ಭೋಪಾಲ್: ಕರೊನಾ ವೈರಸ್ನಿಂದ ಚೇತರಿಸಿಕೊಂಡಿರುವ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ನಂತರ ಟ್ವೀಟ್ ಮೂಲಕ, ಪ್ರಧಾನಮಂತ್ರಿಯವರು ಐದು ಶತಮಾನಗಳ ನಾಯಕ ಎಂದು ಹೊಗಳಿದ್ದಾರೆ.
ಈ ದೇಶ ಅನೇಕ ಸಮರ್ಥ ನಾಯಕರನ್ನು ನೋಡಿದೆ. ಅವರೆಲ್ಲರೂ ರಾಷ್ಟ್ರವನ್ನು ಮುನ್ನಡೆಸಿದ್ದಾರೆ. ಅಷ್ಟೇ ಅಲ್ಲ, ದಶಕ, ಶತಮಾನಗಳಿಗೆ ಒಬ್ಬರಂತೆ ಆಗಿ ಹೋದ ನಾಯಕರನ್ನೂ ದೇಶ ಕಂಡಿದೆ. ಆದರೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಐದು ಶತಮಾನಗಳ ನಾಯಕ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ದಿಶಾ ಮರಣೋತ್ತರ ವರದಿಯಲ್ಲಿದೆ ನಿಗೂಢತೆ: ಮತ್ತೊಂದು ತಿರುವು ಪಡೆಯುತ್ತಾ ಆತ್ಮಹತ್ಯೆ ಕೇಸ್!
ಹಾಗೇ ಇನ್ನೊಂದು ಟ್ವೀಟ್ನಲ್ಲಿ, ಭಾರತದ ಜನಪ್ರಿಯ ಪ್ರಧಾನಮಂತ್ರಿಯವರ ನಾಯಕತ್ವದಲ್ಲಿ 500 ವರ್ಷಗಳ ಇತಿಹಾಸ ಇರುವ ವಿವಾದಕ್ಕೆ ತೆರೆಬಿದ್ದಿದೆ. ಹಾಗೇ, ಶ್ರೀರಾಮನ ಭವ್ಯ ಮಂದಿರ ನಿರ್ಮಾಣಕ್ಕೆ ದಾರಿಯಾಗಿದೆ. ಇವೆಲ್ಲ ಸಾಧ್ಯವಾಗಿದ್ದು ಪ್ರಧಾನಿ ಮೋದಿಯವರ ಇಚ್ಛಾಶಕ್ತಿ ಮತ್ತು ಶ್ರೀರಾಮನ ಆಶೀರ್ವಾದದಿಂದ ಎಂದು ಸಿಎಂ ಚೌಹಾಣ್ ಹೇಳಿದ್ದಾರೆ.
ಕೊವಿಡ್ನಿಂದ ಗುಣಮುಖರಾಗಿ ಮನೆಗೆ ಬಂದಿರುವ ಸಿಎಂ ಶಿವರಾಜ್ ಚೌಹಾಣ್ ಅವರು ಮನೆಯಲ್ಲೇ ಕುಳಿತು ಶ್ರೀರಾಮಮಂದಿರ ಶಿಲಾನ್ಯಾಸ ಸಮಾರಂಭವನ್ನು ವೀಕ್ಷಿಸಿದ್ದಾರೆ. (ಏಜೆನ್ಸೀಸ್)