More

    ಅಸ್ತಿತ್ವಕ್ಕಾಗಿ ಹೋರಾಡುವ ಪಕ್ಷಗಳನ್ನು ನೋಡಿ ನಗಬೇಡಿ: ಮೋದಿ ಹೀಗಂದಿದ್ದೇಕೆ?

    ಹೈದರಾಬಾದ್​: ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಹೈದರಾಬಾದ್​ನಲ್ಲಿ ನಡೆಯುತ್ತಿದ್ದು, ಅದರಲ್ಲಿ ಭಾಗಿಯಾಗಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಪಕ್ಷ ಸಂಘಟನೆಯ ನಿಟ್ಟಿನಲ್ಲಿ ಬಹಳಷ್ಟು ಮಾತನಾಡಿದ್ದು, ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

    ಸಭೆಯಲ್ಲಿ ಏನೇನಾಯಿತು ಎನ್ನುವ ಕುರಿತು ಬಿಜೆಪಿ ನಾಯಕ ರವಿಶಂಕರ್ ಪ್ರಸಾದ್ ಸುದ್ದಿಗಾರರಿಗೆ ತಿಳಿಸಿದ್ದು, ಮೋದಿಯವರು ಹೇಳಿರುವ ಕೆಲವು ಮಾತುಗಳನ್ನೂ ಅವರು ಹಂಚಿಕೊಂಡಿದ್ದಾರೆ. ದೇಶದಲ್ಲಿ ಕಳೆದ ಕೆಲವು ವರ್ಷಗಳಲ್ಲಿ ಬಿಜೆಪಿಯ ಕ್ಷಿಪ್ರ ಬೆಳವಣಿಗೆಯನ್ನು ಮೋದಿ ಗುರುತಿಸಿ ಮಾತನಾಡಿದ್ದು, ಈ ನಿಟ್ಟಿನಲ್ಲಿ ತೆಲಂಗಾಣ, ಪಶ್ಚಿಮಬಂಗಾಲ ಮತ್ತು ಕೇರಳ ಮುಂತಾದ ರಾಜ್ಯಗಳಲ್ಲಿನ ಕಾರ್ಯಕರ್ತರ ಶ್ರಮದ ಕುರಿತು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ ಎಂದು ರವಿಶಂಕರ್ ಪ್ರಸಾದ್ ತಿಳಿಸಿದ್ದಾರೆ.

    ಇದನ್ನೂ ಓದಿ: ರಾಜಧಾನಿಯಲ್ಲೇ ಪತ್ತೆಯಾಯ್ತು ಮಹಿಳೆಯ ಸುಟ್ಟು ಕರಕಲಾದ ದೇಹ!; ಇನ್ನೂ ಪತ್ತೆಯಾಗದ ಗುರುತು..

    ಹಾಗೆಯೇ ಅಸ್ತಿತ್ವಕ್ಕಾಗಿ ಹೋರಾಡುತ್ತಿರುವ ಇತರ ಕೆಲವು ಪಕ್ಷಗಳನ್ನು ನೋಡಿ ನಾವು ನಗಬಾರದು, ಅವುಗಳನ್ನು ಅಣಕಿಸಲೂ ಬಾರದು. ಬದಲಿಗೆ ನಾವು ಅಂಥ ಪಕ್ಷಗಳನ್ನು ನೋಡಿ ಕಲಿಯಬೇಕು ಮತ್ತು ಅವರು ಮಾಡಿದಂಥ ತಪ್ಪುಗಳನ್ನು ನಾವು ಮಾಡದಂತೆ ನೋಡಿಕೊಳ್ಳಬೇಕು ಎಂಬುದಾಗಿ ಮೋದಿ ಹೇಳಿದ್ದನ್ನು ರವಿಶಂಕರ್ ಪ್ರಸಾದ್ ತಿಳಿಸಿದ್ದಾರೆ.

    ಕದ್ದ ಬಳಿಕ ಫ್ರಿಡ್ಜ್​ನಲ್ಲಿದ್ದ ತಿಂಡಿ ತಿನ್ನುತ್ತಿದ್ದ ಕಳ್ಳ; ಪರಾರಿಯಾಗಲು ಯತ್ನಿಸಿದವನನ್ನು ಹಿಡಿದುಕೊಡ್ತು ಸಾಕುನಾಯಿ!

    ‘ನಮಸ್ಕಾರ ದೇವರು’ ಅಂತ ಹೇಳೋದ್ಯಾಕೆ ಡಾಕ್ಟರ್​ ಬ್ರೋ?; ಹಣ ಬೇಕಾದಾಗ ಯಾವ ಹೋಟೆಲ್​ಗೆ ಹೋಗ್ತಾರೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts