ನವದೆಹಲಿ: ಪ್ರಸ್ತುತ ನಡೆಯುತ್ತಿರುವ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ತನ್ನ ಕೆಟ್ಟ ಪಗ್ರದರ್ಶನದಿಂದಾಗಿ ಪಾಕಿಸ್ತಾನ ಸೆಮಿಫಿನಾಲೆಗೆ ಏರಲು ವಿಫಲವಾಗಿದ್ದು ಲೀಗ್ ಹಂತದಲ್ಲೇ ಹೊರಬಿದ್ದಿದೆ. ಇನ್ನು ಪಾಕಿಸ್ತಾನ ಕ್ರಿಕೆಟ್ನಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದರೆ ಭಾರತದಂತೆ ಬಲಿಷ್ಠ ತಂಡವಾಗುತ್ತದೆ ಎಂದು ಟೀಂ ಇಂಡಿಯಾ ಮಾಜಿ ನಾಯಕ, ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಅಭಿಪ್ರಾಯಪಟ್ಟಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ಪಾಕಿಸ್ತಾನದಲ್ಲಿ ಬಾಬರ್ ಅಜಂ, ಶಹೀನ್ ಅಫ್ರಿದಿ, ಮೊಹಮ್ಮದ್ ರಿಜ್ವಾನ್ನಂತಹ ಪ್ರತಿಭಾನ್ವಿತ ಆಟಗಾರರಿದ್ದು, ಕೆಲವು ಸಮಯೋಜಿತ ನಿರ್ಧಾರ ಹಾಗೂ ಬದಲಾವಣೆಗಳನ್ನು ಮಾಡಿದರೆ ಉತ್ತಮ ತಂಡವನ್ನು ರೂಪಿಸಬಹುದು ಎಂದು ಹೇಳಿದ್ದಾರೆ.
ಪಾಕಿಸ್ತಾನ ಕ್ರಿಕೆಟ್ ತಂಡ ಯಾವಾಗಲೂ ಬಲಿಷ್ಠವಾಗಿದೆ. ದೇಶವು ಪ್ರತಿಭಾವಂತ ಆಟಗಾರರಿಂದ ತುಂಬಿದೆ. ಶಾಹೀನ್ ಅಫ್ರಿದಿ, ಬಾಬರ್ ಅಜಮ್ ಮತ್ತು ಇಮಾಮ್-ಉಲ್-ಹಕ್ ಉತ್ತಮ ಆಟಗಾರರು. ಪಾಕಿಸ್ತಾನ ಕ್ರಿಕೆಟ್ ಕೆಲವು ಹೊಂದಾಣಿಕೆಗಳನ್ನು ಮಾಡಿಕೊಂಡರೆ ಟೀಂ ಇಂಡಿಯಾದಂತೆ ಬಲಿಷ್ಠವಾಗಬಹುದು. ಮುಂದಿನ ದಿನಗಳಲ್ಲಿ ಅವರು ಉತ್ತಮವಾಗಿ ಕಮ್ಬ್ಯಾಕ್ ಮಾಡಲಿದ್ದಾರೆ.
ಇದನ್ನೂ ಓದಿ: ನೆದರ್ಲೆಂಡ್ ವಿರುದ್ಧ 7 ವಿಶ್ವ ದಾಖಲೆಗಳನ್ನು ಬರೆಯಲು ಸಜ್ಜಾದ ಹಿಟ್ಮ್ಯಾನ್
ಭಾರತ ಕ್ರಿಕೆಟ್ ತಂಡ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರಾದ ಗಂಗೂಲಿ, ನಿಜವಾದ ಆಟಗಾರರನ್ನು ದೀರ್ಘ ಕಾಲ ಅಭ್ಯಾಸ ಹಾಗೂ ಸಾಮೂಹಿಕ ನಾಯಕತ್ವ ಅವರನ್ನು ಮತ್ತಷ್ಟು ದೃಢವಾಗಿಸುತ್ತದೆ. ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಭಾರತದ ಯಶಸ್ಸಿಗೆ ಐಪಿಎಲ್ ಏಕೈಕ ಕಾರಣವಲ್ಲ. ಐಪಿಎಲ್ ಆಡುವುದರಿಂದ ಗುಣಮಟ್ಟ ಬರಲು ಸಾಧ್ಯವಿಲ್ಲ, 4-5 ದಿನ ನಿರಂತರವಾಗಿ ಕ್ರಿಕೆಟ್ ಆಡುವುದರಿಂದ ಗುಣಮಟ್ಟ ಬರುತ್ತದೆ, ನೀವು ಹೆಚ್ಚು ಟಿ 20 ಕ್ರಿಕೆಟ್ ಆಡಿದರೆ ಈ ರೀತಿಯ ಪ್ರದರ್ಶನವನ್ನು ನೀಡಲು ಸಾಧ್ಯವಾಗುತ್ತದೆ.
ನಾನು ಯಾವಾಗಲೂ ಹೇಳುತ್ತೇನೆ. ಟಿ-20s ಆಡಿ, ಟಿ-20ಗಳಿಂದ ಹಣ ಸಂಪಾದಿಸಿ ಆದರೆ ನೀವು ಆಟಗಾರರಾಗಲು ಬಯಸಿದರೆ, 4-5 ದಿನ ನಿರಂತರವಾಗಿ ಕ್ರಿಕೆಟ್ ಆಡಬೇಕು. ನನ್ನ ಪ್ರಕಾರ IPL ಮಾತ್ರವಲ್ಲ, ಇಡೀ ಭಾರತೀಯ ಕ್ರಿಕೆಟ್ ಮೂಲಸೌಕರ್ಯವು ಅದ್ಭುತವಾಗಿದೆ. ಹಲವಾರು ತರಹಗಳಿವೆ. ಅನೇಕ ಆಟಗಾರರು ಮತ್ತು ನಾವು ಆ ರೀತಿಯಲ್ಲಿ ಅದೃಷ್ಟವಂತರು ಎಂದು ಸೌರವ್ ಗಂಗೂಲಿ ಅಭಿಪ್ರಾಯಪಟ್ಟಿದ್ದಾರೆ.