More

    VIDEO | ನಾಯಿಯನ್ನು ಗೇಟ್‌ಗೆ ನೇತು ಹಾಕಿ ಕೊಂದ ಶ್ವಾನ ತರಬೇತುದಾರ ಅರೆಸ್ಟ್​​

    ಮುಂಬೈ: ಸಾಕು ನಾಯಿಗಳಿಗೆ ತರಬೇತಿ ನೀಡುವ ಶ್ವಾನ ತರಬೇತುದಾರರು ನಾಯಿಯನ್ನು ಬರ್ಬರವಾಗಿ ಕೊಂದಿದ್ದಾರೆ. ಮಧ್ಯಪ್ರದೇಶದ ರಾಜಧಾನಿ ಭೋಪಾಲ್ ನಲ್ಲಿ ಈ ಘಟನೆ ನಡೆದಿದೆ. ಈ ವಿಡಿಯೋ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​​ ಆಗಿದೆ.

    ಮಧ್ಯಪ್ರದೇಶದ ಭೋಪಾಲ್‌ನ ಶಹಜಾಪುರದ ಉದ್ಯಮಿ ನಿಖಿಲ್ ಜೈಸ್ವಾಲ್ ಎರಡು ವರ್ಷಗಳ ಹಿಂದೆ ಪಾಕಿಸ್ತಾನಿ ಬುಲ್ಲಿ ನಾಯಿಯನ್ನು ಖರೀದಿಸಿದ್ದಾರೆ. ಈ ವರ್ಷದ ಮೇ ತಿಂಗಳಲ್ಲಿ ಅವರು ತರಬೇತಿಗಾಗಿ ಭೋಪಾಲ್‌ನ ಆಲ್ಫಾ ಡಾಗ್ ಟ್ರೈನಿಂಗ್ ಮತ್ತು ಬೋರ್ಡಿಂಗ್ ಸೆಂಟರ್‌ನಲ್ಲಿ ನಾಯಿಯನ್ನು ಬಿಟ್ಟಿದ್ದರು. ನಾಲ್ಕು ತಿಂಗಳ ತರಬೇತಿಗೆ ತಿಂಗಳಿಗೆ ರೂ.13 ಸಾವಿರ ಶುಲ್ಕವನ್ನೂ ಪಾವತಿಸಿದ್ದಾರೆ.

    ನಾಯಿಯ ಮಾಲೀಕ ನಿಖಿಲ್ ಜೈಸ್ವಾಲ್ ಅವರು, ಅಕ್ಟೋಬರ್ 9ರಂದು ತರಬೇತಿ ಕೇಂದ್ರದ ತರಬೇತುದಾರ ರವಿ ಕುಶ್ವಾಹಗೆ ಕರೆ ಮಾಡಿದ್ದರು. ನಾಯಿ  ತರಬೇತಿ ಪಡೆದಿದೆಯೇ? ಎಂದು ಕೇಳಿದರು. ಆದರೆ ನಿಮ್ಮ ನಾಯಿ ಅನಾರೋಗ್ಯದಿಂದ ಸಾವನ್ನಪ್ಪಿದೆ ಎಂದು ತರಬೇತುದಾರ ರವಿ ದೂರವಾಣಿಯಲ್ಲಿ ತಿಳಿಸಿದ್ದಾರೆ. ನಾಯಿಯ ಮಾಲೀಕ ನಿಖಿಲ್ ಅನುಮಾನಗೊಂಡು ಪೊಲೀಸರಿಗೆ ದೂರು ನೀಡಿದ್ದಾರೆ.

    ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ತರಬೇತಿ ಕೇಂದ್ರದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದು, ಅಸಲಿ ವಿಷಯ ಹೊರಬಿದ್ದಿದೆ.
    ಸಿಸಿಟಿವಿ ದೃಶ್ಯಾವಳಿಯಲ್ಲಿ, ತರಬೇತುದಾರ ರವಿ ಕುಶ್ವಾಹಾ ಅವರೊಂದಿಗೆ ತಿವಾರಿ ಮತ್ತು ದಾಸ್ ಎಂಬ ಮೂವರು ವ್ಯಕ್ತಿಗಳು ನಾಯಿಯನ್ನು ಗೇಟ್‌ಗೆ ಕಟ್ಟಿದ್ದಾರೆ. ನಾಯಿ ಸುಮಾರು 10 ನಿಮಿಷಗಳ ಕಾಲ ಜೀವನ್ಮರಣ ಹೋರಾಟ ನಡೆಸಿ ಉಸಿರುಗಟ್ಟಿ ಸಾವನ್ನಪ್ಪಿದೆ.

    ಶ್ವಾನ ತರಬೇತುದಾರ ರವಿ ಕುಶ್ವಾಹ ಜೊತೆಗೆ ಅಲ್ಲಿ ಕೆಲಸ ಮಾಡುತ್ತಿದ್ದ ನೇಹಾ ತಿವಾರಿ ಮತ್ತು ತರುಣ್ ದಾಸ್ ಅವರನ್ನು ಬಂಧಿಸಲಾಯಿತು. ಈ ವಿಡಿಯೋ ಕ್ಲಿಪ್ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ತರಬೇತಿಯ ಭಾಗವಾಗಿ ನಾಯಿಯನ್ನು ಗೇಟ್‌ಗೆ ನೇತುಹಾಕಿದ್ದೇವೆ. ಆದರೆ ಹಗ್ಗವು ನಾಯಿಯ ಕುತ್ತಿಗೆಗೆ ಬಿಗಿಯಾಯಿತು. ಆದರೆ ಅದನ್ನು ಉಳಿಸಲು ಪಶುವೈದ್ಯರ ಸಲಹೆ ಪಡೆದರೂ ಬದುಕಲಿಲ್ಲ ಎಂದು ಪೊಲೀಸರ ಎದು ಆರೋಪಿಗಳು ಹೇಳಿದ್ದಾರೆ.

    ಅಂಗವಿಕಲೆಯನ್ನು ಮೆಟ್ಟಿಲು ಮೂಲಕ ಕರಿಸಿಕೊಂಡ ರಿಜಿಸ್ಟ್ರಾರ್ ಕಚೇರಿ ಸಿಬ್ಬಂದಿ: ಮದುವೆಯಾಗಲು ಬಂದಿದ್ದ ಮಹಿಳೆ ಆರೋಪ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts