ಹರಪನಹಳ್ಳಿ: ಕ್ರೀಡೆಯಲ್ಲಿ ಸೋಲು, ಗೆಲುವು ಲೆಕ್ಕಿಸದೆ ಭಾಗವಹಿಸುವುದು ಕಲಿಯಿರಿ ಎಂದು ತಾಲೂಕು ವಾಲ್ಮೀಕಿ ಸಮಾಜದ ಅಧ್ಯಕ್ಷೆ ಎಚ್.ಟಿ.ವನಜಾಕ್ಷಿ ಶಿವಯೋಗಿ ಹೇಳಿದರು.
ಇದನ್ನೂ ಓದಿ: ಕಮರಿಹೋದ ಖೋಖೋ ಆಟಗಾರರ ಕನಸು; ಅನುದಾನ ಕೊರತೆಯಿಂದ ಎಂದ ಕುಲಪತಿ ವಿರುದ್ಧ ಆಕ್ರೋಶ
ತಾಲೂಕಿನ ಹಲುವಾಗಲುನಲ್ಲಿ ನಿಜಲಿಂಗಪ್ಪಾಜಿ ಸೇವಾ ಸಮಿತಿ ಆಯೋಜಿಸಿದ್ದ ಹೆಚ್ಪಿಎಲ್ ಸೀಜನ್ ಒನ್ ಕ್ರಿಕೆಟ್ ಟ್ರೂನ್ಮೆಂಟ್ನಲ್ಲಿ ಗೆದ್ದವರಿಗೆ ಟ್ರೋಫಿ ನೀಡಿ ಮಾತನಾಡಿದರು.
ಕ್ರೀಡೆಯಿಂದ ಮಾನಸಿಕ, ದೈಹಿಕವಾಗಿ ಸದೃಢರಾಗಲು ಸಾಧ್ಯ. ಯುವಜನತೆ ಸಂಘಟಿತರಾಗಿ ನಡೆಸುವ ಕ್ರೀಡೆ, ಮನೋರಂಜನಾ ಕಾರ್ಯಕ್ರಮಗಳಿಗೆ ಸಹಕಾರ ನೀಡುವುದಾಗಿ ಹೇಳಿದರು.
ಜೈ ಶ್ರೀರಾಮ, ಜೈಭಗವಾನ ತಂಡದವರಿಗೆ ಬಹುಮಾನ ವಿತರಿಸಲಾಯಿತು. ಗ್ರಾಪಂ ಸದಸ್ಯರಾದ ಮಂಜಪ್ಪ, ರಾಹುಲ್, ಭೋವಿ ವೆಂಕಟೇಶ್, ರಾಮಣ್ಣ, ಕೆ.ಗಂಗಪ್ಪ, ಚಿರಸ್ತಹಳ್ಳಿ ಕೆ.ಹನುಮಂತಪ್ಪ ತರರು ಇದ್ದರು.