More

    ಡಿ.ಕೆ.ಶಿ. ಪದಗ್ರಹಣ ಸಮಾರಂಭಕ್ಕೆ 150 ಜನ ಮಾತ್ರ ಬರ್ತಾರಂತೆ!

    ಶಿವಮೊಗ್ಗ: ರಾಜಕೀಯ ಪಕ್ಷಗಳ ರಾಜ್ಯ ಮಟ್ಟದ ಸಮಾರಂಭಗಳಲ್ಲಿ ಲಕ್ಷಾಂತರ ಮಂದಿ ಭಾಗವಹಿಸುವುದು ಈವರೆಗೆ ನಡೆದುಬಂದಿರುವ ಅಘೋಷಿತ ಸಂಪ್ರದಾಯ. ಟ್ರಾೃಕ್ಟರ್-ಬಸ್- ಲಾರಿಗಳಲ್ಲಿ ಜನರನ್ನು ಕರೆತಂದು ಸೇರಿಸುವುದೂ ಅನೂಚಾನವಾಗಿ ನಡೆದುಬಂದಿದೆ.

    ಆದರೆ ಜೂ. 7ರಂದು ಬೆಂಗಳೂರಿನಲ್ಲಿ ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುವ ಸಮಾರಂಭದಲ್ಲಿ ಮುಖಂಡರೂ ಸೇರಿ ಕೇವಲ 150 ಕಾರ್ಯಕರ್ತರು ಹಾಜರಿರುತ್ತಾರೆ! ಇದು ಕರೊನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ರೂಪಿಸಿರುವ ನಿಯಮಗಳ ಎಫೆಕ್ಟ್.

    ಇದನ್ನೂ ಓದಿ: ‘ಆ ವೇಳೆ ಕಾಲುಗಳು ಒಂದಕ್ಕೊಂದು ಹೊಂದಿಕೊಂಡಿದ್ದವಾ’ ಎಂದು ಮಹಿಳೆಗೆ ಅಶ್ಲೀಲ ಪ್ರಶ್ನೆ ಕೇಳಿದ್ದ ಜಡ್ಜ್​ ಔಟ್​…

    ಡಿ.ಕೆ.ಶಿವಕುಮಾರ್ ಪದಗ್ರಹಣ ಸಮಾರಂಭದಲ್ಲಿ ಕೇವಲ 150 ಜನ ಮಾತ್ರ ಭಾಗವಹಿಸಲಿದ್ದಾರೆ ಎಂಬುದನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಅವರು ಇಲ್ಲಿ ಸುದ್ದಿಗಾರರಿಗೆ ಖಚಿತಪಡಿಸಿದರು.

    ಉಳಿದಂತೆ, ಈ ಸಮಾರಂಭವನ್ನು ಕಾರ್ಯಕರ್ತರು ಕಣ್ತುಂಬಿಕೊಳ್ಳುವುದಕ್ಕೆ ಅನುವು ಮಾಡಿಕೊಡಲು ರಾಜ್ಯದ 8 ಸಾವಿರ ಸ್ಥಳಗಳಲ್ಲಿ ದೊಡ್ಡ ಪರದೆಗಳಲ್ಲಿ ನೇರಪ್ರಸಾರಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

    ಇದನ್ನೂ ಓದಿ:  ಇಂಗ್ಲೆಂಡ್ ಪ್ರಧಾನಿಯೇ ಕ್ವಾರಂಟೈನ್ ಆಗಿದ್ರು, ಇನ್ನು ಈ ಕಾರ್ಪೊರೇಟರ್ ಯಾವ ಲೆಕ್ಕ?!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts