More

    ಪಾದರಾಯನಪುರ ಗಲಭೆ: ರಾಜ್ಯ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ ಸಂಸದ ಡಿ.ಕೆ.ಸುರೇಶ್​…

    ಆನೇಕಲ್: ಪಾದರಾಯನಪುರದಲ್ಲಿ ಗಲಭೆ ಮಾಡಿದ ಆರೋಪಿಗಳನ್ನು ರಾಮನಗರ ಜೈಲಿಗೆ ವರ್ಗಾವಣೆ ಮಾಡಿದ್ದಕ್ಕೆ ಮಾಜಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ನಿನ್ನೆ ಆತಂಕ ವ್ಯಕ್ತಪಡಿಸಿದ್ದರು. ಅಲ್ಲಿ ಇದುವರೆಗೂ ಒಂದೂ ಕರೊನಾ ಪ್ರಕರಣ ಪತ್ತೆಯಾಗಿಲ್ಲ. ಈಗ ಪಾದರಾಯನಪುರದ ಆರೋಪಿಗಳಲ್ಲಿ ಯಾರಿಗಾದರೂ ಕೊವಿಡ್​-19 ಇದ್ದು, ಅವರನ್ನು ಅಲ್ಲಿಗೆ ಸ್ಥಳಾಂತರ ಮಾಡಿದರೆ ಅಪಾಯ ಆದರೆ ಏನು ಮಾಡುವುದು ಎಂದು ಪ್ರಶ್ನಿಸಿದ್ದರು.

    ಇದೀಗ ಸಂಸದ ಡಿ.ಕೆ.ಸುರೇಶ್​ ರಾಜ್ಯ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ರಾಜ್ಯ ಸರ್ಕಾರ ರಾಜಕೀಯ ದ್ವೇಷಕ್ಕಾಗಿ ಪಾದರಾಯನಪುರ ಆರೋಪಿಗಳನ್ನು ರಾಮನಗರ ಜೈಲಿಗೆ ಸ್ಥಳಾಂತರ ಮಾಡಿದೆ ಎಂದು ಹೇಳಿದ್ದಾರೆ.

    ರಾಮನಗರ ಗ್ರೀನ್​ ಝೋನ್​ನಲ್ಲಿದೆ. ಇದೀಗ ಪಾದರಾಯನಪುರ ಆರೋಪಿಗಳನ್ನೇಕೆ ಇಲ್ಲಿಗೆ ಕಳಿಸಬೇಕಿತ್ತು? ಸರ್ಕಾರ ರಾಮನಗರದ ಜನರನ್ನು ಆತಂಕಕ್ಕೀಡು ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

    ಹಾಗೇ ಮೃತ ಪತ್ರಕರ್ತ ಹನುಮಂತು ಕುಟುಂಬಕ್ಕೆ ರಾಜ್ಯ ಸರ್ಕಾರ 50 ಲಕ್ಷ ರೂಪಾಯಿ ನೀಡಬೇಕು ಎಂದು ಒತ್ತಾಯಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

    ಪಾಕ್‌ ಪ್ರಧಾನಿಯ ನಿದ್ದೆ ಕಸಿದ ಕರೊನಾ- ಸ್ವಯಂ ಕ್ವಾರಂಟೈನ್‌ನಲ್ಲಿ ಇಮ್ರಾನ್‌ ಖಾನ್‌: ವೈರಸ್‌ ಪರೀಕ್ಷೆಯ ವರದಿ ಬರುವವರೆಗೆ ಎದೆಯಲ್ಲಿ ಡವಡವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts