More

    ಹಸುಗೂಸನ್ನು ಬಾವಿಗೆ ಬಿಟ್ಟು ಹರಕೆ ತೀರಿಸುವ ಜನ!

    ಬಂಕಾಪುರ (ಹಾವೇರಿ): ಬಂಕಾಪುರ ಪಟ್ಟಣದ ಸೈಯದ್ ಅಲ್ಲಾವುದ್ದೀನ್ ಶಾ ಖಾದ್ರಿ ದರ್ಗಾದ ಬಳಿ ಹಸುಗೂಸುಗಳನ್ನು ತೊಟ್ಟಿಲಲ್ಲಿ ಹಾಕಿ ಬಾವಿಯಲ್ಲಿ ಬಿಟ್ಟು ಹರಕೆ ತೀರಿಸುತ್ತಿರುವ ವಿಚಿತ್ರ ಆಚರಣೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಮಕ್ಕಳಿಲ್ಲದ ದಂಪತಿ ದರ್ಗಾಕ್ಕೆ ಪೂಜೆ ಸಲ್ಲಿಸಿ ಹರಕೆ ಹೊತ್ತು ಮಕ್ಕಳಾದ ನಂತರ ಮಗುವನ್ನು ತೊಟ್ಟಿಲಲ್ಲಿ ಹಾಕಿ ದರ್ಗಾದ ಬಾವಿಯಲ್ಲಿ ತೂಗುಬಿಟ್ಟು ನೀರು ಮುಟ್ಟಿಸುವ ಮೂಢನಂಬಿಕೆ ಆಚರಣೆ ಮಾಡಲಾಗುತ್ತಿದೆ.

    ಸುದ್ದಿ ತಿಳಿಯುತ್ತಲೆ ಉಪವಿಭಾಗಾಧಿಕಾರಿ, ಜಿಲ್ಲಾ ಶಿಶು ಅಭಿವೃದ್ಧಿ ಅಧಿಕಾರಿಗಳ ತಂಡ ಮಂಗಳವಾರ ದರ್ಗಾಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಉಪವಿಭಾಗಾಧಿಕಾರಿ ಅನ್ನಪೂರ್ಣ ಮುದಕಮ್ಮನವರ ನೇತೃತ್ವದ ಅಧಿಕಾರಿಗಳ ತಂಡ, ಅಂಜುಮನ್ ಸಂಸ್ಥೆ ಸದಸ್ಯರು ಮತ್ತು ದರ್ಗಾ ಸಮಿತಿಯವರನ್ನು ವಿಚಾರಣೆಗೆ ಒಳಪಡಿಸಿ ಸೂಕ್ತ ಕ್ರಮ ಜರುಗಿಸುವಂತೆ ಪಿಎಸ್‌ಐ ಸಂತೋಷ ಪಾಟೀಲರಿಗೆ ಸೂಚನೆ ನೀಡಿತು.

    ‘‘ವೈರಲ್ ಆದ ವಿಡಿಯೋದಲ್ಲಿ ಚಿಕ್ಕ ಮಕ್ಕಳನ್ನು ಬಾವಿಯಲ್ಲಿ ಬಿಟ್ಟು ಮಕ್ಕಳ ಜೀವದ ಜತೆ ಚೆಲ್ಲಾಟ ಆಡುತ್ತಿರುವ ಘಟನೆ ಗಮನಿಸಿದ್ದೇವೆ. ಈ ರೀತಿ ಮಾಡುವುದು ಕಾನೂನು ಪ್ರಕಾರ ಅಪರಾಧ. ಈ ಘಟನೆಗೆ ಕಾರಣರಾದ ವ್ಯಕ್ತಿಗಳ ಮೇಲೆ ಇಲಾಖೆ ವತಿಯಿಂದ ಕಾನೂನು ಕ್ರಮ ಜರುಗಿಸಲಾಗುವುದು’’ ಎಂದು ಜಿಲ್ಲಾ ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿ ಪರಶುರಾಮ ಶೆಟ್ಟೆಪ್ಪನವರ ತಿಳಿಸಿದರು.

    ಕರೊನಾದ ಸಾವಿನ ಕುಣಿಕೆಯಿಂದ ಪಾರು ಮಾಡುತ್ತಿದೆ ಈ ಔಷಧ…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts