More

    ಪಾಕಿಸ್ತಾನವೇ ದಿವಾಳಿ..ಇನ್ನು ಮಾಲ್ಡೀವ್ಸ್‌ಗೆ ನೆರವು ನೀಡುತ್ತದೆಯಂತೆ!

    ಇಸ್ಲಾಮಾಬಾದ್​: ‘ಹೊಟ್ಟೆಗೆ ಹಿಟ್ಟು ಇಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂ’ ಎಂಬ ಮಾತು ಪಾಕಿಸ್ತಾನಕ್ಕೆ ಸರಿಹೊಂದುತ್ತದೆ. ಆ ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದ್ದು, ದಿವಾಳಿಯಾಗಿದೆ. ಆದರೂ ಬಿಲ್ಡಪ್​ ಕೊಟ್ಟುಕೊಳ್ಳುವುದರಲ್ಲಿ ಬಹುಷಃ ಈ ದೇಶ ಬಿಟ್ಟರೆ ಜಗತ್ತಿನಲ್ಲಿ ಮತ್ತಿನ್ಯಾವ ದೇಶವೂ ಸಿಗುವುದಿಲ್ಲ. ಇದಕ್ಕೆ ತಾಜಾ ಉದಾಹರಣೆ ಇಲ್ಲಿದೆ. ದಿವಾಳಿಯಾಗಿರುವ ದೇಶ ಇದೀಗ ಮಾಲ್ಡೀವ್ಸ್‌ಗೆ ಸಹಾಯ ಮಾಡುವುದಾಗಿ ಘೋಷಿಸಿ ನಗೆಪಾಟಲಿಗೆ ಈಡಾಗಿದೆ.

    ಇದನ್ನೂ ನೋಡಿ: ಸೊರೆನ್ ಬಂಧನ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ: ‘ನಾವು ಮಧ್ಯಪ್ರವೇಶಿಸುವುದಿಲ್ಲ’ ಎಂದಿದ್ದೇಕೆ ಸುಪ್ರೀಂ ಕೋರ್ಟ್‌?

    ಪಾಕಿಸ್ತಾನದಲ್ಲಿ ಜನ ಒಪ್ಪೊತ್ತಿನ ರೊಟ್ಟಿಗೂ ಪರದಾಡುತ್ತಿದ್ದರೆ, ಗುರುವಾರ ಮಾಲ್ಡೀವ್ಸ್ ಅಧ್ಯಕ್ಷ ಮುಯಿಝು ಮತ್ತು ಪಾಕಿಸ್ತಾನದ ಪ್ರಧಾನಿ ಅನ್ವರ್ ಉಲಕ್ ಕಾಕರ್ ಅವರು ದೂರವಾಣಿ ಸಂಭಾಷಣೆ ನಡೆಸಿದ್ದು, ಈ ಸಂದರ್ಭದಲ್ಲಿ, ಎರಡೂ ದೇಶಗಳ ಆದ್ಯತೆಗಳು ಮತ್ತು ಅಂತರಾಷ್ಟ್ರೀಯ ವೇದಿಕೆಗಳಲ್ಲಿ ಸಹಕಾರದ ಬಗ್ಗೆ ಚರ್ಚಿಸಲಾಯಿತು. ಮಾಲ್ಡೀವ್ಸ್ ಅಭಿವೃದ್ಧಿಗೆ ಅಗತ್ಯ ನೆರವು ನೀಡುವುದಾಗಿ ಪಾಕಿಸ್ತಾನದ ಪ್ರಧಾನಿ ಭರವಸೆ ನೀಡಿದ್ದಾರೆ.

    ಇದಲ್ಲದೆ, ಪರಿಸರ ಬದಲಾವಣೆಗಳ ಸವಾಲುಗಳನ್ನು ಎದುರಿಸಲು ದೇಶಕ್ಕೆ ಸಹಾಯ ಮಾಡುತ್ತದೆ ಎಂದು ಮಾಲ್ಡೀವ್ಸ್​ಗೆ ಅನ್ವರ್​ ಭರವಸೆ ನೀಡಿದ್ದಾರೆ.

    ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧಗಳು 1966 ರಲ್ಲಿ ಪ್ರಾರಂಭವಾದವು. ಮಾಲ್ಡೀವ್ಸ್‌ನ ಪ್ರಸ್ತುತ ಅಧ್ಯಕ್ಷ ಮುಯಿಝು ಚೀನಾಕ್ಕೆ ತುಂಬಾ ಹತ್ತಿರವಾಗಿದ್ದಾರೆ. ಮತ್ತೊಂದೆಡೆ, ಇಸ್ಲಾಮಾಬಾದ್ ಮತ್ತು ಬೀಜಿಂಗ್ ನಡುವೆ ಬಲವಾದ ಸಂಪರ್ಕವಿದೆ.

    ತೀವ್ರ ಆರ್ಥಿಕ ಸಂಕಷ್ಟದಲ್ಲಿರುವ ಪಾಕಿಸ್ತಾನ ಇತ್ತೀಚೆಗೆ ಚೀನಾಗೆ 2 ಬಿಲಿಯನ್ ಡಾಲರ್ ಸಾಲ ಕೇಳಿತ್ತು. ಈ ಕುರಿತು ಹಂಗಾಮಿ ಪ್ರಧಾನಿ ಅನ್ವರ್ ಅವರು ಚೀನಾದ ಪ್ರಧಾನಿ ಕಿಯಾಂಗ್ ಅವರಿಗೆ ಪತ್ರ ಬರೆದಿದ್ದಾರೆ. ಐಎಂಎಫ್​ ಪಾಕಿಸ್ತಾನದ ಬೆಳವಣಿಗೆಯ ಮುನ್ಸೂಚನೆಯನ್ನು ಶೇಕಡಾ 2 ರಷ್ಟು ಕಡಿತಗೊಳಿಸಿದೆ. ಮತ್ತು ಅಲ್ಲಿನ ಸರ್ಕಾರವು ಪಾಕಿಸ್ತಾನ ಇಂಟರ್‌ನ್ಯಾಶನಲ್ ಏರ್‌ಲೈನ್ಸ್ ಅನ್ನು ಮಾರಾಟ ಮಾಡಲು ಮತ್ತು ಕೆಲವು ಹಣಕಾಸಿನ ತೊಂದರೆಗಳನ್ನು ಪರಿಹರಿಸಲು ಆಶಿಸುತ್ತಿದೆ. ಪರಿಸ್ಥಿತಿ ಹೀಗಿದ್ದರೂ ಮಾಲ್ಡೀವ್ಸ್​ಗೆ ಸಾಲ ಘೋಷಿಸಿರುವುದು ಪಾಕಿಸ್ತಾನಿಗಳೇ ಅಪಹಾಸ್ಯ ಮಾಡುತ್ತಿದ್ದಾರೆ.

    ಬಜೆಟ್‌ನಲ್ಲಿ ಕಡಿತ: ಇತ್ತೀಚೆಗೆ ಭಾರತದ ತಾತ್ಕಾಲಿಕ ಬಜೆಟ್‌ನಲ್ಲಿ ಮಾಲ್ಡೀವ್ಸ್‌ಗೆ ನೀಡಲಾಗುತ್ತಿದ್ದ ವಾರ್ಷಿಕ ನೆರವನ್ನು ಕಡಿತಗೊಳಿಸಲಾಗಿದೆ. 2024-25ನೇ ಹಣಕಾಸು ವರ್ಷಕ್ಕೆ 600 ಕೋಟಿ ಮಂಜೂರು ಮಾಡಲಾಗಿದೆ. 2023-24ರಲ್ಲಿ 770.90 ಕೋಟಿ ರೂ. ಆರಂಭದಲ್ಲಿ ಇದನ್ನು ರೂ.400 ಕೋಟಿಗೆ ಸೀಮಿತಗೊಳಿಸಲಾಗಿತ್ತು, ಆದರೆ ನಂತರ ಅದನ್ನು ಪರಿಷ್ಕರಿಸಿ ಹೆಚ್ಚಿಸಲಾಯಿತು. 2022-23 ರಲ್ಲಿ ರೂ. 183 ಕೋಟಿ ಮಾತ್ರ. ಹಲವಾರು ವರ್ಷಗಳಿಂದ ಭಾರತವು ಆ ದೇಶಕ್ಕೆ ಅತ್ಯಧಿಕ ನೆರವು ನೀಡುತ್ತಿದೆ. ವಿಶೇಷವಾಗಿ ರಕ್ಷಣೆ, ಶಿಕ್ಷಣ, ವೈದ್ಯಕೀಯ ಮತ್ತು ಮೂಲಸೌಕರ್ಯ ಅಭಿವೃದ್ಧಿಯಲ್ಲಿ ನವದೆಹಲಿ ಕೊಡುಗೆ ನೀಡುತ್ತಿದೆ. ಉಭಯ ದೇಶಗಳ ನಡುವಿನ ರಾಜತಾಂತ್ರಿಕ ವಿವಾದದ ಹಿನ್ನೆಲೆಯಲ್ಲಿ ಇತ್ತೀಚೆಗೆ ನೆರವನ್ನು ಕಡಿತಗೊಳಿಸಲಾಗಿದೆ.

    ಮೆಗಾಸ್ಟಾರ್​ ಚಿರಂಜೀವಿ ಅಭಿನಯದ ‘ವಿಶ್ವಂಭರ ‘ದಲ್ಲಿ ಅತೀತ ಶಕ್ತಿಗಳ ಹೋರಾಟ: ಚಿತ್ರ ಬಿಡುಗಡೆ ಯಾವಾಗ? ಇಲ್ಲಿದೆ ಮಾಹಿತಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts