ಹಾಸನ: ಶಾಲೆಯಲ್ಲಿ ಹಿಜಾಬ್ ಧರಿಸಿ ತರಗತಿ ಹಾಜರಾಗಲು ಅವಕಾಶ ಕೊಡಬೇಕು ಎಂದು ಆರು ಜನ ಮುಸ್ಲಿಂ ವಿದ್ಯಾರ್ಥಿನಿಯರು ಉಡುಪಿಯಲ್ಲಿ ಹುಟ್ಟುಹಾಕಿದ ಉಡುಪಿನ ವಿವಾದ ಬಳಿಕ ಹಿಜಾಬ್-ಕೇಸರಿ ಶಾಲು ಸಂಘರ್ಷವಾಗಿ ಮಾರ್ಪಟಿದ್ದು ಎಲ್ಲರಿಗೂ ಗೊತ್ತಿರುವಂಥದ್ದೇ.
ಹೀಗೆ ಉಂಟಾದ ವಿವಾದ ನಂತರ ದೇವಸ್ಥಾನಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ಕೊಡಬಾರದು, ಅವರಿಂದ ಹಿಂದುಗಳು ಏನನ್ನೂ ಖರೀದಿಸಬಾರದು ಎಂಬುದು ಆಂದೋಲನ ರೀತಿ ನಡೆಯಲಾರಂಭಿಸಿದ್ದು, ಅದು ಮೊನ್ನೆಮೊನ್ನೆಯಷ್ಟೇ ಹಲಾಲ್-ಜಟ್ಕಾ ಸಂಘರ್ಷವಾಗಿ ಬದಲಾಗಿದೆ.
ಇದು ಇನ್ನೂ ಮುಂದುವರಿದಿದ್ದು, ಈಗಿನ ಸೀಸನ್ಗೆ ತಕ್ಕಂತೆ ಮಾವಿನ ಹಣ್ಣಿಗೂ ತಲುಪಿದೆ. ಮಾವಿನ ಹಣ್ಣಿನ ಹೋಲ್ಸೇಲ್ ಮಾರ್ಕೆಟ್ ಹಿಂದುಗಳ ಪಾಲಾಗಬೇಕು ಎಂಬ ಒತ್ತಾಯ ಕೇಳಿಬಂದಿದೆ. ಹಾಸನದ ಕೆಲವೆಡೆ ವಾಟ್ಸ್ಆ್ಯಪ್ ಗ್ರೂಪ್ಗಳಲ್ಲಿ ಇಂಥ ಸಂದೇಶಗಳು ಫಾರ್ವರ್ಡ್ ಆಗಿವೆ ಮತ್ತು ಸಾಮಾಜಿಕ ಜಾಲತಾಣಗಳಲ್ಲೂ ಇವು ಪೋಸ್ಟ್ ಆಗಿವೆ. ಮಾವಿನ ಹಣ್ಣಿನ ಮಾರುಕಟ್ಟೆ ನಮ್ಮದಾಗಬೇಕು, ಹಿಂದು ಯುವಕರೇ ಮುಂದೆ ಬನ್ನಿ ಎಂಬಂಥ ಸಂದೇಶಗಳು ಪ್ರಸಾರವಾಗುತ್ತಿವೆ.
ಭೀಕರ ಅಪಘಾತ, ಬಿಜೆಪಿ ಮುಖಂಡನ ಕಾಲು ತುಂಡು: ಇನ್ನಿಬ್ಬರ ಪರಿಸ್ಥಿತಿ ಚಿಂತಾಜನಕ, ಒಟ್ಟು ಐವರಿಗೆ ಗಾಯ..
ವಡೆಯರ್-ಪುರಾಣಿಕ್ ಜೋಡಿಯ ಚೊಚ್ಚಲ ಸಾಹಸ ‘ಡೊಳ್ಳು’ ಚಿತ್ರಕ್ಕೆ ಮತ್ತೆರಡು ಪ್ರಶಸ್ತಿ