More

    ರಾಮ್​ಚರಣ್​, ಅಲ್ಲು ಅರ್ಜುನ್​ಗೆ ಥ್ಯಾಂಕ್ಸ್​ ಹೇಳಿದ ಪವನ್​ ಕಲ್ಯಾಣ್​ …

    ಪವನ್​ ಕಲ್ಯಾಣ್​ ಥ್ಯಾಂಕ್ಸ್​ ಹೇಳಿದ್ದಾರೆ. ಸಾಮಾನ್ಯವಾಗಿ ಸಿನಿಮಾ ನಟ-ನಟಿಯರು ತಮ್ಮ ಚಿತ್ರಗಳನ್ನು ನೋಡಿ ಪ್ರೋತ್ಸಾಹಿಸುವ ಜನರಿಗೆ ಥ್ಯಾಂಕ್ಸ್​ ಹೇಳುವುದು ವಾಡಿಕೆ. ಆದರೆ, ಪವನ್​ ಕಲ್ಯಾನ್​ ಧನ್ಯವಾದಗಳನ್ನು ಸಲ್ಲಿಸಿರುವುದು ನಟರಾದ ರಾಮ್​ಚರಣ್​ ತೇಜ ಮತ್ತು ಅಲ್ಲು ಅರ್ಜುನ್​ಗೆ.

    ಇದನ್ನೂ ಓದಿ: ಕಿಚ್ಚನ ನಾಯಕಿಗೆ ಬಾಲಿವುಡ್​ ಮಂದಿಯಿಂದ ಲೈಂಗಿಕ ಕಿರುಕುಳ!

    ಧನ್ಯವಾದ ಹೇಳುವಂತದ್ದನ್ನು ಅವರೇನು ಮಾಡಿದರು ಎಂಬ ಪ್ರಶ್ನೆ ಬರುವುದು ಸಹಜ. ಉತ್ತರ ಇಲ್ಲಿದೆ. ಪವನ್​ ಕಲ್ಯಾಣ್​ ಅವರ ಅಭಿಮಾನಿಗಳ ಕುಟುಂಬಗಳಿಗೆ ರಾಮ್​ಚರಣ್​ ತೇಜ ಮತ್ತು ಅಲ್ಲು ಅರ್ಜುನ್​ಗೆ ಥ್ಯಾಂಕ್ಸ್​ ಹೇಳಿದ್ದಾರೆ. ಅದಕ್ಕೆ ಕಾರಣವೂ ಇದೆ.

    ಇತ್ತೀಚೆಗೆ ಪವನ್​ ಕಲ್ಯಾಣ್​ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಇದಕ್ಕೂ ಒಂದು ದಿನ ಮುನ್ನ ಚಿತ್ತೂರಿನ ಮೂವರು ಪವನ್​ ಅಭಿಮಾನಿಗಳು, ತಮ್ಮ ನೆಚ್ಚಿನ ನಟನಿಗೆ ಶುಭ ಹಾರೈಸುವ ಫ್ಲೆಕ್ಸ್​ಗಳನ್ನು ಹಾಕುವ ಸಂದರ್ಭದಲ್ಲಿ ಕರೆಂಟ್​ ಹೊಡೆದು ಸತ್ತಿದ್ದರು. ಈ ವಿಷಯ ಕೇಳಿ ಪವನ್​ ಕಂಗಾಲಾಗಿದ್ದಷ್ಟೇ ಅಲ್ಲ, ಮೃತರ ಕುಟುಂಬಗಳಿಗೆ ತಮ್ಮ ಕೈಲಾದ ಸಹಾಯ ಮಾಡಿದ್ದರು.

    ಬರೀ ಪವನ್​ ಕಲ್ಯಾಣ್​ ಅಷ್ಟೇ ಅಲ್ಲ, ರಾಮ್​ಚರಣ್​ ತೇಜ ಮತ್ತು ಅಲ್ಲು ಅರ್ಜುನ್​ ಇಬ್ಬರೂ ಮೃತರ ಕುಟುಂಬಗಳಿಗೆ ಸಹಾಯ ಮಾಡಿದ್ದಾರೆ. ರಾಮ್​ಚರಣ್​ ತೇಜ ಮೂವರ ಕುಟುಂಬಗಳಿಗೆ ತಲಾ ಎರಡೂವರೆ ಲಕ್ಷ ರೂಪಾಯಿಗಳನ್ನು ಕೊಟ್ಟರೆ, ಅಲ್ಲು ಅರ್ಜುನ್​ ತಲಾ ಎರಡು ಲಕ್ಷ ರೂಪಾಯಿಗಳನ್ನು ಕೊಟ್ಟಿದ್ದಾರೆ.

    ಇದನ್ನೂ ಓದಿ: ಸೈಫ್​ ಬೇಡ; ರಾಣಾ ಇರಲಿ … ಪ್ರಭಾಸ್​ಗೆ ಅಭಿಮಾನಿಗಳ ಮನವಿ

    ಈ ನಟರ ಒಳ್ಳೆಯ ಕೆಲಸಗಳನ್ನು ನೋಡಿ ಖುಷಿಯಾಗಿರುವ ಪವನ್​ ಕಲ್ಯಾಣ್​, ಸೋಷಿಯಲ್​ ಮೀಡಿಯಾದಲ್ಲಿ ಧನ್ಯವಾದಗಳನ್ನು ಸಲ್ಲಿಸಿದ್ದಾರೆ. ‘ನಿಮ್ಮ ಈ ಕೆಲಸ ಜನರ ಮನಸ್ಸಿನಲ್ಲಿ ಯಾವತ್ತೂ ಶಾಶ್ವತವಾಗಿ ಉಳಿಯುತ್ತದೆ’ ಎಂದು ಹೇಳಿಕೊಂಡಿದ್ದಾರೆ.

    ಸುಶಾಂತ್​ ಸಿಂಗ್​ ಮೇಣದ ಪ್ರತಿಮೆ ನಿರ್ಮಾಣಕ್ಕೆ ಅಭಿಮಾನಿಗಳಿಂದಲೇ ಅಭಿಯಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts