More

    ಗೋಮಾಳ ಜಮೀನು ಒತ್ತುವರಿಗೆ ತೆರವಿಗೆ ಆಗ್ರಹ

    ಪರಶುರಾಮಪುರ: ಕೋಟೆಓಬಳಾಪುರ ಹೊರವಲಯದ ಸರ್ಕಾರಿ ಗೋಮಾಳವನ್ನು ಅತಿಕ್ರಮಣ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಶನಿವಾರ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

    ಸರ್ವೆ ನಂ.15.16ರ 90 ಹೆಕ್ಟೇರ್ ವಿಸ್ತೀರ್ಣದ ಗೋಮಾಳ ಭೂಪ್ರದೇಶವನ್ನು ಗ್ರಾಮದ ಕೆಲವರು ಅತಿಕ್ರಮಿಸಿಕೊಂಡು ಕೃಷಿ ಚಟುವಟಿಕೆ ಕೈಗೊಂಡಿದ್ದಾರೆ. ಗ್ರಾಮದ ಭೂರಹಿತರಿಗೆ ಕೆಲ ವರ್ಷಗಳ ಹಿಂದೆ ತಲಾ ಎರಡು ಎಕರೆ ಭೂಮಿಯನ್ನು ಸರ್ಕಾರವೇ ಮಂಜೂರು ಮಾಡಿತ್ತು. ಇದನ್ನೇ ನೆಪವಾಗಿಸಿಕೊಂಡ ಕೆಲವರು ಸರ್ವೆನಂ 15,16ರ 85-90 ಎಕರೆ ಪ್ರದೇಶದಲ್ಲಿ ಶೇಂಗಾ, ತೊಗರಿ, ಹುರುಳಿ ಬಿತ್ತನೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಗ್ರಾಮಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

    ಕೋಟೆ ಓಬಳಾಪುರ ಗ್ರಾಪಂ ಸದಸ್ಯರಾದ ಚಂದ್ರಕಲಾ, ಪ್ರಮೋದ್, ಮಾಜಿ ಸದಸ್ಯ ಶಿವಾನಂದಪ್ಪ, ಮಾಜಿ ಅಧ್ಯಕ್ಷ ಗೋವಿಂದಪ್ಪ, ಮುಖಂಡರಾದ ನಾಗರಾಜು, ನಂಜುಂಡಪ್ಪ, ಮಲ್ಲಿಕಾರ್ಜುನ, ದೊಡ್ಡನರಸಿಂಹಯ್ಯ, ರುದ್ರಸ್ವಾಮಿ, ಶಿವಕುಮಾರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts