More

    14ರಂದು ಪಂಚಾಚಾರ್ಯ ಯುಗಮಾನೋತ್ಸವ

    ಶಿವಮೊಗ್ಗ: ಜಿಲ್ಲಾ ಬೇಡ ಜಂಗಮ ಸಮಾಜದಿಂದ ಏ.14ರಂದು ವೀರಶೈವ ಕಲ್ಯಾಣ ಮಂದಿರದಲ್ಲಿ ಪಂಚಾಚಾರ್ಯ ಯುಗಮಾನೋತ್ಸವ ಮತ್ತು ಶಿವದೀಕ್ಷೆ (ಅಯ್ಯಚಾರ) ಹಮ್ಮಿಕೊಳ್ಳಲಾಗಿದೆ ಎಂದು ಬೇಡ ಜಂಗಮ ಸಮಾಜದ ಶಿವಮೊಗ್ಗ ತಾಲೂಕು ಅಧ್ಯಕ್ಷ ಎಚ್.ಎಂ.ಲೋಕೇಶ್ ತಿಳಿಸಿದರು.

    ಅಂದು ಬೆಳಗ್ಗೆ 5ಕ್ಕೆ ಕೋಣಂದೂರು ಬೃಹನ್ಮಠದ ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ವಟುಗಳಿಗೆ ಉಚಿತವಾಗಿ ಶಿವದೀಕ್ಷೆ ನೀಡಲಾಗುವುದು. 9.30ಕ್ಕೆ ಗಾಂಧಿ ಬಜಾರ್ ಬಸವೇಶ್ವರ ದೇವಸ್ಥಾನದಿಂದ ಪಂಚಾಚಾರ್ಯರ ಭಾವಚಿತ್ರದೊಂದಿಗೆ ದೀಕ್ಷಾ ವಟುಗಳ ಸಹಿತ ಮಂಗಳವಾದ್ಯದೊಂದಿಗೆ ವೀರಶೈವ ಕಲ್ಯಾಣ ಮಂದಿರದವರೆಗೆ ಮೆರವಣಿಗೆ ನಡೆಯಲಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
    ಬೆಳಗ್ಗೆ 11ಕ್ಕೆ ಶ್ರೀಗಳ ಸಾನ್ನಿಧ್ಯದಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಬೆಕ್ಕಿನ ಕಲ್ಮಠದ ಸಂಸ್ಕೃತ ಮಹಾವಿದ್ಯಾಲಯದ ನಿವೃತ್ತ ಉಪನ್ಯಾಸಕ ಡಾ. ಸಿ.ರೇಣುಕಾರಾಧ್ಯ ಉಪನ್ಯಾಸ ನೀಡಲಿದ್ದಾರೆ. ಬೇಡ ಜಂಗಮ ಸಮಾಜದ ಜಿಲ್ಲಾಧ್ಯಕ್ಷ ಎಚ್.ಮಲ್ಲಿಕಾರ್ಜುನ ಸ್ವಾಮಿ ಅಧ್ಯಕ್ಷತೆ ವಹಿಸುವರು ಎಂದರು.
    ಬೇಡ ಜಂಗಮ ಸಮಾಜದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಆರ್.ಸೋಮನಾಥ್ ಮಾತನಾಡಿ, ಶಿವದೀಕ್ಷೆಗಾಗಿ ಈಗಾಗಲೇ 45ಕ್ಕೂ ಹೆಚ್ಚು ವಟುಗಳು ಹೆಸರು ನೋಂದಾಯಿಸಿಕೊಂಡಿದ್ದಾರೆ ಎಂದು ತಿಳಿಸಿದರು.
    ಸಮಾಜದ ರಾಷ್ಟ್ರೀಯ ಗೌರವಾಧ್ಯಕ್ಷ ಟಿ.ಬಿ.ಸೋಮಶೇಖರಯ್ಯ, ಜಿಲ್ಲಾ ಖಜಾಂಚಿ ಉಮೇಶ್ ಹಿರೇಮಠ್, ಶಿವಮೊಗ್ಗ ತಾಲೂಕು ಖಜಾಂಚಿ ಎಸ್.ಬಸಯ್ಯ ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts