More

    ಆನ್​ಲೈನ್ ಶಿಕ್ಷಣ ವೈಜ್ಞಾನಿಕವಾಗಿರಲಿ: ಮಾರ್ಗಸೂಚಿ ಅನುಸರಿಸಲು ಸಚಿವರ ಸೂಚನೆ | ವಿಜಯವಾಣಿ ವರದಿ ಪರಿಣಾಮ

    ಬೆಂಗಳೂರು: ಆನ್​ಲೈನ್ ಶಿಕ್ಷಣದ ಬಗ್ಗೆ ಸರ್ಕಾರ ನೀಡಿರುವ ಮಾರ್ಗಸೂಚಿಗಳನ್ನೇ ಅನುಸರಿಸಬೇಕೇ ವಿನಹಃ ಅವೈಜ್ಞಾನಿಕವಾಗಿ ತರಗತಿ ನೀಡುವುದನ್ನು ನಿಲ್ಲಿಸಬೇಕೆಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಖಾಸಗಿ ಶಾಲೆಗಳಿಗೆ ಎಚ್ಚರಿಕೆ ನೀಡಿದ್ದಾರೆ. ಆನ್​ಲೈನ್ ಶಿಕ್ಷಣಕ್ಕಾಗಿ ಪ್ರತಿ ನಿತ್ಯ ಮಕ್ಕಳು ಮೊಬೈಲ್ ಬಳಕೆ ಮಾಡುತ್ತಿರುವುದರಿಂದ ಮಕ್ಕಳ ದೃಷ್ಟಿ ಹೀನತೆಗೆ ಕಾರಣವಾಗಿರುವ ಬಗ್ಗೆ ‘ಇ-ಪಾಠ ಕಣ್ಣಿಗೆ ಕಾಟ’ ಎಂಬ ಶೀರ್ಷಿಕೆಯಲ್ಲಿ ಬುಧವಾರ ‘ವಿಜಯವಾಣಿ’ ವರದಿ ಪ್ರಕಟಿಸಿತ್ತು.

    ವರದಿಯನ್ನು ಗಂಭಿರವಾಗಿ ಪರಿಗಣಿಸಿರುವ ಶಿಕ್ಷಣ ಸಚಿವರು, ಆನ್​ಲೈನ್ ಶಿಕ್ಷಣ ನಡೆಸುತ್ತಿರುವ ಶಾಲೆಗಳ ಅವೈಜ್ಞಾನಿಕ ಕ್ರಮಕ್ಕೆ ಕಡಿವಾಣ ಹಾಕಬೇಕೆಂದು ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಈ ಸಂಬಂಧ ತಕ್ಷಣ ಸುತ್ತೋಲೆ ಹೊರಡಿಸಲು ಆದೇಶಿಸಿದ್ದಾರೆ. ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಿಗೆ ಪತ್ರ ಬರೆದಿರುವ ಸಚಿವರು, ಶಾಲೆಗಳು ತಜ್ಞರ ಸಮಿತಿ ನೀಡಿರುವ ವರದಿಯನ್ವಯ ಆನ್​ಲೈನ್ ಶಿಕ್ಷಣ ನಡೆಸಲು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.

    ಇದನ್ನೂ ಓದಿ: ಪಟಾಕಿ ಚೀಲದ ಮೇಲೇರಿದ ಜೀಪ್ ಬಾನೆತ್ತರ ಚಿಮ್ಮಿದ್ದರಿಂದ ಆರು ಜನಕ್ಕೆ ಗಾಯ

    ಮಾರ್ಗಸೂಚಿಯಲ್ಲಿ ಏನಿದೆ? : 1 ರಿಂದ 5ನೇ ತರಗತಿ ಮಕ್ಕಳಿಗೆ ದಿನ ಬಿಟ್ಟು ದಿನ ಅಥವಾ ವಾರದಲ್ಲಿ ಗರಿಷ್ಠ 3 ದಿನ ಮಾತ್ರ ನಿತ್ಯ 30ರಿಂದ 45 ನಿಮಿಷ ಕಾಲ ಎರಡು ಅವಧಿ ಮೀರದಂತೆ, 6 ರಿಂದ 8ನೇ ತರಗತಿ ಮಕ್ಕಳಿಗೆ ವಾರದಲ್ಲಿ ಐದು ದಿನ ನಿತ್ಯ 30ರಿಂದ 45 ನಿಮಿಷ ಎರಡು ಅವಧಿ ಮೀರದಂತೆ, ಅದೇ ರೀತಿ 9 ಮತ್ತು 10ನೇ ತರಗತಿ ಮಕ್ಕಳಿಗೆ ವಾರದಲ್ಲಿ ಐದು ದಿನ ನಿತ್ಯ 30ರಿಂದ 45 ನಿಮಿಷಗಳ ಕಾಲ 4 ಅವಧಿ ಮೀರದಂತೆ ಆನ್​ಲೈನ್ ಶಿಕ್ಷಣ ನಡೆಸಬೇಕೆಂದು ಇಲಾಖೆ ಮಾರ್ಗಸೂಚಿ ಹೊರಡಿಸಿದೆ. ಆದರೆ, ಹಲವು ಶಾಲೆಗಳು ಮಾರ್ಗಸೂಚಿ ಅನುಸರಿಸದೆ ತಮಗೆ ತೋಚಿದಂತೆ ಆನ್​ಲೈನ್ ಶಿಕ್ಷಣ ನಡೆಸುತ್ತಿವೆ. ಇದು ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಅದರಲ್ಲೂ ಪ್ರಮುಖವಾಗಿ ಮಕ್ಕಳ ಕಣ್ಣುಗಳಿಗೆ ಹೆಚ್ಚಾಗಿ ತೊಂದರೆಯಾಗುತ್ತಿದೆ ಎಂದು ಪಾಲಕರು ಮತ್ತು ನೇತ್ರ ತಜ್ಞರು ಮಾಧ್ಯಮಗಳಿಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು.

    ವಾರದೊಳಗೆ ಶಿಕ್ಷಕರ, ಉಪನ್ಯಾಸಕರ ವರ್ಗಾವಣೆ ಕೂಡಲೇ ಆರಂಭಿಸುವಂತೆ ಸಿಎಂ ತಾಕೀತು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts