ಪರಶುರಾಮಪುರ: ಆರ್ಯವೈಶ್ಯ ಜನಸಂಘ ಮತ್ತು ಮಹಿಳಾ ಮಂಡಳಿಯಿಂದ ಗ್ರಾಮದಲ್ಲಿ ಭಾನುವಾರ ಶ್ರೀ ವಾಸವಿ ದೇವಿ ಆತ್ಮಾರ್ಪಣ ದಿನದ ಅಂಗವಾಗಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಪಂಚಾಮೃತಾಭಿಷೇಕ, ಹೋಮ, ತೀರ್ಥ ಪ್ರಸಾದ ವಿನಿಯೋಗದ ನಂತರ ಮಹಾ ಮಂಗಳಾರತಿ, ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ಅಶ್ವತ್ಥನಾರಾಯಣ, ಚಂದ್ರಶೇಖರ, ಪ್ರಕಾಶ, ಜನಾರ್ದನಶೆಟ್ಟಿ, ಕಿರಣ್ಕುಮಾರ, ಶ್ಯಾಮಸುಂದರ, ಸಂದೀಪ, ನಾಗರಾಜು, ರವಿ, ಬಾಲಾಜಿ, ವೆಂಕಟಾಚಲ ಇದ್ದರು.