ಬೆಂಗಳೂರು: ಬಿಗ್ಬಾಸ್ 10ನೇ ಆವೃತ್ತಿಯು ನಾನಾ ಕಾರಣಗಳಿಗೆ ಎಲ್ಲರ ಗಮನ ಸೆಳೆಯುತ್ತಿದೆ. ಈ ಬಾರಿ ಮನರಂಜನೆಗಿಂತ ಬರೀ ಕಿತ್ತಾಟವೇ ಇದೆ. ಈ ಕಾರಣಕ್ಕೆ ಪ್ರಸಕ್ತ ಆವೃತ್ತಿಯ ಬಿಗ್ಬಾಸ್ ತುಂಬಾ ಚರ್ಚೆಯ ವಿಷಯವಾಗಿದೆ. ಸಣ್ಣ ಸಣ್ಣ ವಿಚಾರಕ್ಕೂ ಕಿತ್ತಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಅಜ್ಜಿಯೊಬ್ಬರು ವಿಜಯವಾಣಿ ಜತೆ ಮಾತನಾಡಿದ್ದಾರೆ.
ಬಿಗ್ಬಾಸ್ ಅನ್ನು ನಾವು ಪ್ರತಿನಿತ್ಯ ವೀಕ್ಷಣೆ ಮಾಡುತ್ತಿದ್ದೇವೆ. ಅದರಲ್ಲಿ ಹುಡುಗುರು ಮತ್ತು ಹುಡುಗಿಯರು ಏಕೆ ಜಗಳ ಮಾಡುತ್ತಿದ್ದಾರೆ ಎಂಬುದು ನನಗೆ ಗೊತ್ತಾಗುತ್ತಿಲ್ಲ. ಸುದೀಪ್, ಅಷ್ಟರಮಟ್ಟಿಗೆ ಬುದ್ಧಿ ಮಾತು ಹೇಳಿದರೂ ಮತ್ತೆ ಕಿತ್ತಾಡುತ್ತಿದ್ದಾರೆ. ಪ್ರೀತಿ ವಿಚಾರವಾಗಿ ಕಿತ್ತಾಡೋದು ಮತ್ತು ಸಣ್ಣ ಸಣ್ಣ ವಿಷಯಕ್ಕೂ ಜಗಳ ಆಡೋದೇ ಆಗಿದೆ. ಈ ಬಗ್ಗೆ ಸುದೀಪ್ ಅವರು ಪ್ರಶ್ನೆ ಮಾಡಿದಾಗ ಅವರಿಂದ ಸಮರ್ಥನೆ ನೀಡಲು ಆಗುತ್ತಿಲ್ಲ. ಅವರ ವಿರುದ್ಧ ಇವರು, ಇವರ ವಿರುದ್ಧ ಅವರು ಆರೋಪ ಮಾಡೋದೇ ಆಗಿದೆ ಎಂದರು.
ಅಲ್ಲೆಲ್ಲ ಲವ್ ಮಾಡಬಾರದು ಪ್ರೀತಿ ಏನಿದರೂ ಹೊರಗಡೆ ಮಾಡಿಕೊಳ್ಳಬೇಕು. ಬಿಗ್ಬಾಸ್ ಮನೆಯಲ್ಲಿ ಜಗಳ ಎಲ್ಲ ಮಾಡಬಾರದು. ಸುದೀಪ್ ಅವರು ಹೇಳುವುದನ್ನು ಕೇಳಬೇಕು ಎಂದು ಬಿಗ್ಬಾಸ್ ಸ್ಪರ್ಧಿಗಳಿಗೆ ಅಜ್ಜಿ ಬುದ್ಧಿಮಾತು ಹೇಳಿದರು.
ಸುದೀಪ್ ಅವರನ್ನು ಹೊಗಳಿದ ಅಜ್ಜಿ, ಸುದೀಪ್ ಅಂದರೆ ನನಗೆ ಮೊದಲಿನಿಂದಲೂ ತುಂಬಾ ಇಷ್ಟ. ಬಿಗ್ಬಾಸ್ ಮೊದಲ ಸೀಸನ್ನಿಂದಲೂ ಅವರು ತುಂಬಾ ಇಷ್ಟವಾಗಿದ್ದಾರೆ. ಸುದೀಪ್ ಅವರ ಎತ್ತರ, ಅವರ ಧ್ವನಿ, ಅವರು ಮಾತನಾಡುವ ರೀತಿ ತುಂಬಾ ಇಷ್ಟವಾಗುತ್ತದೆ. ಮೈ ಆಟೋಗ್ರಾಫ್ ಚಿತ್ರದ ಸವಿ ಸವಿ ನೆನಪು ಹಾಡು ತುಂಬಾ ಇಷ್ಟ. ಅವರೊಬ್ಬ ಒಳ್ಳೆಯ ಮನಷ್ಯ ಎಂದು ಕೊಂಡಾಡಿದರು.
ವಿನಯ್ಗೆ ಮನುಷ್ಯತ್ವ ಇಲ್ಲ ಅನ್ನೋದಾದ್ರೆ ಇವರು ಮಾಡಿದ್ದು ಸರಿನಾ? ಸಂಗೀತಾ ವಿರುದ್ಧವೂ ಆಕ್ರೋಶ!