More

    ಬಿಗ್​ಬಾಸ್​ ಶೋ ಬಗ್ಗೆ ಈ ಅಜ್ಜಿ ಹಾಡಿದ ಮಾತುಗಳನ್ನು ಕೇಳಿದ್ರೆ ನೀವು ಫಿದಾ ಆಗೋದು ಗ್ಯಾರೆಂಟಿ!

    ಬೆಂಗಳೂರು: ಬಿಗ್​ಬಾಸ್ 10ನೇ ಆವೃತ್ತಿಯು ನಾನಾ ಕಾರಣಗಳಿಗೆ ಎಲ್ಲರ ಗಮನ ಸೆಳೆಯುತ್ತಿದೆ. ಈ ಬಾರಿ ಮನರಂಜನೆಗಿಂತ ಬರೀ ಕಿತ್ತಾಟವೇ ಇದೆ. ಈ ಕಾರಣಕ್ಕೆ ಪ್ರಸಕ್ತ ಆವೃತ್ತಿಯ ಬಿಗ್​ಬಾಸ್​ ತುಂಬಾ ಚರ್ಚೆಯ ವಿಷಯವಾಗಿದೆ. ಸಣ್ಣ ಸಣ್ಣ ವಿಚಾರಕ್ಕೂ ಕಿತ್ತಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಅಜ್ಜಿಯೊಬ್ಬರು ವಿಜಯವಾಣಿ ಜತೆ ಮಾತನಾಡಿದ್ದಾರೆ.

    ಬಿಗ್​ಬಾಸ್​ ಅನ್ನು ನಾವು ಪ್ರತಿನಿತ್ಯ ವೀಕ್ಷಣೆ ಮಾಡುತ್ತಿದ್ದೇವೆ. ಅದರಲ್ಲಿ ಹುಡುಗುರು ಮತ್ತು ಹುಡುಗಿಯರು ಏಕೆ ಜಗಳ ಮಾಡುತ್ತಿದ್ದಾರೆ ಎಂಬುದು ನನಗೆ ಗೊತ್ತಾಗುತ್ತಿಲ್ಲ. ಸುದೀಪ್,​ ಅಷ್ಟರಮಟ್ಟಿಗೆ ಬುದ್ಧಿ ಮಾತು ಹೇಳಿದರೂ ಮತ್ತೆ ಕಿತ್ತಾಡುತ್ತಿದ್ದಾರೆ. ಪ್ರೀತಿ​ ವಿಚಾರವಾಗಿ ಕಿತ್ತಾಡೋದು ಮತ್ತು ಸಣ್ಣ ಸಣ್ಣ ವಿಷಯಕ್ಕೂ ಜಗಳ ಆಡೋದೇ ಆಗಿದೆ. ಈ ಬಗ್ಗೆ ಸುದೀಪ್​ ಅವರು ಪ್ರಶ್ನೆ ಮಾಡಿದಾಗ ಅವರಿಂದ ಸಮರ್ಥನೆ ನೀಡಲು ಆಗುತ್ತಿಲ್ಲ. ಅವರ ವಿರುದ್ಧ ಇವರು, ಇವರ ವಿರುದ್ಧ ಅವರು ಆರೋಪ ಮಾಡೋದೇ ಆಗಿದೆ ಎಂದರು.

    ಅಲ್ಲೆಲ್ಲ ಲವ್​ ಮಾಡಬಾರದು ಪ್ರೀತಿ ಏನಿದರೂ ಹೊರಗಡೆ ಮಾಡಿಕೊಳ್ಳಬೇಕು. ಬಿಗ್​ಬಾಸ್​ ಮನೆಯಲ್ಲಿ ಜಗಳ ಎಲ್ಲ ಮಾಡಬಾರದು. ಸುದೀಪ್​ ಅವರು ಹೇಳುವುದನ್ನು ಕೇಳಬೇಕು ಎಂದು ಬಿಗ್​ಬಾಸ್​ ಸ್ಪರ್ಧಿಗಳಿಗೆ ಅಜ್ಜಿ ಬುದ್ಧಿಮಾತು ಹೇಳಿದರು.

    ಸುದೀಪ್ ಅವರನ್ನು ಹೊಗಳಿದ ಅಜ್ಜಿ, ಸುದೀಪ್​​ ಅಂದರೆ ನನಗೆ ಮೊದಲಿನಿಂದಲೂ ತುಂಬಾ ಇಷ್ಟ. ಬಿಗ್​ಬಾಸ್​ ಮೊದಲ ಸೀಸನ್​ನಿಂದಲೂ ಅವರು ತುಂಬಾ ಇಷ್ಟವಾಗಿದ್ದಾರೆ. ಸುದೀಪ್​ ಅವರ ಎತ್ತರ, ಅವರ ಧ್ವನಿ, ಅವರು ಮಾತನಾಡುವ ರೀತಿ ತುಂಬಾ ಇಷ್ಟವಾಗುತ್ತದೆ. ಮೈ ಆಟೋಗ್ರಾಫ್​ ಚಿತ್ರದ ಸವಿ ಸವಿ ನೆನಪು ಹಾಡು ತುಂಬಾ ಇಷ್ಟ. ಅವರೊಬ್ಬ ಒಳ್ಳೆಯ ಮನಷ್ಯ ಎಂದು ಕೊಂಡಾಡಿದರು.

    ವಿನಯ್​ಗೆ ಮನುಷ್ಯತ್ವ ಇಲ್ಲ ಅನ್ನೋದಾದ್ರೆ ಇವರು ಮಾಡಿದ್ದು ಸರಿನಾ? ಸಂಗೀತಾ ವಿರುದ್ಧವೂ ಆಕ್ರೋಶ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts