More

    ‘ಪ್ರಧಾನಿ ಮೋದಿಯವರ ಇಚ್ಛಾಶಕ್ತಿ…ಶ್ರೀರಾಮನ ಆಶೀರ್ವಾದವೇ ಮಂದಿರ ನಿರ್ಮಾಣಕ್ಕೆ ಕಾರಣ’

    ಭೋಪಾಲ್​: ಕರೊನಾ ವೈರಸ್​ನಿಂದ ಚೇತರಿಸಿಕೊಂಡಿರುವ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್​ ಸಿಂಗ್​ ಚೌಹಾಣ್​ ಅವರು ಆಸ್ಪತ್ರೆಯಿಂದ ಡಿಸ್​​ಚಾರ್ಜ್​ ಆಗಿದ್ದಾರೆ. ನಂತರ ಟ್ವೀಟ್​ ಮೂಲಕ, ಪ್ರಧಾನಮಂತ್ರಿಯವರು ಐದು ಶತಮಾನಗಳ ನಾಯಕ ಎಂದು ಹೊಗಳಿದ್ದಾರೆ.

    ಈ ದೇಶ ಅನೇಕ ಸಮರ್ಥ ನಾಯಕರನ್ನು ನೋಡಿದೆ. ಅವರೆಲ್ಲರೂ ರಾಷ್ಟ್ರವನ್ನು ಮುನ್ನಡೆಸಿದ್ದಾರೆ. ಅಷ್ಟೇ ಅಲ್ಲ, ದಶಕ, ಶತಮಾನಗಳಿಗೆ ಒಬ್ಬರಂತೆ ಆಗಿ ಹೋದ ನಾಯಕರನ್ನೂ ದೇಶ ಕಂಡಿದೆ. ಆದರೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಐದು ಶತಮಾನಗಳ ನಾಯಕ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ದಿಶಾ​ ಮರಣೋತ್ತರ ವರದಿಯಲ್ಲಿದೆ ನಿಗೂಢತೆ: ಮತ್ತೊಂದು ತಿರುವು ಪಡೆಯುತ್ತಾ ಆತ್ಮಹತ್ಯೆ ಕೇಸ್​!

    ಹಾಗೇ ಇನ್ನೊಂದು ಟ್ವೀಟ್​ನಲ್ಲಿ, ಭಾರತದ ಜನಪ್ರಿಯ ಪ್ರಧಾನಮಂತ್ರಿಯವರ ನಾಯಕತ್ವದಲ್ಲಿ 500 ವರ್ಷಗಳ ಇತಿಹಾಸ ಇರುವ ವಿವಾದಕ್ಕೆ ತೆರೆಬಿದ್ದಿದೆ. ಹಾಗೇ, ಶ್ರೀರಾಮನ ಭವ್ಯ ಮಂದಿರ ನಿರ್ಮಾಣಕ್ಕೆ ದಾರಿಯಾಗಿದೆ. ಇವೆಲ್ಲ ಸಾಧ್ಯವಾಗಿದ್ದು ಪ್ರಧಾನಿ ಮೋದಿಯವರ ಇಚ್ಛಾಶಕ್ತಿ ಮತ್ತು ಶ್ರೀರಾಮನ ಆಶೀರ್ವಾದದಿಂದ ಎಂದು ಸಿಎಂ ಚೌಹಾಣ್​ ಹೇಳಿದ್ದಾರೆ.

    ಕೊವಿಡ್​ನಿಂದ ಗುಣಮುಖರಾಗಿ ಮನೆಗೆ ಬಂದಿರುವ ಸಿಎಂ ಶಿವರಾಜ್​ ಚೌಹಾಣ್​ ಅವರು ಮನೆಯಲ್ಲೇ ಕುಳಿತು ಶ್ರೀರಾಮಮಂದಿರ ಶಿಲಾನ್ಯಾಸ ಸಮಾರಂಭವನ್ನು ವೀಕ್ಷಿಸಿದ್ದಾರೆ. (ಏಜೆನ್ಸೀಸ್​)

    ಪ್ರೇಯಸಿಗೆ ಮದುವೆ ಪ್ರಪೋಸ್​ ಮಾಡಲು ಮನೆಯನ್ನೆಲ್ಲ ಅಲಂಕರಿಸಿದ; ಆದರೆ ಆಕೆಯನ್ನು ಕರೆದುಕೊಂಡು ಬರುವಷ್ಟರಲ್ಲಿ ಕಾದಿತ್ತು ಬಿಗ್ ಶಾಕ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts