಂದಿದ್ದಾರೆ.
ಕಾಂಗ್ರೆಸ್ ನಾಯಕರು ಮಾತನಾಡಿರುವ ವಿಡಿಯೋವೊಂದನ್ನು ಪಕ್ಷದ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ. ತಪಾಸಣೆ ಮತ್ತು ಟ್ರೇಸಿಂಗ್ ಇವೆರಡು ಕರೊನಾ ವಿರುದ್ಧ ಹೋರಾಟಕ್ಕೆ ಪ್ರಮುಖ ಮಾರ್ಗಗಳು. ಹಾಗೇ ಅತಂತ್ರವಾಗಿರುವ ವಲಸೆ ಕಾರ್ಮಿಕರೊಂದಿಗೆ ಮಾನವೀಯತೆಯಿಂದ ವರ್ತಿಸಬೇಕು. ಅವರಿಗೆ ರಕ್ಷಣೆ ಮತ್ತು ಆರ್ಥಿಕ ಭದ್ರತೆಯನ್ನು ಒದಗಿಸಬೇಕು ಎಂದು ಈ ವಿಡಿಯೋಕ್ಕೆ ಕ್ಯಾಪ್ಷನ್ ಬರೆಯಲಾಗಿದೆ. (ಏಜೆನ್ಸೀಸ್)
ಅನಂತ್ ಕುಮಾರ ಹೆಗಡೆ ಖಾತೆ ಕ್ಲೋಸ್ ಮಾಡಿದ ಟ್ವಿಟರ್! ಅಬ್ಬಾ… ಟ್ವಿಟರ್ ಬೇಡಿಕೆ ಏನಿದೆ ನೋಡಿ!